Friday, July 10, 2009

ಭಾರತೀಯ ದಲಿತ್ ಕಾಂಗ್ರೆಸ್ಸಿನ ಪ್ರತಿಭಟನೆ/Dalith Congress Protest

ಕಾಸರಗೋಡು: ಪರಿಶಿಷ್ಟ ಜಾತಿ-ವರ್ಗದ ವಿರುದ್ಧ ಕೇರಳ ಸರ್ಕಾರದ ಅವಗಣನೆಯನ್ನು ಖಂಡಿಸಿ ಭಾರತೀಯ ದಲಿತ್ ಕಾಂಗ್ರೆಸ್ಸಿನ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇದೇ 13ರಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಮ್ಮ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು, ಇತರ ಸಮುದಾಯದ ದೈವ ಪಾತ್ರಿಗಳಿಗೆ ನೀಡುವ ಪಿಂಚಣಿಯನ್ನು ತಮ್ಮ ಸಮುದಾಯಕ್ಕೂ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯನ್ನು ಭಾರತೀಯ ದಲಿತ್ ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷ ಕೆ.ವಿದ್ಯಾಧರನ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಪಿ.ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪಿ.ರಾಮಚಂದ್ರನ್, ರಾಜ್ಯ ಕಾರ್ಯದಶರ್ಿ ಟಿ.ಪದ್ಮನಾಭನ್ ಮಾಸ್ಟರ್, ಉಪಾಧ್ಯಕ್ಷ ಇ.ಕುಞ್ಞಿಕೃಷ್ಣನ್, ಐತ್ತಪ್ಪ ಅಮ್ಮಂಗೋಡು, ಪಿ.ಅಶೋಕನ್, ಕುಸುಮ ಚೇನೆಕ್ಕೋಡು, ಕೆ.ಶಂಕರನ್ ಹಾಜರಿದ್ದರು.

ದಲಿತ ಫೆಡರೇಶನ್ ಜಿಲ್ಲಾ ಸಮ್ಮೇಳನ
ಕಾಸರಗೋಡು: ಪರಿಶಿಷ್ಟ ಜಾತಿ-ವರ್ಗ ಅಭಿವೃದ್ಧಿ ಖಾತೆಯ ಹೊಣೆಯನ್ನು ಸಚಿವ ಎ.ಕೆ.ಬಾಲನ್ ಅವರಿಂದ ಮುಖ್ಯಮಂತ್ರಿ ವಾಪಾಸ್ ಪಡೆಯಬೇಕು ಎಂದು ಕೇರಳ ದಲಿತ ಫೆಡರೇಶನ್(ಕೆ.ಡಿ.ಎಫ್) ರಾಜ್ಯಾಧ್ಯಕ್ಷ ಪಿ. ರಾಮಚಂದ್ರನ್ ಆಗ್ರಹಿಸಿದ್ದಾರೆ.
ಇಲ್ಲಿಗೆ ಸಮೀಪದ ವಿದ್ಯಾನಗರದಲ್ಲಿ ಕೇರಳ ದಲಿತ ಫೆಡರೇಶನ್ನ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಇ.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಆನಂದ ಮವ್ವಾರ್, ಪಿ.ಕೆ.ರಾಧಾ, ಎಸ್.ಪಿ.ಮಂಜು, ಪಿ.ರಾಘವನ್, ಕೆ.ಕುಞ್ಞಿಕೃಷ್ಣನ್, ಎಸ್.ಅನಿತಾ, ಪ್ರದೀಪನ್, ದಾಮೋದರ್, ಕೆ.ಚಂದ್ರನ್ ಹಾಜರಿದ್ದರು.


ನಾಳೆ ಪಿಂಚಣಿದಾರರ ಸಮಾವೇಶ
ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘಟನೆಯ ಮಧೂರು ಪಂಚಾಯ್ತಿ ಘಟಕದ ವಿಶೇಷ ಸಮಾವೇಶ ಇದೇ 12ರಂದು ಬೆಳಗ್ಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಲಿದೆ.


ಮುಜುಂಗಾವು ಕ್ಷೇತ್ರದಲ್ಲಿ 16ರಂದು ವೈದಿಕ ಕಾರ್ಯಕ್ರಮಗಳು
ಕಾಸರಗೋಡು: ಕುಂಬಳೆ ಸಮೀಪದ ಮುಜುಂಗಾವು ಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲಿ ಸಂಕ್ರಮಣದ ಪ್ರಯುಕ್ತ ಇದೇ 16ರಂದು ವೈದಿಕ ಕಾರ್ಯಕ್ರಮಗಳು ಜರುಗಲಿದೆ.
ಅಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, 7.30ಕ್ಕೆ ಉಷಾಪೂಜೆ, 8.30ಕ್ಕೆ ವಿವಿಧ ಅಭಿಷೇಕ, 10.30ಕ್ಕೆ ಸೇವಾ ಸಮಿತಿಯ ಸಭೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, 7ಕ್ಕೆ ಮಹಾಪೂಜೆ, 7.15ಕ್ಕೆ ತಾಳಮದ್ದಳೆ ನಡೆಯಲಿದೆ.

No comments:

Post a Comment