Monday, July 20, 2009

ರಿಯಾನ ನಾಪತ್ತೆ ಪ್ರಕರಣ: ಪ್ರತಿಭಟನೆ/Raihana-Protest


ಕಾಸರಗೋಡು: ನಿಗೂಢವಾಗಿ ನಾಪತ್ತೆಯಾದ ಚೆಂಗಳ ತೈವಳಪ್ಪು ನಿವಾಸಿ ರಿಯಾನ ಎಂಬ ಬಾಲಕಿಯನ್ನು ಶೀಘ್ರದಲ್ಲಿಯೇ ಪತ್ತೆ ಮಾಡುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಸಿ.ಪಿ.ಎಂ. ಬೆಂಬಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಾಸರಗೋಡು ಹಳೆ ಬಸ್ಸು ನಿಲ್ದಾಣದ ಬಳಿ ನಡೆದ ಪ್ರತಿಭಟನೆಯನ್ನು ಜನವಾದಿ ಮಹಿಳಾ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷೆ ಇ.ಟಿ.ಜಾನಕಿ ಉದ್ಘಾಟಿಸಿದರು. ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಪಿ.ದಿವಾಕರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದಶರ್ಿ ಸಾಬು ಅಬ್ರಹಾಂ, ಎಂ.ಸುಮತಿ, ಎ.ವಿ.ರಮಣಿ, ಕೆ.ಮಹೇಶ್, ಪಿ.ನೂರ್ಜಹಾನ್ ಹಾಜರಿದ್ದರು.
ಎಂ.ಕೆ.ಮನೋಜ್, ಎಂ.ಲಕ್ಷ್ಮೀ, ಕೆ.ರವೀಂದ್ರನ್, ಎಸ್.ಸುನಿಲ್, ಅಜಯನ್ ಪನೆಯಾಲ್, ಟಿ.ಶಿವಪ್ರಸಾದ್ ಪ್ರತಿಭಟನೆಗೆ ನೇತೃತ್ವ ನೀಡಿದರು.

 
ಕುಸಿದು ಬಿದ್ದು ವಿದ್ಯಾಥರ್ಿ ಮೃತ್ಯು
ಕಾಸರಗೋಡು: ಚೀಮೇನಿ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿವಿದ್ಯಾಥರ್ಿನಿ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಪೋತಾವೂರು ನಿವಾಸಿ ಬಾಲಕೃಷ್ಣನ್ ಅವರ ಪುತ್ರಿ ಟಿ.ಪಿ.ಸಂಧ್ಯಾ(14) ಎಂದು ಗುರುತಿಸಲಾಗಿದೆ.
 
 
ರೈಲು ಡಿಕ್ಕಿ ಹೊಡೆದು ಸಾವು
ಕಾಸರಗೋಡು: ಇಲ್ಲಿಗೆ ಸಮೀಪದ ಅಡ್ಕತ್ತಬೈಲು ನಿವಾಸಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಅಡ್ಕತ್ತಬೈಲು ಕುದುರು ನಿವಾಸಿ ಕಮಲ ಎಂಬವರ ಪುತ್ರ ಟಿ.ಗಣೇಶ್ ಶೆಟ್ಟಿ(46) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಮನೆಗೆ ಊಟ ಮಾಡಲು ಹೋದ ಇವರು ಸಂಜೆ ವೇಳೆ ರೈಲ್ವೇ ಹಳಿಯಲ್ಲಿ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.
ಪತ್ನಿ ಪುಷ್ಪಾ ಮತ್ತು ಇಬ್ಬರು ಮಕ್ಕಳಿದ್ದಾರೆ.
 
 
ಬೃಹತ್ ಸಾರಾಯಿ ಘಟಕ ಪತ್ತೆ
ಕಾಸರಗೋಡು: ಮಧೂರು ಸಮೀಪದ ಕೊಲ್ಲಂಗಾನ ನಿವಾಸಿ ಮಾಕರ್ೊಸ್ ರೋಡ್ರಿಗಸ್ ಎಂಬಾತನ ಮನೆಯಲ್ಲಿ ಬೃಹತ್ ಸಾರಾಯಿ ನಿಮರ್ಾಣ ಭೂಗತ ಘಟಕವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮನೆಯ ಪಾಯಿಖಾನೆಯಿಂದ ಭೂಗತ ಹೊಂಡಕ್ಕೆ ಇಳಿಯುವ ದಾರಿ ಮಾಡಲಾಗಿದ್ದು, ಇದರಲ್ಲಿ 75 ಲೀಟರ್ನ 5 ಶೀಸೆಗಳು, ಮೋಟಾರ್ ಪಂಪ್, ಅಲ್ಯುಮಿನಿಯಂ ಪಾತ್ರೆಗಳನ್ನು ಪೊಲೀಸರು ವಶಪಡಿಸಿದ್ದಾರೆ. ಆರೋಪಿ ಹಲವು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶನಿವಾರ ಸಂಜೆ ಆರೋಪಿ ರೋಡ್ರಿಗಸ್ನ ಪತ್ನಿ ಮತ್ತು 13 ದಿನದ ಹಸುಳೆ ಮನೆಯ ಬಾವಿಗೆ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನು ಹತ್ತಿದ ಪೋಲಿಸರು ರೋಡ್ರಿಗಸ್ನ ಅಕ್ರಮ ವ್ಯವಹಾರವನ್ನು ಬಯಲಿಗೆ ಎಳೆದಿದ್ದಾರೆ. ಈತನ ಸಾರಾಯಿ ದಂಧೆ ಮತ್ತು ಕಿರುಕುಳ ತಾಳಲಾರದೆ ಪತ್ನಿ ಲವೀನಾ ಜ್ಯೋತಿ ಡಿ'ಸೋಜಾ(26) ತನ್ನ ಹಸುಗೂಸಿನೊಂದಿಗೆ ಆತ್ಮಹತ್ಯೆ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ವಿವಾಹ ವಂಚಕನ ಸೆರೆ
ಕಾಸರಗೋಡು: ಮಡಿಕೇರಿಯಲ್ಲಿ ವಿವಾಹವಾಗಿ ತಲೆಮರೆಸಿಕೊಂಡ ವಂಚಕನನ್ನು ಭಾನುವಾರ ಪತ್ನಿಯ ಸಂಬಂಧಿಕರೇ ಕೈಯಾರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.
ಉಪ್ಪಳ ಸಮೀಪದ ಪಚ್ಚಿಲಂಪಾರೆ ನಿವಾಸಿ ಮೊಹಮ್ಮದ್ ಹನೀಫ(34) ಎಂಬಾತನೇ ಆರೋಪಿ. ಈತ ಮಡಿಕೇರಿಯಲ್ಲಿ ವಿವಾಹವಾಗಿ ಪತ್ನಿ ಮನೆಯಲ್ಲಿ ಕೊಂಚ ದಿನಗಳ ವರೆಗೆ ಇದ್ದ ಎಂದು ವಿವಾಹಿತ ಯುವತಿಯ ಸಂಬಂಧಿಕರು ಇಳಿಸಿದ್ದಾರೆ. ಆರೋಪಿಗೆ ಬದಿಯಡ್ಕದಲ್ಲಿ ಪತ್ನಿ ಮತ್ತು ಮೂವರು ಮಕ್ಕಳಿದ್ದು ಸುಳ್ಳು ಹೇಳಿ ಮಡಿಕೇರಿಯಲ್ಲಿ ವಿವಾಹವಾಗಿದ್ದ ಎಂದು ದೂರಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಮಡಿಕೇರಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ನಗರ ಪೊಲೀಸರು ತಿಳಿಸಿದ್ದಾರೆ.
  

19 ಪವನ್ ಚಿನ್ನಾಭರಣ ಕಳವು: ಸೆರೆ
ಮಂಜೇಶ್ವರ: 19 ಪವನ್ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಪ್ರಭಾಕರ ನೋಂಡಾ(37) ಎಂಬಾತನೇ ಆರೋಪಿ. ಈತ ಉಪ್ಪಳ ಸಮೀಪದ ಪೈವಳಿಕೆಯ ಸೈನಬಾ ಎಂಬವರ ಮನೆಯಿಂದ ಕಳೆದ ತಿಂಗಳು ಕಳವು ಮಾಡಿದ್ದ.

 
ಕುಸಿದು ಬಿದ್ದು ಸಾವು
ಮಂಜೇಶ್ವರ: ಪುತ್ರನ ಗೃಹ ಪ್ರವೇಶಕ್ಕೆ ಬಂದಿದ್ದ ಇಲ್ಲಿನ ಕಡಂಬಾರು ಅರಿಮಲೆ ನಿವಾಸಿ ಎಂ.ಕೆ.ಇಬ್ರಾಹಿಂ(68) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಉಪ್ಪಳದಲ್ಲಿ ತಮ್ಮ ಪುತ್ರನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಉಪ್ಪಳ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗಿಲ್ಲ. 8 ಮಕ್ಕಳಿದ್ದಾರೆ.
 

ಮಂಗಳವಾರ ಹಲಸು ಸಂಸ್ಕರಣೆ ಪ್ರಾತ್ಯಕ್ಷಿಕೆ
ಕಾಸರಗೋಡು: ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿರುವ ಹಲಸು ಮತ್ತು ಅದರ ಉತ್ಪನ್ನಗಳ ಬಗ್ಗೆ ನಾಳೆ(ಮಂಗಳವಾರ) ಎಡನಾಡು ಚಿಗುರು ಫಾರ್ಮರ್ಸ್ ಕ್ಲಬ್ ಮತ್ತು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಹಲಸು ಸಂಸ್ಕರಣೆಯ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.
ಸೂರಂಬೈಲು ಶ್ರೀ ಗಣೇಶ ಭಜನಾ ಮಂದಿರದಲ್ಲಿ 2.30ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ಸುಶೀಲಾ ಭಟ್ ಅವರು ಪ್ರಾತ್ಯಕ್ಷಿಕೆ ನೀಡುವರು ಎಂದು ಪ್ರಕಟನೆ ತಿಳಿಸಿದೆ.

 

No comments:

Post a Comment