Thursday, July 23, 2009

ಅಂತರರಾಜ್ಯ ಕುಖ್ಯಾತ ಕಳ್ಳ ಮುತ್ತಪ್ಪ ಯಾನೆ ಸುರೇಶ್.

ಕಾಸರಗೋಡು: ಇಲ್ಲಿನ ಕೊರಕ್ಕೋಡು ಎಂಬಲ್ಲಿ ಮನೆಯೊಂದರಿಂದ ಹಾಡುಹಗಲೇ 40 ಪವನ್ ಚಿನ್ನಾಭರಣ ಸಹಿತ 10,000 ರೂ. ನಗದು ಕಳವುಗೈದ ಅಂತರರಾಜ್ಯ ಕುಖ್ಯಾತ ಕಳ್ಳನನ್ನು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಉಡುಪಿಯ ಬಳೆಗಾರ್ ನಿವಾಸಿ ಮುತ್ತಪ್ಪ ಯಾನೆ ಸುರೇಶ್(27) ಎಂಬಾತನೇ ಆರೋಪಿ. 2008 ಡಿ.4ರಂದು ಕೊರಕ್ಕೋಡಿನ ಹರೀಶ್ ಎಂಬವರ ಮನೆಯಲ್ಲಿ ಈತ ಕಳವು ನಡೆಸಿದ್ದ. ಆರೋಪಿಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
ತನ್ನ 13ನೇ ವಯಸ್ಸಿನಲ್ಲಿ ಸುರತ್ಕಲ್ನಲ್ಲಿ ಕ್ಷೇತ್ರ ಕಳವು ಮೂಲಕ ಕಳ್ಳತನಕ್ಕೆ ಇಳಿದಿದ್ದಾನೆ. 16ನೇ ವಯಸ್ಸಿನಲ್ಲಿ ಮೂಲ್ಕಿಯಲ್ಲಿ ಮಹಿಳೆಯೊಬ್ಬರನ್ನು ಹೊಡೆದು ಕೊಂದು ಆಭರಣ ಅಪಹರಿಸಿದ್ದ. ಹೆಬ್ರಿಯಲ್ಲಿ ಅಧ್ಯಾಪಕರೊಬ್ಬರ ಮನೆಯಿಂದ 2 ಲಕ್ಷ ರೂ.ಗಳ ಚಿನ್ನಾಭರಣಗಳನ್ನು ಕಳವು ನಡೆಸಿದ್ದ. ಮೂಡಬಿದಿರೆಯ ಮನೆಯೊಂದರಿಂದ 1.5 ಲಕ್ಷ ರೂ.ಗಳ ಚಿನ್ನಾಭರಣ ಮತ್ತು 40,000 ರೂ. ನಗದನ್ನು ಕಳವು ಮಾಡಿದ್ದ. ಕುಂದಾಪುರದಲ್ಲಿ ಮನೆಯೊಂದಕ್ಕೆ ನುಗ್ಗಿ 70,000 ರೂ, ಕಾರ್ಕಳದಲ್ಲಿ ಬ್ಯಾಂಕ್ ಉದ್ಯೋಗಿಯ ಮನೆಗೆ ನುಗ್ಗಿ 50,000 ರೂ.ಗಳನ್ನು ಕಳವು ನಡೆಸಿದ್ದಾನೆ ಎಂದು ಕಾಸರಗೋಡು ಸಿ.ಐ. ಟಿ.ಪಿ.ಪ್ರೇಮರಾಜನ್ ತಿಳಿಸಿದ್ದಾರೆ.

 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment