Thursday, July 23, 2009

ಗೆಳೆಯನಿಂದ ಇರಿತ : ಸಾವು

ಕಾಸರಗೋಡು: ಮಾತಿಗೆ ಮಾತು ಬೆಳೆದು ಇರಿತಕ್ಕೊಳಗಾಗಿ ಕಾಮರ್ಿಕನೋರ್ವ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಚೌಕಿಯಲ್ಲಿ ಗುರುವಾರ ನಡೆದಿದೆ.
ಚೌಕಿ ಸಮೀಪದ ಬೆದ್ರಡ್ಕ ನಿವಾಸಿ ಲಕ್ಷ್ಮಣದಾಸ್ ಅವರ ಪುತ್ರ ಕೃಷ್ಣ ಯಾನೆ ಕೃಷ್ಣದಾಸ್(40) ಸಾವನ್ನಪ್ಪಿದ ವ್ಯಕ್ತಿ.
ಪೆರಿಯಡ್ಕ ನಿವಾಸಿ ಚಂದ್ರ ಯಾನೆ ರಾಮಚಂದ್ರ ಮಣಿಯಾಣಿ ಆರೋಪಿ. ಈತನ ತಲೆಗೆ ಬಲವಾದ ಗಾಯ ಆಗಿದ್ದು, ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇವರಿಬ್ಬರು ಗೆಳೆಯರಾಗಿದ್ದು, ಮದ್ಯ ಸೇವಿಸಿದ ಬಳಿಕ ವಾಗ್ವಾದ ನಡೆದು ಕೊಲೆಯಲ್ಲಿ ಪಯರ್ಾವಸಾನವಾಗಿದೆ. ಸ್ಥಳೀಯರ ಮಾಹಿತಿ ಲಭಿಸಿ ಸ್ಥಳಕ್ಕೆ ಧವಿಸಿ ಬಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದರೆ ಕೃಷ್ಣದಾಸ್ ಸಾವನ್ನಪ್ಪಿದ್ದರು. ಉಪ್ಪಿನಂಗಡಿ ನಿವಾಸಿ ಶ್ರೀಮತಿ ಮೃತರ ಪತ್ನಿ.

ಸಕಲೇಶಪುರದ ಯುವಕನ ಶವ ಕುಂಜತ್ತೂರಿನಲ್ಲಿ ಪತ್ತೆ
ಮಂಜೇಶ್ವರ: ಹಾಸನದ ಸಕಲೇಶಪುರ ನಿವಾಸಿ ಯುವಕನೋರ್ವನ ಶವ ಇಲ್ಲಿನ ಕುಂಜತ್ತೂರು ಕಣ್ವತೀರ್ಥ ಕಡಲ ತೀರದಲ್ಲಿ ಪತ್ತೆಯಾಗಿದೆ.
ಸಕಲೇಶಪುರ ನಿವಾಸಿ ಎಸ್.ಎ.ಮೊಯ್ದೀನ್ ಅವರ ಪುತ್ರ ಅಬ್ದುಲ್ ಸಯ್ಯಿದ್(24) ಎಂದು ಗುರುತಿಸಲಾಗಿದೆ.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಬಂಧಿಕರು ಇದೊಂದು ವ್ಯವಸ್ಥಿತವಾದ ಕೊಲೆಯಾಗಿದೆ ಎಂದು ದೂರಿದ್ದಾರೆ. ತಲೆಗೆ ಮಾರಣಾಂತಿಕ ಗಾಯ ಆಗಿರುವುದೇ ಶಂಕೆಗೆ ಕಾರಣ. ಕೊಲ್ಲಿರಾಷ್ಟ್ರಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಯ್ಯಿದ್ ಹಾಸನದಲ್ಲಿ ವಿಸಾ ಏಜೆಂಟರೊಬ್ಬರಿಗೆ 30,000 ರೂ.ಗಳನ್ನು ಪಾವತಿಸಿದ್ದರು. ಮಂಗಳವಾರ 50,000 ರೂ.ಗಳೊಂದಿಗೆ ಮನೆಯಿಂದ ಹೊರಟಿದ್ದ ಈತ ಶವವಾಗಿ ಪತ್ತೆಯಾಗಿದ್ದಾನೆ. ಶವವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದೆ.

 



 
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment