ಕಾಸರಗೋಡು: ಶಬರಿಮಲೆ ತಂತ್ರಿ ಕಂಠರರ್ ಮೋಹನ್ ಎಂಬವರಿಗೆ ಬೆದರಿಕೆ ಒಡ್ಡಿ ನಗ-ನಗದನ್ನು ಅಪಹರಿಸಿದ ಪ್ರಕರಣದಲ್ಲಿ ಕಾಸರಗೋಡು ಸಮೀಪದ ಪುಳ್ಕೂರು ನಿವಾಸಿ ಉಂಬು ಯಾನೆ ಶೆರೀಫ್ ಎಂಬಾತನನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ.
ಪ್ರಕರಣದ 9ನೇ ಆರೋಪಿಯಾಗಿರುವ ಈತ 3 ವರ್ಷಹಳ ಹಿಂದೆ ತಲೆಮರೆಸಿಕೊಂಡಿದ್ದ.
ಪುಳ್ಕೂರಿನ ಮಜೀದ್ ಎಂಬಾತ ಈಗಲೂ ತಲೆಮರೆಸಿಕೊಂಡಿದ್ದಾನೆ.
ರಿಯಾನ ನಾಪತ್ತೆ: ಇಂದು ಪ್ರತಿಭಟನೆ
ಕಾಸರಗೋಡು: ನಾಪತ್ತೆಯಾದ ರಿಯಾನ ಎಂಬ 15ರ ಹರೆಯದ ಬಾಲಕಿಯನ್ನು ಶೀಘ್ರದಲ್ಲಿಯೇ ಪತ್ತೆಹಚ್ಚಬೇಕು ಎಂದು ಸೋಮವಾರ ನಗರದಲ್ಲಿ ಬಹಿರಂಗ ಸಭೆ ನಡೆಯಲಿದೆ.
ಡಿವೈಎಫ್ಐ, ಬಾಲಸಂಘ, ಪ್ರಜಾವಾದಿ ಮಹಿಳಾ ಅಸೋಸಿಯೇಶನ್, ಎಸ್.ಎಫ್.ಐ. ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಕಾಸರಗೋಡು ಹಳೆ ಬಸ್ಸುನಿಲ್ದಾಣ ಬಳಿ ನಡೆಯುವ ಪ್ರತಿಭಟನೆಯನ್ನು ಸಿ.ಪಿ.ಐ. ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್ ಉದ್ಘಾಟಿಸುವರು.
ಮೇ 18ರಂದು ಚೆಂಗಳ ತೈವಳಪ್ಪು ಎಂಬಲ್ಲಿಂದ ಶಾಲೆಗೆ ಹೋದ ರಿಯಾನ ಮರಳಿ ಮನೆಗೆ ಬಂದಿಲ್ಲ.
ಅಮಾನ್ಯ ಚೆಕ್: ಆರೋಪಿಗೆ ಶಿಕ್ಷೆ
ಕಾಸರಗೋಡು: ಅಮಾನ್ಯ ಚೆಕ್ ನೀಡಿ ವಂಚಿಸಿದ ಆರೋಪದಲ್ಲಿ ನಗರದ ಸಿಟಿಲೈನ್ಸ್ ಸಂಸ್ಥೆಯ ಸುನಿದ್ ಎಂಬಾತನಿಗೆ ಕಾಸರಗೋಡು ಪ್ರಥಮ ದಜರ್ೆ ಮೆಜಿಸ್ಟ್ರೇಟರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
10 ದಿನಗಳ ಸಜೆ ಸಹಿತ 2 ಲಕ್ಷ ರೂ. ನಷ್ಟ ಪರಿಹಾರವನ್ನು ದೂರುದಾತ ವಿದ್ಯಾನಗರನಿವಾಸಿ ಸಿ.ಟಿ.ಅಬ್ದುಲ್ ಮುನೀರ್ ಆಲಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಮಂಜೇಶ್ವರ: ಇಲ್ಲಿನ ಉಪ್ಪಳ ಸಮೀಪದ ಕೈಕಂಬ ನಿವಾಸಿ ಅಬ್ದುಲ್ ಸತ್ತಾರ್(78) ನಿಧನರಾದರು.
ಹಲವು ವರ್ಷಗಳ ಕಾಲ ಹಡಗಿನಲ್ಲಿ ನಾವಿಕರಾಗಿ ದುಡಿದಿದ್ದರು. ಪತ್ನಿ ಮೆಹರುನ್ನೀಸಾ ಮತ್ತು 8 ಮಕ್ಕಳಿದ್ದಾರೆ.
ಸುಲೈಖಾ
ಮಂಜೇಶ್ವರ: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇಲ್ಲಿನ ಹೊಸಬೆಟ್ಟು ನಿವಾಸಿ ಸುಲೈಖಾ(51) ಎಂಬವರು ನಿಧನರಾದರು.
ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನಹೊಂದಿದರು.
ಪತಿ ಅಬ್ದುಲ್ ಖಾದರ್ ಮತ್ತು 6 ಮಕ್ಕಳಿದ್ದಾರೆ.
No comments:
Post a Comment