
ಕಾಸರಗೋಡು: ಮಧೂರು ಸಮೀಪದ ಕೊಲ್ಲಂಗಾನದಲ್ಲಿ ಇತ್ತೀಚೆಗೆ ತಾಯಿ ಮತ್ತು ಹಸುಳೆಯ ಆತ್ಮಹತ್ಯೆ ಮತ್ತು ಅಕ್ರಮ ಸಾರಾಯಿ ಘಟಕ ಪ್ರಕರಣದಡಿಯಲ್ಲಿ ಸ್ಥಳೀಯ ನಿವಾಸಿ ಮಾಕರ್ೊಸ್ ರೋಡ್ರಿಗಸ್(36) ಎಂಬಾತನನ್ನು ಮಂಗಳವಾರ ಮಧ್ಯಾಹ್ನ ನಗರ ಪೊಲೀಸರು ಬಂಧಿಸಿದ್ದಾರೆ.ಈತನ ಪತ್ನಿ ಲವೀನಾ ಜ್ಯೋತಿ ಡಿ'ಸೋಜಾ ಮತ್ತು 13 ದಿನದ ಗಂಡು ಮಗು ಮನೆಯ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ನಿಗೂಢತೆಯನ್ನು ಬೇಧಿಸಲು ಹೊರಟ ಪೊಲೀಸರಿಗೆ ಆರೋಪಿ ತನ್ನ ಮನೆಯಲ್ಲಿಯೇ ಬೃಹತ್ ಸಾರಾಯಿ ಘಟಕವನ್ನು ಅಳವಡಸಿಕೊಂಡಿರುವುದು ಪತ್ತೆಯಾಯಿತು. ಆತ್ಮಹತ್ಯೆಗೆ ಪ್ರೇರಣೆ, ಅಕ್ರಮ ಸಾರಾಯಿ ಪ್ರಕರಣದಡಿ ಆರೋಪಿಯ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಮನೆಗೆ ಅಗತ್ಯವಿರುವ ಪಾಯಿಖಾನೆಯಂತೆ ಹೊಂಡ ನಿಮರ್ಿಸಿ ಅದನ್ನುಪೂರ್ಣವಾಗಿ ಭೂಗತ ಸಾರಾಯಿ ಘಟಕವನ್ನಾಗಿ ಬಳಸಿಕೊಂಡಿದ್ದ. ಈ ಬಗ್ಗೆ ಯಾರಿಗೂ ಸಂಶಯ ಬರದಂತೆ ಎಚ್ಚರಿಕೆ ವಹಿಸಿಕೊಂಡಿದ್ದ. ಸಾರಾಯಿ ಸಾಗಾಟ ಪ್ರಕರಣದಲ್ಲಿ ಈತನ ವಿರುದ್ಧ 2 ಮೊಕದ್ದಮೆಗಳಿವೆ. ಹಿಂದೆ ಕೊಲೆ ಪ್ರಕರಣದಲ್ಲಿಯೂ ಈತ ಆರೋಪಿ ಎಂದೂ ಪೊಲೀಸರು ತಿಳಿಸಿದ್ದಾರೆ.ರಿಯಾನ ನಾಪತ್ತೆ ಪ್ರಕರಣಇಂದು ಮುಖ್ಯಮಂತ್ರಿಗೆ ಮನವಿ ಕಾಸರಗೋಡು: ಚೆಂಗಳ ತೈವಳಪ್ಪಿನಿಂದ ಎರಡು ತಿಂಗಳ ಹಿಂದೆ ನಾಪತ್ತೆಯಾದ 9ನೇ ತರಗತಿ ವಿದ್ಯಾಥರ್ಿನಿ ರಿಯಾನಳ ತನಿಖೆಯನ್ನು ಸಕ್ರಿಯಗೊಳಿಸುವಂತೆ ಆಗ್ರಹಿಸಿ ಆಕೆಯ ತಾಯಿ ಫೌಸಿಯಾ ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವರು.ಪ್ರಕರಣವನ್ನು ಬೆಳಕಿಗೆ ತರಬೇಕು ಎಂದು ಜನಪರ ವೇದಿಕೆ ಹೋರಾಟಕ್ಕಿಳಿದಿದ್ದು, ಇದರ ಪರಿಣಾಮ ಪ್ರಕರಣವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವ ಕೆಲಸ ಆರಂಭಗೊಂಡಿದೆ. ಪೊಲೀಸ್ ತನಿಖೆಯ ಬಗ್ಗೆ ಅಸಮಧಾನವಿದ್ದು, ಇದನ್ನು ಕ್ರೈಂ ಬ್ರ್ಯಾಂಚ್ಗೆ ಹಸ್ತಾಂತರಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
ಪೊಲೀಸನ ಕಿಸೆಯಿಂದಲೇ ಕದ್ದ ಕಳ್ಳ : 3 ತಿಂಗಳ ಸಜೆ
ಕಾಸರಗೋಡು: ಪೊಲೀಸನ ಕಿಸೆಯಿಂದಲೇ ಕದ್ದ ಕಳ್ಳನಿಗೆ ನ್ಯಾಯಾಲಯ 3 ತಿಂಗಳ ಸಜೆ ನೀಡಿದೆ. ಮೂಲತಃ ಮಟ್ಟನ್ನೂರು ನಿವಾಸಿಯಾಗಿದ್ದು, ಇದೀಗ ಚೆರ್ವತ್ತೂರಿನ ಪಡನ್ನದಲ್ಲಿ ವಾಸವಿರುವ ಕೆ.ಟಿ.ಕೃಷ್ಣ ಎಂಬಾತನೇ ಕಳ್ಳ. ಹೊಸದುರ್ಗ ಜುಡೀಶಿಯಲ್ ಪ್ರಥಮ ದಜರ್ೆ ಮೆಜಿಸ್ಟ್ರೇಟ್(2) ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈಗ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಟಿ.ವಿ.ನಾರಾಯಣ ಎಂಬವರು ಬಸ್ಸಿನಲ್ಲಿ ಸಂಚರಿಸುವಾಗ ಜೇಬಿನಿಂದ 300 ರೂ.ಗಳನ್ನು ಕದಿಯಲಾಗಿತ್ತು. 2006 ಜೂ.23ರಂದು ಘಟನೆ ನಡೆದಿತ್ತು. ಕದ್ದ 300 ರೂ.ಯನ್ನು ಪೊಲೀಸ್ಗೆ ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ವಿವಾಹದ ಭರವಸೆ ನೀಡಿ ದೌರ್ಜನ್ಯ: ಯುವಕ ಪರಾರಿ
ಕಾಸರಗೋಡು: ಪರಿಶಿಷ್ಟ ಜಾತಿ ಸಮುದಾಯದ ಯುವತಿಗೆ ವಿವಾಹದ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ನಗರ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.ಮಧೂರು ಸಮೀಪದ ಪುಳ್ಕೂರು ನಿವಾಸಿಯಾದ ಯುವತಿಗೆ ನೀಲೇಶ್ವರದ ಸುನಿಲ್ ಎಂಬ ಯುವಕ ದೌರ್ಜನ್ಯ ನೀಡಿದ್ದಾನೆ. ಮೊಬೈಲ್ ಫೋನ್ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದ ಈ ಜೋಡಿ ಸೋಮವಾರ ಕಣ್ಣೂರು ಸಮೀಪದ ಪರಶ್ಶಿನಕಡವಿಗೆ ತೆರಳಿದೆ. ಅಲ್ಲಿ ಸಂಶಯಕ್ಕೆ ಎಡೆಯಾಗದಂತೆ ಮಾಂಗಲ್ಯ ಸರ ಧರಿಸಿ, ಯುವ ಜೋಡಿ ವಸತಿ ಗೃಹದಲ್ಲಿ ತಂಗಿದೆ. ಅಲ್ಲಿ ಯುವಕ ಯುವತಿಯ ಮೇಲೆ ದೌರ್ಜನ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿ ಯುವತಿಯ ತಾಯಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಯುವಕ ಯುವತಿಯನ್ನು ಕಾಸರಗೋಡು ನಗರದಲ್ಲಿ ತೊರೆದು ಪರಾರಿಯಾಗಿದ್ದಾನೆ. ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಚೈನಾ ಹಡಗು: ದಡ ಸೇರುತ್ತಿರುವ ಅವಶೇಷಗಳು
ಮಂಜೇಶ್ವರ: ಮಂಗಳೂರಿನಲ್ಲಿ ಇತ್ತೀಚೆಗೆ ಮುಳುಗಿದ ಚೈನಾ ದೇಶದ ಹಡಗಿನ ಅವಶೇಷಗಳು ಕಾಸರಗೋಡು ತಾಲೂಕಿನ ಶಿರಿಯ, ಉಪ್ಪಳ, ಮುಸೋಡಿ, ಕಣ್ವತೀರ್ಥದಲ್ಲಿ ಪತ್ತೆಯಾಗಿದೆ.ಹಡಗಿನ ಬಿಡಿ ಭಾಗಗಳು ಸಮುದ್ರ ಮೂಲಕ ದಡ ಸೇರುತ್ತಿರುವುದನ್ನು ವೀಕ್ಷಿಸಲು ನೂರಾರು ಜನರು ಬರುತ್ತಿದ್ದಾರೆ. ಕಾರು ಕಳವು ಮಂಜೇಶ್ವರ: ಬಂದ್ಯೋಡು ಸಮೀಪದ ಪಚ್ಚಂಬಳ್ಳ ನಿವಾಸಿ ಸಿ.ಎಂ.ಆಲಿ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ ಮಾರುತ್ತಿ ಓಮ್ನಿ ಕಾರನ್ನು ಸೋಮವಾರ ರಾತ್ರಿ ಅಪಹರಿಸಲಾಗಿದೆ.ಮನೆಯ ಗೇಟು ಮುರಿಯಲಾಗಿದೆ. ಮಂಗಳವಾರ ಬೆಳಗ್ಗೆ ಮನೆಯವರು ಎದ್ದು ನೋಡುವಾಗ ಕಾರು ಮಾಯವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಇಲ್ಲಿನ ಕೊಕ್ಕೆಚಾಲ್ ಎಂಬಲ್ಲಿ ಕಾರನ್ನು ತ್ಯಜಿಸಿರುವುದು ತಿಳಿದುಬಂತು ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ.
ನಿಧನ
ಸಿ.ಎಚ್.ಮುಹಮ್ಮದ್ ಕುಞ್ಞಿ
ಕಾಸರಗೋಡು: ಲೋಕೋಪಯೋಗಿ ಗುತ್ತಿಗೆದಾರ ಚಟ್ಟಂಚಾಲ್ ಸಮೀಪದ ತೆಕ್ಕಿಲ್ ನಿವಾಸಿ ಸಿ.ಎಚ್.ಮುಹಮ್ಮದ್ ಕುಞ್ಞಿ(90) ಮಂಗಳವಾರ ನಿಧನರಾದರು.ದೈಹಿಕವಾಗಿ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಪತ್ನಿ ಆಯಿಷಾ ಮತ್ತು 7 ಮಕ್ಕಳಿದ್ದಾರೆ.
No comments:
Post a Comment