Monday, July 20, 2009

ಜು.26ರಂದು ವ್ಯಾಸ ಸಂಸ್ಮರಣೆ/Vyasa Smarane-On July 26th

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಚನ್ನಪಟ್ಟಣ ಪಲ್ಲವ ಪ್ರಕಾಶನದ ಆಶ್ರಯದಲ್ಲಿ ಇದೇ 26ರಂದು ಕಥೆಗಾರ ಎಂ.ವ್ಯಾಸ ಸಂಸ್ಮರಣಾ ಕಾರ್ಯಕ್ರಮ ಜರುಗಲಿದೆ.
ಅಂದು ಸಂಜೆ 3.30ಕ್ಕೆ ನಗರದ ಬೀರಂತಬೈಲು  ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ವ್ಯಾಸರ `ಕೆಂಡ' ಮತ್ತು `ಮೌನ ಗರ್ಭ' ಕೃತಿಗಳನ್ನು ಲೇಖಕ ಜಿ.ಪಿ.ಬಸವರಾಜು ಬಿಡುಗಡೆಗೊಳಿಸುವರು. ಎಚ್.ರಮೇಶ್ ಕೆದಿಲಾಯ ಮಂಗಳೂರು ಸಂಸ್ಮರಣಾ ಭಾಷಣ ಮಾಡುವರು. ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು.

 
ನಾಶ ನಷ್ಟ ಅವಲೋಕನಕ್ಕೆ ಕೇಂದ್ರ ನಿಯೋಗ: ಮನವಿ
ಕಾಸರಗೋಡು: ಮುಂಗಾರು ಮಳೆಗೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಾದ ನಾಶನಷ್ಟದ ಅವಲೋಕನ ನಡೆಸಿ ನಷ್ಟ ಪರಿಹಾರ ಒದಗಿಸಲು ಕೇಂದ್ರದ ನಿಯೋಗ ಕಳುಹಿಸುವಂತೆ ಸಂಸದ ಪಿ.ಕರುಣಾಕರನ್ ಆಗ್ರಹಿಸಿದ್ದಾರೆ.
ಪ್ರಕೃತಿ ವಿಕೋಪವನ್ನು ಎದುರಿಸಲು ರಾಜ್ಯ ಸಕರ್ಾರ ತುತರ್ು ಪರಿಹಾರ ಕಲ್ಪಿಸಲು ಕೇಂದ್ರ ನೆರವು ನೀಡಬೇಕು ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಸಲ್ಲಿಸಿದ ಫ್ಯಾಕ್ಸ್ ಸಂದೇಶದಲ್ಲಿ ಮನವಿ ಮಾಡಿದ್ದಾರೆ. ಕಾಸರಗೋಡು ಸಹಿತ ಕಣ್ಣೂರು ಮತ್ತು ವಯನಾಡು ಜಿಲ್ಲೆಗೂ ತುತರ್ು ಪರಿಹಾರ ಪ್ಯಾಕೇಜ್ ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ.
 
 
ಉತ್ಸವ ಭತ್ತೆ ನೀಡಲು ಪಿಂಚಣಿದಾರರ ಆಗ್ರಹ
ಕಾಸರಗೋಡು: ಪಿಂಚಣಿದಾರರಿಗೆ ಒಂದು ತಿಂಗಳ ಪಿಂಚಣಿಗೆ ಸಮಾನವಾದ ಉತ್ಸವ ಭತ್ತೆ ನೀಡಬೇಕು, ಕ್ಷೇಮ ನಿಧಿಯನ್ನು ಶೀಘ್ರದಲ್ಲಿಯೇ ವಿತರಿಸಬೇಕು, ಸಮಗ್ರ ಪಿಂಚಣಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆಯ ಮೊಗ್ರಾಲ್ ಪುತ್ತೂರು ಪಂಚಾಯ್ತಿ ಘಟಕ ಆಗ್ರಹಿಸಿದೆ.
ಕೂಡ್ಲು ಕಾವುಗೋಳಿ ಚೌಕಿ ಬಳಿ ಇತ್ತೀಚೆಗೆ ಜರುಗಿದ ಸಮಾವೇಶವನ್ನು ಜಿಲ್ಲಾ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಕೆ.ತ್ಯಾಂಪಣ್ಣ ನಾಕ್ ಅಧ್ಯಕ್ಷತೆ ವಹಿಸಿದ್ದರು.
ಬಿ.ಬಾಲಕೃಷ್ಣ ಅಗ್ಗಿತ್ತಾಯ, ಇ.ಪ್ರಭಾಕರ ಪೊದುವಾಳ್, ಎಂ.ಕುಞ್ಞಿಕಣ್ಣನ್ ನಂಬ್ಯಾರ್, ಕೆ.ಮಹಾಲಿಂಗ ನಾಯಕ್, ಯು.ಶಂಕರ್ ಕೆ, ತ್ಯಾಂಪಣ್ಣ ಶೆಟ್ಟಿ, ವೇದಾವತಿ ಪಂಡಿತ್ ಹಾಜರಿದ್ದರು.
ಕಾರ್ಯದಶರ್ಿ ವೈ.ಐ.ರಾಮಚಂದ್ರನ್ ಸ್ವಾಗತಿಸಿ, ಕೆ.ವಿಶ್ವನಾಥ್ ವಂದಿಸಿದರು.
 
 

No comments:

Post a Comment