Tuesday, July 21, 2009

ಮಳೆಯ ಆರ್ಭಟ: ಜಿಲ್ಲೆಯಲ್ಲಿ 25 ಕೋಟಿ ರೂ.ಗಳ ನಾಶ/Rain

ಕಾಸರಗೋಡು: ಮಳೆ ಮತ್ತು ಪ್ರಕೃತಿ ವಿಕೋಪಕ್ಕೆ ಜಿಲ್ಲೆಯಲ್ಲಿ 25 ಕೋಟಿ ರೂ.ಗಳ ನಾಶ ನಷ್ಟ ಸಂಭವಿಸಿದೆ.
ಕೃಷಿ ಕ್ಷೇತ್ರದಲ್ಲಿ 2,71,43,800 ರೂ. ಮತ್ತು ಮನೆಗಳಿಗೆ ಹಾನಿಯಾಗಿ 56,41,680 ರೂ. ನಷ್ಟ ಆಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ 5,00,60,000 ರೂ., ರಾಷ್ಟ್ರೀಯ ಹೆದ್ದಾರಿ ಕೆಟ್ಟು ಹೋಗಿ 74 ಲಕ್ಷ ರೂ, ಜಲ ಪ್ರಾಧಿಕಾರಕ್ಕೆ 11 ಲಕ್ಷ ರೂ, ನೀರಾವರಿ ಇಲಾಖೆಗೆ 15.12 ಕೋಟಿ ರೂ, ವಿದ್ಯುತ್ ಮಂಡಳಿಗೆ 47.96 ಲಕ್ಷ ರೂ, ಮೀನುಗಾರಿಕಾ ಇಲಾಖೆಗೆ 95,000 ರೂ.ಗಳ ನಷ್ಟ ಅಂದಾಜಿಸಲಾಗಿದೆ.
 
ನೆಹರೂ ಯುವ ಕೇಂದ್ರ
ಕಲಾ-ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ
ಕಾಸರಗೋಡು: ನೆಹರೂ ಯುವ ಕೇಂದ್ರ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಿವಿಧ ಕಲಾ-ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂಪ ರೇಖೆ ರಚಿಸಲಾಗಿದೆ.
ಯೂತ್ ಕ್ಲಬ್ಗಳಿಗೆ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಾಯ ಧನ ವಿತರಿಸಲಾಗುವುದು. ಬ್ಲಾಕ್ ಮಟ್ಟದ ಕ್ರೀಡಾ ಕಾರ್ಯಕ್ರಗಳನ್ನು ಏರ್ಪಡಿಸಲಾಗುವುದು. ಜನಪದ ಕಲೋತ್ಸವ, ಜಿಲ್ಲಾ ಯುವ ಸಮಾವೇಶ, ಶಿಬಿರಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಯುವ ಪ್ರಶಸ್ತಿ, ಉತ್ತಮ ಕ್ಲಬ್ಗಳಿಗೆ ಪ್ರಶಸ್ತಿ ನೀಡಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ನೆಹರೂ ಯುವ ಕೇಂದ್ರದ ವಾಷರ್ಿಕ ಯೋಜನೆ ಅವಲೋಕನಾ ಸಭೆಯಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾದ ಖಾದರ್ ಮಾನ್ಯ, ಪಿ.ಚಂದ್ರ ಮೋಹನ್ ನಾಯರ್, ಮನಾಫ್ ನುಳ್ಳಿಪ್ಪಾಡಿ, ಕಾಸರಗೋಡು ಸಕರ್ಾರಿ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಮೊಹಮ್ಮದ್ ಆಲಿ ಪೆರ್ಲ ಹಾಜರಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ಗೋವಿಂದ ರಾವ್ ನಾಯಕ್ ಯೋಜನೆಯನ್ನು ವಿವರಿಸಿದರು.
 
ವಾಯು ಸೇನೆಯಲ್ಲಿ ಏರ್ಮ್ಯಾನ್ ಹುದ್ದೆ
ಕಾಸರಗೋಡು: ಭಾರತೀಯ ವಾಯು ಸೇನೆಗೆ `ಗ್ರೂಪ್ ಎಕ್ಸ್'ನಲ್ಲಿ ಟೆಕ್ನಿಕಲ್ ಟ್ರೇಡ್ನಲ್ಲಿ ಏರ್ಮ್ಯಾನ್ ಹುದ್ದೆಗೆ ಅಜರ್ಿ ಆಹ್ವಾನಿಸಲಾಗಿದೆ.
ಗಣಿತ, ಭೌತಶಾಸ್ತ್ರ ವಿಷಯದಲ್ಲಿ ಪ್ಲಸ್ಟುವಿನಲ್ಲಿ ಶೇ.50ರಷ್ಟು ಅಂಕ ಗಳಿಸಿದ, 1989 ಜನವರಿ 1 ಮತ್ತು 1993 ಫೆಬ್ರವರಿ 28ರ ಮಧ್ಯೆ ಜನಿಸಿದವರು ಅಜರ್ಿ ಸಲ್ಲಿಸಬಹುದು. 152.5 ಸೆ.ಮೀ. ಎತ್ತರ, ಉತ್ತಮ ಶ್ರವಣ ಸಾಮಥ್ರ್ಯ ಇರಬೇಕು. ತರಬೇತಿ ಪಡೆದ ಬಳಿಕ 14,460 ರೂ. ವೇತನ ನೀಡಲಾಗುವುದು. ಅಜರ್ಿ ಸಲ್ಲಿಸಿದವರಿಗೆ ನವೆಂಬರ್ನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ರಾಜ್ಯದಲ್ಲಿ ಕೊಚ್ಚಿಯಲ್ಲಿ ಪರೀಕ್ಷೆ ಕೇಂದ್ರವಿದೆ. ದೈಹಿಕ ಸಾಮಥ್ರ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಅಜರ್ಿಗಳನ್ನು ಇದೇ 29ರೊಳಗೆ ಪ್ರೆಸಿಡೆಂಟ್, ಸೆಂಟ್ರಲ್ ಏರ್ಮ್ಯಾನ್ ಸೆಲೆಕ್ಷನ್ ಬೋಡರ್್, ಪೋಸ್ಟ್ ಬಾಕ್ಸ್ ನಂ.11807, ನ್ಯೂಡೆಲ್ಲಿ-110010 ಎಂಬ ವಿಳಾಸಕ್ಕೆ ಸಲ್ಲಿಸಬಹುದು. ಅಜರ್ಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಾಹಿತಿ ಕೇಂದ್ರವನ್ನು ಸಂಪಕರ್ಿಸಬಹುದು.
 
 
ಪಂಚಾಯ್ತಿ ಎಂಪ್ಲೋಯೀಸ್ ಆರ್ಗನೈಸೇಶನ್
27ನೇ ಜಿಲ್ಲಾ ಸಮ್ಮೇಳನ
ಕಾಸರಗೋಡು: ಕೇರಳ ಪಂಚಾಯ್ತಿ ಎಂಪ್ಲೋಯೀಸ್ ಆರ್ಗನೈಸೇಶನ್ನ 27ನೇ ಜಿಲ್ಲಾ ಸಮ್ಮೇಳನ ಆಗಸ್ಟ್ 8ರಂದು ಪೆರಿಯ ಸಮುದಾಯ ಭವನದಲ್ಲಿ ಜರುಗಲಿದೆ.
ಶಾಸಕ ಸಿ.ಟಿ.ಅಹಮ್ಮದಾಲಿ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ವೆಳುತ್ತಂಬು ಅಧ್ಯಕ್ಷತೆ ವಹಿಸುವರು. ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸತೀಶ್ ಪಾಚೇನಿ, ಕೋಡೋತ್ ಗೋವಿಂದನ್ ನಾಯರ್ ಭಾಗವಹಿಸುವರು.
ಈ ಕುರಿತು ಪೆರಿಯದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷ ವಹಿಸಿದ್ದರು. ಎಂಪ್ಲೋಯೀಸ್ ಆರ್ಗನೈಸೇಶನ್ನ ರಾಜ್ಯ ಕೋಶಾಧಿಕಾರಿ ತಾರಾನಾಥ ಮಧೂರು, ಜಿಲ್ಲಾ ಅಧ್ಯಕ್ಷ ಸಿ.ದಾಮೋದರನ್, ಪ್ರಧಾನ ಕಾರ್ಯದಶರ್ಿ ದೇವದಾಸ್, ಸಿ.ಪಿ.ಕುಞ್ಞಿನಾರಾಯಣನ್, ತೋಮಸ್, ನಾರಾಯಣನ್, ಸತೀಶನ್ ಹಾಜರಿದ್ದರು.
 
ಎನ್.ಎಸ್.ಎಸ್. ಏಕದಿನ ಶಿಬಿರ
ರ್ಯಾಗಿಂಗ್ : ಕಠಿಣ ಶಿಕ್ಷೆ

ಕಾಸರಗೋಡು: ರ್ಯಾಗಿಂಗ್ ನಡೆಸಿ ಮುಗ್ಧ ವಿದ್ಯಾಥರ್ಿಗಳಿಗೆ ಮಾನಸಿಕ ಕಿರುಕುಳ ನೀಡುವವರಿಗೆ ಸುಪ್ರೀಂ ಕೋಟರ್ಿನ ಆದೇಶದ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಜಿಲ್ಲಾ ನ್ಯಾಯಾಲಯದ ಚೆರಿಯನ್ ಕೆ.ಕುರ್ಯಾಕೋಸ್ ತಿಳಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಏಕದಿನ ಶಿಬಿರದಲ್ಲಿ ಮಾತನಾಡಿದರು.
ರ್ಯಾಗಿಂಗ್ ಸಾಮಾಜಿಕ ಪಿಡುಗು. ಇದನ್ನು ನಿವಾರಿಸಲು ಸುಪ್ರೀಂ ಕೋಟರ್ು ಆರೋಪಿಗೆ 2 ವರ್ಷ ಶಿಕ್ಷೆ ಸಹಿತ ದಂಡ ವಿಧಿಸುತ್ತಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಎನ್.ಎಸ್.ಎಸ್. ನೇತೃತ್ವದಲ್ಲಿ ನಡೆಯುವ ಕಮ್ಯುನಿಕೇಟಿವ್ ತರಗತಿಯನ್ನು ಉದ್ಘಾಟಿಸಿದರು.
ಜಿಲ್ಲಾ ಉಪ ನ್ಯಾಯಾಧೀಶ ಕೆ.ರಮೇಶ್ ಭಾ, ಕಾಸರಗೋಡು ಬಾರ್ ಅಸೋಸಿಯೇಶನ್ನ ಕಾರ್ಯದಶರ್ಿ ಮೋಹನ್, ಅಧ್ಯಕ್ಷ ಕೆ.ಎಂ.ಭಟ್, ಕನ್ನಡ ವಿಭಾಗದ ಉನ್ಯಾಸಕ ಶ್ರೀನಾಥ್, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ, ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ವಿದ್ಯಾಥರ್ಿ ಅಹಮ್ಮದ್ ಕಬೀರ್, ಆಯಿಷತ್ ಶಫೀನಾ, ಮಹಮ್ಮದ್ ಹನೀಫ್, ಉಣ್ಣಿರಾಜ್, ಕಾರ್ಯದಶರ್ಿ ಮಹೇಶ ವೈ, ಪ್ರಜಿತಾ, ಖಾಲಿದ್ ಹಾಜರಿದ್ದರು. 
ಶಿಬಿರದಂಗವಾಗಿ ಕಾಲೇಜಿನ ವಠಾರವನ್ನು ಶುಚಿಗೊಳಿಸಲಾಯಿತು. ಇದೇ 30ರಂದು ಜಿಲ್ಲಾ ನ್ಯಾಯಲಯದ ನೇತೃತ್ವದಲ್ಲಿ ಹಾಗೂ ಎನ್.ಎಸ್.ಎಸ್.ನ ಆಶ್ರಯದಲ್ಲಿ ರ್ಯಾಗಿಂಗ್ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 
 
ರೇಷನ್ನಲ್ಲಿ ಸಕ್ಕರೆ ವಿತರಣೆ
ಕಾಸರಗೋಡು: ಬಿ.ಪಿ.ಎಲ್, ಎ.ಎ.ವೈ ಕಾಡರ್ುದಾರರಿಗೆ ಜೂನ್ ತಿಂಗಳಿಗೆ ಮಂಜೂರು ಮಾಡಿದ ರೇಷನ್ ಸಕ್ಕರೆ ಇದೇ 25ರ ವರೆಗೆ ರೇಷನ್ ಅಂಗಡಿಗಳಿಂದ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 
 
ನಾಳೆ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳ ಸಭೆ
ಕಾಸರಗೋಡು: ಕಾಸರಗೋಡು ಶಿಕ್ಷಣ ಜಿಲ್ಲೆಯ ಅಂಗೀಕೃತ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳ ಸಭೆ ಇದೇ 23ರಂದು ಸಂಜೆ 3 ಗಂಟೆಗೆ ಬಿ.ಇ.ಎಂ. ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿದ್ಯಾಧಿಕಾರಿ ತಿಳಿಸಿದ್ದಾರೆ.
  
ವಕರ್ಾಡಿ ಗ್ರಾಮ ಪಂಚಾಯ್ತಿ ಅವ್ಯವಸ್ಥೆಯ ಗೂಡು: ಸಿಪಿಐ(ಎಂ) ಆರೋಪ
ಮಂಜೇಶ್ವರ: ವಕರ್ಾಡಿ ಗ್ರಾಮ ಪಂಚಾಯ್ತಿಯಲ್ಲಿ ಸಕರ್ಾರದ ಸವಲತ್ತುಗಳಿಗೆ ಜನರು ಅಲೆದಾಡುವ ವಾತಾವರಣ ನಿಮರ್ಾಣವಾಗಿದೆ ಎಂದು ಸಿಪಿಐ(ಎಂ) ವಕರ್ಾಡಿ ಸ್ಥಳೀಯ ಸಮಿತಿ ಆರೋಪಿಸಿದೆ.
ಕೇರಳ ಸಕರ್ಾರ ಜಾರಿಗೊಳಿಸಿದ ವಿಧವಾ ಪಿಂಚಣಿಗೆ ಅಜರ್ಿ ಸಲ್ಲಿಸಿದರೆ ಅದನ್ನು ಒಂದು ವರ್ಷದ ವರೆಗೂ ಸಂಬಂಧ ಪಟ್ಟವರು ಪರಿಗಣಿಸುತ್ತಿಲ್ಲ. ಸಲ್ಲಿಸಿದ ಅಜರ್ಿಗಳು ಕಾಣೆಯಾಗುತ್ತಿದೆ. ಹಲವು ಬಾರಿ ಅಜರ್ಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಪಂಚಾಯ್ತಿನ ಕೆಲವು ನೌಕರರ ದರ್ಪದಿಂದ ಜನಸಾಮಾನ್ಯರು ಕಂಗೆಡುವಂತಾಗಿದೆ. ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು  ಸಿಪಿಐ(ಎಂ) ಆರೋಪಿಸಿದೆ.
ಕಳೆದ ವರ್ಷ ಆಶ್ರಯ ಯೋಜನೆಯಡಿ ಮನೆ ನಿಮರ್ಿಸಲು ವಿತರಿಸಬೇಕಾದ ಹಣ ಲಭಿಸದೆ ನಿಮರ್ಾಣ ಕಾರ್ಯ ಸ್ಥಗಿತಗೊಂಡಿದೆ. ಫಲಾನುಭವಿಗಳಿಗೆ ಹಣ ವಿತರಿಸುವಲ್ಲಿ ಪಂಚಾಯ್ತಿ ನಿರ್ಲಕ್ಷ್ಯ ವಹಿಸುತ್ತಿದೆ. ಪಂಚಾಯ್ತಿಯಲ್ಲಿ ಹತ್ತು ಹಲವು ಬಗೆಯ ಅವ್ಯವಹಾರಗಳು ನಡೆಯುತ್ತಿದ್ದರೂ ಪಂಚಾಯ್ತಿ ಆಡಳಿತ ಮೌನ ವಹಿಸುತ್ತಿದೆ. ಇದರ ವಿರುದ್ಧ ಹೋರಾಡಲು ಸಿಪಿಐ(ಎಂ) ವಕರ್ಾಡಿ ಸ್ಥಳೀಯ ಸಮಿತಿ ತೀಮರ್ಾನಿಸಿದೆ.
ಇತ್ತೀಚೆಗೆ ವಕರ್ಾಡಿಯಲ್ಲಿ ಸೇರಿದ ಸಭೆಯಲ್ಲಿ ಕೆ.ಎಂ.ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಡಿ.ಬೂಬ ವರದಿ ಮಂಡಿಸಿದರು.
 
 
ಜು.30ರಂದು ಹೊಸಬೆಟ್ಟು-ಕಣ್ವತೀರ್ಥ ರಸ್ತೆ ಉದ್ಘಾಟನೆ 
ಮಂಜೇಶ್ವರ: ರಾಜ್ಯ ಸಕರ್ಾರದ ಮೀನುಗಾರಿಕಾ ಸಚಿವಾಲಯ ಕರಾವಳಿ ಅಭಿವೃದ್ಧಿ ನಿಗಮದ ಅನುದಾನದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿದ ಹೊಸಬೆಟ್ಟು-ಕಣ್ವತೀರ್ಥ ರಸ್ತೆಯನ್ನು ರಾಜ್ಯ ಮೀನುಗಾರಿಕಾ ಸಚಿವ ಎಸ್.ಶರ್ಮ ಇದೇ 30ರಂದು ಉದ್ಘಾಟಿಸುವರು.
ಸಮಾರಂಭದ ಯಶಸ್ವಿಗೆ ಇತ್ತೀಚೆಗೆ ಪಂಚಾಯ್ತಿ ಅಧ್ಯಕ್ಷ ಯು.ಎ.ಖಾದರ್ ಅಧ್ಯಕ್ಷತೆಯಲ್ಲಿ ಕಣ್ವತೀರ್ಥ ಭಗವತಿ ಶಾಲೆಯಲ್ಲಿ ಸ್ವಾಗತ ಸಮಿತಿ ಸಭೆ ಜರುಗಿತು.  ಶಾಸಕ ಸಿ.ಎಚ್.ಕುಞ್ಞಂಬು, ಪಂಚಾಯ್ತಿ ಸದಸ್ಯರಾದ ಪವಿತ್ರ, ನಬೀಸಾ, ಭಗವತಿ ಶಾಲೆಯ ಮೇನೇಜರ್ ಕೃಷ್ಣಪ್ಪ ರಾಜೇಂದ್ರ, ರಾಘವ ಪಟ್ನಾ, ಕೇಶವ ಕಣ್ವತೀರ್ಥ, ಲಕ್ಷ್ಮೀ ಟೀಚರ್, ದಿನೇಶ್ ಡಿ. ಉದ್ಯಾವರ, ಕೆ.ಆರ್.ಜಯಾನಂದ, ಕೆ.ಯೋಗೀಶ್, ದಯಾಕರ ಮಾಡ, ಬಿ.ಚಂದಪ್ಪ ಮಾಸ್ಟರ್, ಜೋಸ್ ಹಾಜರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯು.ಎ.ಖಾದರ್, ಸಂಚಾಲಕರಾಗಿ ದಿನೇಶ್ ಡಿ. ಉದ್ಯಾವರ, ಉಪಾಧ್ಯಕ್ಷರಾಗಿ ರಾಜೇಂದ್ರ, ದಯಾಕರ, ಲಕ್ಷ್ಮೀ ಟೀಚರ್, ಉಪಸಂಚಾಲಕರಾಗಿ  ಪವಿತ್ರಾ, ಬಿ.ಎಂ.ಶೀನ, ಕೆ.ಎಂ.ಅಬ್ದುಲ್ ರಹಿಮಾನ್, ಬಾಲಕೃಷ್ಣ, ಯೋಗೀಶ ಕೆ. ಆಯ್ಕೆಯಾದರು.

 



No comments:

Post a Comment