Friday, July 24, 2009

ಗಾಂಜಾ ಮಾರಾಟ ಹೈಟೆಕ್ ಜಾಲ: ದಸ್ತಗಿರಿ/Ganja-Arrest

ಉಡುಪಿ: 21/07/2009 ರಂದು ಉಡುಪಿ ನಗರದ ಆದಿ ಉಡುಪಿ ಮಾಕರ್ೆಟ್ ಬಳಿ ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 2 ಕೆ.ಜಿ ಆಕ್ರಮ ಗಾಂಜಾವನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರಿಸಿ ಇದೇ ಜಾಡನ್ನು ಹಿಡಿದು ಮಣಿಪಾಲ ಕ್ಯಾಂಪಸ್ನಲ್ಲಿ ವಿದ್ಯಾಥರ್ಿಗಳಿಗೆ ಗಾಂಜಾವನ್ನು ಗೌಪ್ಯವಾಗಿ ಮಾರಾಟ ಮಾಡುವ ಹೈಟೆಕ್ ಜಾಲವೊಂದು ಕಾಯರ್ಾಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀಣ ಮಧುಕರ ಪವಾರರವರ ನಿದರ್ೇಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ ತಳಕೇರಿರವರ ಮಾರ್ಗದರ್ಶನದಲ್ಲಿ ಉಡುಪಿ ಪೊಲೀಸ್ ಉಪಾಧೀಕ್ಷರಾದ ಶ್ರೀ ಜಯಂತ ಶೆಟ್ಟಿರವರ ನೇತೃತ್ವದಲ್ಲಿ ನಿನ್ನೆ ದಿನ ದಿನಾಂಕ 23.07.09 ರಂದು ರಾತ್ರಿ ಸಮಯ ಡಿ.ಸಿ.ಐ.ಬಿ ಇನ್ಸಪೆಕ್ಟರ್ ಗಣೇಶ್ ಎಂ ಹೆಗಡೆ ಮತ್ತು ಕೋಟಾ ಪಿಎಸ್ಐ ಮಹೇಶ್ ಪ್ರಸಾದ್ರವರು ಖಚಿತ ಮಾಹಿತಿ ಸಂಗ್ರಹಿಸಿ ಮಣಿಪಾಲದ ಎಂಡ್ ಪಾಯಿಂಟ್ ಬಳಿ ಟೊಯೋಟಾ ಕ್ವಾಲಿಸ್ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಾದ ಮಣಿಪಾಲದ ಸರಳಬೆಟ್ಟು ವಾಸಿ ನಿತ್ಯಾನಂದ (34 ವರ್ಷ) ಹಾಗೂ ಉಡುಪಿ ಇಂದಿರಾನಗರ ವಾಸಿ ಇಮ್ತಿಯಾಜ್ (27 ವರ್ಷ)ನನ್ನು ಸುಮಾರು 1.2 ಕೆ.ಜಿ ಅಕ್ರಮ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಧಾಳಿ ನಡೆಸಿ ಸೊತ್ತನ್ನು ವಶಪಡಿಸಿಕೊಂಡು ಅರೋಪಿತರನ್ನು ದಸ್ತಗಿರಿ ಮಾಡಲಾಯಿತು. ಬಳಿಕ ಮಣಿಪಾಲ - ಅಲೆವೂರು ರಸ್ತೆಯ ವಾಟರ್ ಟ್ಯಾಂಕ್ ಬಳಿ ಕಪ್ಪುಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ ಮಣಿಪಾಲ ಮಂಚಿ ನಿವಾಸಿ ಸುನೀಲ್ ಶೇರಿಗಾರ್ (34 ವರ್ಷ) ಎಂಬಾತ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಅಲ್ಲೂ ಕೂಡ ಧಾಳಿ ನಡೆಸಿ ಆತನ ವಶದಲ್ಲಿದ್ದ 1.3 ಕೆ.ಜಿ. ಅಕ್ರಮ ಗಾಂಜಾವನ್ನು ಹಾಗೂ ಮಾರುತಿ ಆಲ್ಟೋ ಕಾರನ್ನು ಸ್ವಾಧೀನಪಡಿಸಿಕೊಂಡು ಅರೋಪಿಯನ್ನು ದಸ್ತಗಿರಿ ಮಾಡಲಾಯ್ತು. ಎರಡೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾ ಹಾಗೂ ಕಾರುಗಳ ಅಂದಾಜು ಮೌಲ್ಯ 8 ಲಕ್ಷ ರೂಪಾಯಿಗಳಾಗಿರುತ್ತದೆ. ಈ ರೀತಿ ಮಣಿಪಾಲದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ ಸ್ಥಳೀಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಆಗಮಿಸಿ ಅಭ್ಯಸಿಸುತ್ತಿರುವ ವಿದ್ಯಾಥರ್ಿ ಸಮುದಾಯಕ್ಕೆ ದುಬಾರಿ ಬೆಲೆಗೆ ಮಾದಕ ವಸ್ತುವನ್ನು ಗೌಪ್ಯವಾಗಿ ಬೇರೆ ಬೇರೆ ವಾಹನಗಳಲ್ಲಿ ಸಾಗಾಟ ಮಾಡಿ ನಿದರ್ಿಷ್ಟ ಜಾಗಕ್ಕೆ ತಂದು ಮಾರಾಟ ಮಾಡಿ ದುಶ್ಚಟಕ್ಕೊಳಪಡಿಸಿ ಅವರ ಭವಿಷ್ಯವನ್ನು ಅಪಾಯದಂಚಿಗೆ ಕೊಂಡೊಯ್ಯುತ್ತಿರುವ ಹೈಟೆಕ್ ಗಾಂಜಾ ಮಾರಾಟ ದಂಧೆ ಇದಾಗಿದ್ದು ಅರೋಪಿತರು ಹಲವಾರು ವರ್ಷಗಳಿಂದ ಗೌಪ್ಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ವಿಚಾರಣೆ ವೇಳೆ ತಿಳಿದುಬಂದಿರುತ್ತದೆ.
ಈ ದುಶ್ಚಟಕ್ಕೆ ಬಲಿಯಾಗುತ್ತಿರುವ ವಿದ್ಯಾಥರ್ಿಗಳನ್ನು ಗುರುತಿಸಿ ನಂತರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಣಿಪಾಲದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸಂಯೋಜನೆಯೊಂದಿಗೆ ಈ ಅಪಾಯಕಾರಿ ದಂಧೆಯನ್ನು ಮಟ್ಟ ಹಾಕುವಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಅಲ್ಲದೆ ಈ ಬಗ್ಗೆ ವಿದ್ಯಾಥರ್ಿ ಸಮುದಾಯದ ಹೆತ್ತವರು ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚಿಸಿ ( ಕೌನ್ಸಿಲಿಂಗ್ನಿಂದ ) ಜಾಗೃತಿ ಮೂಡಿಸುವ ಅಭಿಯಾನವನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು.
ಮೇಲಿನ ಅರೋಪಿತರುಗಳ ಪೈಕಿ ನಿತ್ಯಾನಂದ ಹಾಗೂ ಸುನೀಲ್ ಮಂಚಿ ಇವರ ಮೇಲೆ ಈ ಮೊದಲು ಕೂಡ ಅಕ್ರಮವಾಗಿ ಗಾಂಜಾ ಮರಾಟ ಮಾಡಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ 2000 ಹಾಗೂ 2005 ನೇ ಇಸವಿಯಲ್ಲಿ ಪ್ರಕರಣ ದಾಖಲಾಗಿದ್ದು ಹಳೇಯ ಅರೋಪಿಗಳಾಗಿರುತ್ತಾರೆ. ಇನ್ನೋರ್ವ ಅರೋಪಿ ಇಮ್ತಿಯಾಜ್ ಇಂದಿರಾನಗರ ಕುಕಿಕಟ್ಟೆ, ಉಡುಪಿ ಇವನು 2005 ನೇ ಇಸವಿಯಲ್ಲಿ ಬ್ರಹ್ಮಾವರದ ಪದ್ಮ ಪೂಜಾರ್ತಿ ಕೊಲೆ ಪ್ರಕರಣದ ಅರೋಪಿಯಾಗಿರುತ್ತಾನೆ. ಮೇಲಿನ ಅರೋಪಿಗಳನ್ನು ಹಾಗೂ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 130/09 ಮತ್ತು 131/09 ಕಲಂ 20 (ಬಿ) (1), 8 (ಸಿ) ಎನ್.ಡಿ.ಪಿ.ಎಸ್. ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರವೀಣ್ ಮಧುಕರ್ ಪವಾರ್ ರವರ ನಿದರ್ೇಶನದಲ್ಲಿ ಎಡಿಷನಲ್ ಎಸ್ಪಿ ಕಾಶಿನಾಥ ತಲಗೇರಿರವರ ಮಾರ್ಗದರ್ಶನದಲ್ಲಿ, ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಯಂತ್ ವಿ ಶೆಟ್ಟಿರವರ ನೇತೃತ್ವದಲ್ಲಿ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕ ಗಣೇಶ್ ಎಂ. ಹೆಗಡೆರವರು ಈ ಕಾಯರ್ಾಚರಣೆಯನ್ನು ಕೈಗೊಂಡಿದ್ದು. ಕೋಟಾ ಪಿಎಸ್ಐ ಶ್ರೀ ಮಹೇಶ್ ಪ್ರಸಾದ್, ಹಾಗೂ ಸಿಬ್ಬಂದಿಯವರಾದ ದಾಮೋದರ, ನಾರಾಯಣ, ಸತೀಶ ಬಲ್ಲಾಳ, ಮಹಾಬಲ ಶೆಟ್ಟಿ, ಉದಯ್ ಕುಂದರ, ದಿನೇಶ್ ಶೆಟ್ಟಿ, ರತ್ನಾಕರ, ವಾಮನ, ಪುಷ್ಪರಾಜ, ಮನೋಹರ ಉದ್ಯಾವರ ನಾಗರಾಜ, ಹಾಗೂ ಪೊಲೀಸ್ ಉಪಾಧೀಕ್ಷಕರ ಅಪರಾಧ ವಿಭಾಗದ ಸಿಬಂದಿಯವರಾದ ಸುಧೀರ್, ರಾಘವೇಂದ್ರ, ಸಂತೋಷ್ ಕುಮಾರ್, ರವಿಚಂದ್ರ, ಸಂತೋಷ್ ಕುಂದರ್, ಮಹಾಬಲ ಸಹಕರಿಸಿರುತ್ತಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಕಾಯರ್ಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ 10,000/- ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.

 
ಬೆಂಕಿ ತಗುಲಿ ವೃದ್ಧೆ ಸಾವು

ಹಿರಿಯಡ್ಕ: ದಿನಾಂಕ 17/07/09 ರಂದು ಬೆಳಿಗ್ಗೆ 05:00 ಗಂಟೆಗೆ ಉಡುಪಿ ತಾಲೂಕು ಪೆಡರ್ೂರು ಗ್ರಾಮದ ಗೋರೇಲ್ ಹೌಸ್ ಎಂಬಲ್ಲಿ ಶ್ರೀಮತಿ ಮಣ್ಕಿ (76 ವರ್ಷ)ರವರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸಕರ್ಾರಿ ಆಸ್ಪತ್ರ್ರೆಯಲ್ಲಿ ದಾಖಲು ಮಾಡಿದ್ದು ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23/07/09 ರಂದು ಮಧ್ಯಾಹ್ನ 14-00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮೃತರ ಅಕ್ಕನ ಮಗನಾದ ಸುರೇಶ್ ಮರಕಾಲ (44 ವರ್ಷ)ರವರು ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 12/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ದೂರವಾಣಿ ಇಲಾಖೆಯ ಸಿಬ್ಬಂದಿಗೆ ಹಲ್ಲೆ - ದೂರು ದಾಖಲು

ಶಂಕರನಾರಾಯಣ : ಕೆ. ಮಾಧವ ಗಾಣಿಗ (45 ವರ್ಷ) ತಂದೆ ದಿವಂಗತ ನರಸಿಂಹ ಗಾಣಿಗ ವಾಸ: ಬ್ರಾಹ್ಮಿ ಶ್ರೀ ಹರ್ಷ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎದುರು ಜನ್ಸಾಲೆ, ಸಿದ್ದಾಪುರ ಗ್ರಾಮರವರು ಸಿದ್ದಾಪುರ ಟೆಲಿಪೋನ್ ಎಕ್ಸ್ಚೇಂಜ್ನಲ್ಲಿ ಟೆಲಿಫೋನ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ 23/07/09ರಂದು ಕಚೇರಿಯಲ್ಲಿ ಕರ್ತವ್ಯದಲ್ಲಿರುವಾಗ ಮುಧ್ಯಾಹ್ನ 14:30 ಗಂಟೆ ಸುಮಾರಿಗೆ ಆರೋಪಿಗಳಾದ ಸ್ಥಳೀಯ ಸತೀಶ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಪ್ರಕಾಶ ಶೆಟ್ಟಿ ಹಾಗೂ ಇತರರು ಕಛೇರಿಯ ಒಳಗೆ ಬಂದು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ಕೈುಂದ ಕೆನ್ನೆಗೆ, ಮುಖಕ್ಕೆ ಹೊಡೆದು, ಕಾಲಿನಿಂದ ತುಳಿದು ಅಲ್ಲೇ ಇದ್ದ ಕುಚರ್ಿುಂದ ಹಲ್ಲೆ ನಡೆಸಿ ಅವರು ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಎಂಬುದಾಗಿ ಮಾಧವ ಗಾಣಿಗರವರು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದು, ಅವರ ದೂರಿನನ್ವಯ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/09 ಕಲಂ 143, 147, 504, 323, 324, 353 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ

ದಿನಾಂಕ 23/07/09ರಂದು 18:45 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ವಾಸಿ ಆನಂದ (23 ವರ್ಷ) ತಂದೆ ಸೋಮಣ್ಣರವರು ಗಂಗೊಳ್ಳಿ ಠಾಣೆಯಲ್ಲಿ ಪಿರ್ಯಾದಿಯನ್ನು ನೀಡಿದ್ದು ತನ್ನ ಪಿರ್ಯಾದಿಯಲ್ಲಿ ದಿನಾಂಕ 07/07/09ರಂದು ಅವರ ಕಾರು ನಂಬ್ರ ಕೆಎ 15/3370ರಲ್ಲಿ ಸಾಗರದ ಕುಮಾರ ಹಾಗೂ ಇತರರು ಸೇರಿ ಸಾಗರದಿಂದ ಅನೆಗುಡ್ಡೆಯ ದೇವಸ್ದಾನಕ್ಕೆ ಬಾಡಿಗೆಗೆ ಚಾಲಕ ರಮೇಶ ಕಕರ್ಿಕೊಡ್ಲರವರೊಂದಿಗೆ ಬಂದಿದ್ದು ಕಾರು ಅದೇ ದಿನ ಸಂಜೆ 17:00 ಗಂಟೆಯ ಸಮಯಕ್ಕೆ ಮೊವಾಡಿ ಕ್ರಾಸ್ ಬಳಿ ಟಯರ್ ಒಡೆದು ಗುಂಡಿಗೆ ಬಿದ್ದಿದ್ದು ದೂರವಾಣಿ ಮೂಲಕ ಮಾಹಿತಿ ತಿಳಿದುಕೊಂಡು ಆನಂದರವರು ಬಂದು ನೋಡಲಾಗಿ ಕಾರಿನಲ್ಲಿದ್ದವರಿಗೆ ಯಾರಿಗೂ ಗಾಯವಾಗಿರದೇ ಕಾರು ತುಂಬಾ ಜಖಂಗೊಂಡಿದ್ದು ರಿಪೇರಿ ಮಾಡಿಸಲು ವಿಮಾ ದಾಖಲೆ ಬೇಕಾಗಿರುವುದರಿಂದ ಮಹಜರು ಮಾಡಿ ವರದಿಯನ್ನು ಕೊಡಿಸಬೇಕು ನಮೂದಿಸಿದ ಮೇರೆಗೆ ಗಂಗೊಳ್ಳಿ ಠಾಣೆಯಲ್ಲಿ ಆರೋಪಿ ರಮೇಶ್ರವರ ವಿರುದ್ಧ ಠಾಣಾ ಅಪರಾಧ ಕ್ರಮಾಂಕ 75/09 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹೊಳೆಯ ನೀರಿನಲ್ಲಿ ಮುಳುಗಿ ಸಾವು
 
ಬ್ರಹ್ಮಾವರ: ದಿನಾಂಕ 23/07/09 ರಂದು ಬೆಳಿಗ್ಗೆ 05:45 ಗಂಟೆಗೆ ಬ್ರಹ್ಮಾವರ ಠಾಣಾ ಸರಹದ್ದಿನ ಹಾರಾಡಿ ಗ್ರಾಮದ ಹೊನ್ನಾಳದ ಮಂಜುನಾಥ ಸುವರ್ಣ (65 ವರ್ಷ)ರವರು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಹಾರಾಡಿ ಗ್ರಾಮದ ಹೊನ್ನಾಳ ಹೊಳೆಯಲ್ಲಿ ದೋಣಿ ನಿಲ್ಲಿಸಿ ನೀರಿಗೆ ಇಳಿದು ಕಪ್ಪೆಚಿಪ್ಪನ್ನು ತೆಗೆಯುತ್ತಿರುವಾಗ ಬಂದ ನೀರಿನ ರಭಸಕ್ಕೆ ಮಂಜುನಾಥ ಸುವರ್ಣ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು ದಿನಾಂಕ 24/07/09ರಂದು ಅವರ ಮೃತ ದೇಹ ಹೊನ್ನಾಳದ ಸುವರ್ಣ ನದಿಯಲ್ಲಿ ಪತ್ತೆಯಾಗಿದ್ದು ಅವರ ಮಗನಾದ ಪ್ರಭಾಕರ ಕುಂದರ್ ನೀಡಿದು ದೂರಿನ ಮೇರೆಗೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 23/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಮಟ್ಕಾ ದಾಳಿ ಪ್ರಕರಣ

ದಿನಾಂಕ: 23/07/09 ರಂದು ಸಂಜೆ 10:00 ಗಂಟೆಗೆ ಶ್ರೀ ಮಹೇಶ್ ಪ್ರಸಾದ್ ಪೊಲೀಸ್ ಉಪ ನಿರೀಕ್ಷಕರು, ಕೋಟಾ ಪೊಲೀಸ್ ಠಾಣೆಯವರು ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ, ಸಾಬರ ಕಟ್ಟೆ, ಮಧುವನ, ನಂಚಾರು ಪರಿಸರದಲ್ಲಿ ಮೋಟಾರು ಸೈಕಲ್ ನಂ ಕೆ.ಎ.20.ಆರ್.6557 ನೇಯದರಲ್ಲಿ ಓಡಾಡಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತಿದ್ದ 1. ಭೋಜ ಶೆಟ್ಟಿ (47 ವರ್ಷ) ತಂದೆ: ದಿ. ಬಸವ ಶೆಟ್ಟಿ ವಾಸ: ಸಾಬರ ಕಟ್ಟೆ, 2. ಸುಕುಮಾರ್ ಕುಲಾಲ್ (39 ವರ್ಷ) ತಂದೆ: ದೂಮ ಕುಲಾಲ್ ವಾಸ: ಪಂಚಾಯತ್ ಆಫಿಸ್ ಬಳಿ, ವಡ್ಡಸರ್ೆ ಗ್ರಾಮ, 3. ರಾಮಣ್ಣ ಶೆಟ್ಟಿ (40 ವರ್ಷ) ತಂದೆ: ಜಗನ್ನಾಥ ಶೆಟ್ಟಿ ವಾಸ: ಮಧುವನ, ಅಚಲಾಡಿ ಗ್ರಾಮ, 4. ರಮೇಶ್ ಪೂಜಾರಿ (32 ವರ್ಷ) ತಂದೆ: ಕೃಷ್ಣ ಪೂಜಾರಿ ವಾಸ: ಯಡ್ತಾಡಿ ಗ್ರಾಮ 5. ದೇವೇಂದ್ರ ನಾಯ್ಕ (29 ವರ್ಷ) ತಂದೆ: ಬೊಂಬೆ ನಾಯ್ಕ ವಾಸ: ನಂಚಾರು ಗ್ರಾಮ ರವರನ್ನು ದಸ್ತಗಿರಿ ಮಾಡಿದ್ದು ಅವರಿಂದ ಒಟ್ಟು ಮಟ್ಕಾ ಚೀಟಿ -5, ಬಾಲ್ ಪೆನ್ 5, ನಗದು ರೂ 4600/- ಮತ್ತು ಮೋಟಾರ್ ಸೈಕಲ್ ನಂ.ಕೆ.ಎ.20.ಆರ್.6557 ನೇಯದನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿದ್ದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 175/09 ಕಲಂ 78(1)(3) ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 23/07/09 ರಂದು ಶ್ರೀ ಜಿ ಕೃಷ್ಣ ಮೂತರ್ಿ, ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕರಿಂದ ಅಕ್ರಮವಾಗಿ ಹಣವನ್ನು ಸಂಗ್ರಹಿಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 20:30 ಗಂಟೆಗೆ ತಲುಪಿ ನಾಗೇಶ ಪ್ರಭು (59 ವರ್ಷ) ತಂದೆ: ಬಾಬುರಾಯ ಪ್ರಭು ವಾಸ: ಯಡ್ತಾಡಿ ಗ್ರಾಮದವರು ಕೈ ಯಲ್ಲಿ ಒಂದು ಚೀಟಿ ಹಾಗೂ ಪೆನ್ನನ್ನು ಹಿಡಿದುಕೊಂಡು ಬಾಂಬೆ ಕಲ್ಯಾಣಿ ಮಾಕರ್ೆಟ್ ಎಂದು 1 ರೂ ಗೆ 70/- ರೂ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಾ ಮಟ್ಕಾ ಜುಗಾರಿ ಆಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಧಾಳಿ ಮಾಡಿ ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ನಗದು ರೂ 490/-, ಮಟ್ಕಾ ನಂ ಬರೆದ ಚೀಟಿ-1, ಬಾಲ್ ಪೆನ್ನು -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/09 ಕಲಂ 78(1)(3) ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಂದರ್ - ಬಾಹರ್ ಜುಗಾರಿ ಧಾಳಿ ಪ್ರಕರಣ
ದಿನಾಂಕ:23/07/09 ಶ್ರೀ ಜಿ ಕೃಷ್ಣ ಮೂತರ್ಿ, ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ ರವರು ಸಿಬ್ಬಂದಿಯವರೊಂದಿಗೆ ಕೋಟ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 18:15 ಕ್ಕೆ ಪಾಂಡೇಶ್ವರ ಗ್ರಾಮದ ಮೂಡಹಡು ಶಾಲೆ ಬಳಿ ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಸೆಲ್ ಫೋನಿಗೆ ಬಂದ ಮೇರೆಗೆ ಸಂಜೆ 18:30 ಗಂಟೆಗೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ತಲುಪಿ ತಮ್ಮ ಸ್ವಂತ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜುಗಾರಿ ಆಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಧಾಳಿ ನಡೆಸಿ 1. ಚಂದ್ರ ಪೂಜಾರಿ (38 ವರ್ಷ) ತಂದೆ: ದಿ. ಕರಿಯ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 2. ಮಂಜುನಾಥ ಪೂಜಾರಿ (39 ವರ್ಷ) ತಂದೆ: ದಿ ನಾರಾಯಣ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 3. ಗಣೇಶ ಪೂಜಾರಿ (30 ವರ್ಷ) ತಂದೆ: ಕರಿಯ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 4. ರಾಮ ಪೂಜಾರಿ (38 ವರ್ಷ) ತಂದೆ: ಕೂಸ ಪೂಜಾರಿ ವಾಸ: ಮೇಲ್ ಬೆಟ್ಟು, ಮಧುವನ ಗ್ರಾಮ, 5. ಜಿತೇಂದ್ರ ಪೂಜಾರಿ (35 ವರ್ಷ) ತಂದೆ: ಮಂಜುನಾಥ ವಾಸ: ಕೋಡಿ ಕನ್ಯಾನ ಶಾಲೆಯ ಬಳಿ, ಕೋಡಿಕನ್ಯಾನ ಗ್ರಾಮ ದವರನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ ನಗದು ರೂ 440/-, ಹಳೆಯ ಪೇಪರ್ -1, ಇಸ್ಪೀಟ್ ಎಲೆಗಳು -44 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಸ್ವಾದೀನಪಡಿಸಿದ್ದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 176/09 ಕಲಂ 87 ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ನೇಣು ಬಿಗಿದು ಆತ್ಮಹತ್ಯೆ ಪ್ರಕರಣ

ರಾಘವೇಂದ್ರ ಅಡಿಗ ತಂದೆ: ತಿಮ್ಮಯ್ಯ ಅಡಿಗ ವಾಸ: ಹೊಲರ್ಾಳಿ, 34 ನೇ ಕುದಿ ಗ್ರಾಮದವರ ಅಣ್ಣನಾದ ಮಂಜುನಾಥ ಅಡಿಗ ಎಂಬವರು ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/07/09 ರಂದು ರಾತ್ರಿ ವೇಳೆಯಲ್ಲಿ 34 ನೇ ಕುದಿ ಗ್ರಾಮದ ಹೊಲರ್ಾಳಿ ಎಂಬಲ್ಲಿರುವ ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರಾಘವೇಂದ್ರ ಅಡಿಗ ರವರು ನೀಡಿದ ಪಿರ್ಯಾದಿಯಂತೆ ಬ್ರಹ್ಮಾವರ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ 22/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ದೋಣಿಯಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮರಣ ಪ್ರಕರಣ
ಶ್ರೀ ತುಕರಾಮ ಪುತ್ರನ್ (42) ತಂದೆ: ಕುರಂಬಿಲ ಶ್ರೀಯಾನ್ ವಾಸ: ಉದ್ಯಾವರ ಕೊಪ್ಪಲ, ಉದ್ಯಾವರ ಗ್ರಾಮದವರು ದಿನಾಂಕ: 23/07/09 ರಂದು ಬೆಳಿಗ್ಗೆ 06:00 ಗಂಟೆ ಸಮಯಕ್ಕೆ ಮಲ್ಪೆ ಬಂದರಿನಿಂದ ಅವರ ತಮ್ಮ ಸೋಮಯ್ಯ ಪುತ್ರನ್ರವರು ಅಶೋಕ ಸುವರ್ಣ, ದೇವದಾಸ, ವಾಸು ಬಂಗೇರ, ಸುಗುಣೇಂದ್ರ. ಶಂಕರ ಕೋಟ್ಯಾನ್, ನವನೀತ ಹಾಗೂ ಇತರ ಹನ್ನೆರಡು ಜನರೊಂದಿಗೆ ಜಯಲಕ್ಷ್ಮೀ ಡಿಸ್ಕೋ ಫಂಡ್ ಎಂಬ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ಮೀಗುಗಾರಿಕೆ ಬಗ್ಗೆ ಹೊರಟ್ಟಿದ್ದು ಸಮುದ್ರ ತೀರದಿಂದ ಸುಮಾರು 6 ಕೀ.ಮೀ ಆಳ ಸಮುದ್ರದಲ್ಲಿ ಸಮಯ ಸುಮಾರು ಬೆ.10:00 ಗಂಟೆಗೆ ಮೀನು ಹಿಡಿಯುವರೇ ಬಲೆ ಬೀಸುತ್ತಿರುವಾಗ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು ಸೋಮಯ್ಯ ಪುತ್ರನ್ರವರು ಆಕಸ್ಮಿಕವಾಗಿ ದೋಣಿಯಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದು ಅವರನ್ನು ರಕ್ಷಿಸುವರೇ ಕೂಡಲೇ ವಾಸು ಹಾಗೂ ಅಶೋಕ ಇವರು ಸಮುದ್ರಕ್ಕೆ ಹಾರಿ ಸೋಮಯ್ಯ ಪುತ್ರನ್ ಇವರನ್ನು ದೋಣಿಗೆ ಹಾಕುವಾಗಲೇ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಆದರೂ ಕೂಡಲೇ ಉಡುಪಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತ ದೇಹವನ್ನು ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ ಈ ಬಗ್ಗೆ ತುಕರಾಮ ಪುತ್ರನ್ ರವರು ನೀಡಿದ ಪಿರ್ಯಾದಿಯಂತೆ ಮಲ್ಪೆ ಪೊಲೀಸ್ ಠಾಣಾ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ 19/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment