ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಇದೇ 26ರಂದು ಪ್ರೊ.ಚಾಪಾಡಿ ವಾಸುದೇವಾ ಪ್ರಾಯೋಜಿತ ಕಾಸರಗೋಡು ಕನ್ನಡ ವಿದ್ಯಾಥರ್ಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶೇಣಿ ಶಾರದಾಂಬ ಪ್ರೌಢಶಾಲೆಯ ಶರತ್ ಕುಮಾರ್ ಜಿ.ಎಸ್, ಅಂಗಡಿಮೊಗರು ಸಕರ್ಾರಿ ಪ್ರೌಢಶಾಲೆಯ ರೇಷ್ಮಾ ಕೆ.ಎಸ್.ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಅವರನ್ನು ಅಭಿನಂದಿಸಲಾಗುವುದು.
ಸಿ.ಪಿ.ಐ(ಎಂ) ಸಭೆ
ಮಂಜೇಶ್ವರ: ಸಿ.ಪಿ.ಐ(ಎಂ) ಮಂಜೇಶ್ವರ ಏರಿಯ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ಹೊಸಂಗಡಿಯಲ್ಲಿ ರಾಜಕೀಯ ವಿವರಣಾ ಸಭೆ ಜರುಗಿತು.
ಸಭೆಯಲ್ಲಿ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಶಕ ಸಿ.ಎಚ್.ಕುಞ್ಞಂಬು, ಕೆ.ಆರ್.ಜಯಾನಂದ, ಎಂ.ಶಂಕರ ರೈ ಮಾಸ್ಟರ್, ಯೋಗೀಶ ಕೆ., ಚಂದಪ್ಪ ಬಿ. ಹಾಜರಿದ್ದರು.
27ರಂದು ಸಭೆ:
ಸಿ.ಪಿ.ಐ(ಎಂ) ಮಂಜೇಶ್ವರ ಏರಿಯ ಸಮಿತಿಯ ಸದಸ್ಯರ ಸಭೆ ಇದೇ 27ರಂದು ಬೆಳಗ್ಗೆ 10 ಗಂಟೆಗೆ ಹೊಸಂಗಡಿ ಹಿಲ್ಸೈಡ್ ಸಭಾಂಗಣದಲ್ಲಿ ನಡೆಯಲಿದೆ.
ಹಲ್ಲೆ; ಖಂಡನೆ
ಮಂಜೇಶ್ವರ: ಸಿ.ಪಿ.ಐ(ಎಂ) ಮಂಜೇಶ್ವರ ಏರಿಯ ಸಮಿತಿಯ ಸದಸ್ಯ ಹಾಗೂ ವಕರ್ಾಡಿ ಪಂಚಾಯ್ತಿಯ ಸದಸ್ಯ ಕೆ. ಚಂದ್ರಹಾಸ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಪಕ್ಷದ ವಕರ್ಾಡಿ ಸ್ಥಳೀಯ ಸಮಿತಿ ಖಂಡಿಸಿದೆ.
ದುಷ್ಕಮರ್ಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ವಕರ್ಾಡಿಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಜನರು ಸಹಕರಿಸಬೇಕು ಎಂದೂ ಸಮಿತಿ ಮನವಿ ಮಾಡಿದೆ. ಕೆ.ಎಂ.ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಬೂಬ ವರದಿ ಮಂಡಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment