ಕಾಸರಗೋಡು: ವ್ಯಾಸರ ಬರವಣಿಗೆಗೆ ವಿಶ್ವಮಾನ್ಯತೆಯ ಅರ್ಹತೆಯಿದೆ. ಆದ್ದರಿಂದ ಅವರ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದ ಮಾಡಬೇಕು ಎಂದು ಲೇಖಕಿ ಅನುಪಮಾ ಪ್ರಸಾದ್ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸ್ನೇಹರಂಗದ ಆಶ್ರಯದಲ್ಲಿ ಆಯೋಜಿಸಿದ `ವ್ಯಾಸಾಂಜಲಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವ್ಯಾಸರ ಕೃತಿಗಳಲ್ಲಿ ಸತ್ಯ-ಚಿಂತನೆ ಇದೆ. ಬರವಣಿಗೆಯ ಓಟಗಾರರಾಗಿದ್ದ ಅವರಿಗೆ `ಇಸಂ'ಗಳ ಅಗತ್ಯವೇ ಬೀಳಲಿಲ್ಲ. ಅವರ ಕೃತಿಗಳಲ್ಲಿ ಭಾಷೆ ಮುಖ್ಯವಾಗಿರದೆ ಧ್ವನಿ ಮುಖ್ಯವಾಗಿತ್ತು. ತಾತ್ವಿಕ, ವಿಜ್ಞಾನ, ಸಮಾಜ ಮತ್ತು ಇತಿಹಾಸಗಳ ಅನಾವರಣವನ್ನು ಅವರ ಕೃತಿಗಳಲ್ಲಿ ಗುರುತಿಸಬಹುದು.
ಆಸೆಗಳು ಸುಖದ ಮೂಲ ಎಂದೇ ನಂಬಿದ್ದ ಅವರು ಟೀಕೆ-ಟಿಪ್ಪಣಿಗಳಿಗೆ ಎಂದೂ ಪ್ರತಿಕ್ರಿಯೆ ನೀಡಿದವರಲ್ಲ. ಅವರ ಸಾಹಿತ್ಯ ಸತ್ಯಶೋಧದ ಬೆನ್ನು ಹಿಡಿದು ಓದಿಸುತ್ತದೆ ಎಂದೂ ಅವರು ವಿಶ್ಲೇಷಿಸಿದರು. ಸ್ನೇಹರಂಗದ `ಕನ್ನಡ ಧ್ವನಿ'ಯನ್ನು ಬಿಡುಗಡೆಗೊಳಿಸಿದರು. ಸಂಪಾದಕಿ ಸುರೇಖಾ ಧ್ವನಿಯ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾಥರ್ಿಗಳಾದ ಗೋಪಿ, ಜ್ಯೋತಿ ವ್ಯಾಸರ ಕೃತಿಗಳ ಬಗ್ಗೆ ಪ್ರಬಂಧ ಮಂಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎಚ್.ರಾಮಭಟ್ ಅಧ್ಯಕ್ಷ ವಹಿಸಿದ್ದರು. ಕೃಪಾ ಶ್ಯಾನುಭೋಗ್ ಹಾಜರಿದ್ದರು. ಸುಭಾಷ್ ಪಟ್ಟಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಧಾಕೃಷ್ಣ ಬೆಳ್ಳೂರು ಸ್ವಾಗತಿಸಿ, ಸ್ನೇಹರಂಗದ ಕಾರ್ಯದಶರ್ಿ ರಮೇಶ್ ವಂದಿಸಿದರು. ಶ್ರೀಧರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.
ದೇವಸ್ವಂ ಮಂಡಳಿಯ ಸದಸ್ಯರಾಗಿ ದಾಸಪ್ಪ ಶೆಟ್ಟಿ ಆಯ್ಕೆ
ಕಾಸರಗೋಡು: ಕೇರಳ ಮಲಬಾರ್ ದೇವಸ್ವಂ ಮಂಡಳಿಯ ಸದಸ್ಯರಾಗಿ ಪುತ್ತಿಗೆ ಸಮೀಪದ ತಲೆಮೊಗರು ದಾಸಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅಂಗಡಿಮೊಗರು ದೇಲಂಪಾಡಿಯ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಕ್ಷೇತ್ರ ಸೇವಾ ಸಮಿತಿ ದಾಸಪ್ಪ ಶೆಟ್ಟಿಯವರನ್ನು ಅಭಿನಂದಿಸಿದೆ.
ಅಭಿನಂದನೆ:
ದೇವಸ್ಥಾನದ ಗೋಪುರ ನಿಮರ್ಾಣಕ್ಕೆ ಮಲಬಾರ್ ದೇವಸ್ವಂ ಮಂಡಳಿಯಿಂದ 25,000 ರೂ. ಮತ್ತು ಕ್ಷೇತ್ರ ರಸ್ತೆಯ ಡಾಮರೀಕರಣಕ್ಕೆ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 4 ಲಕ್ಷ ಗಳನ್ನು ಮಂಜೂರು ಮಾಡಿಸಿದ ಶಾಸಕ ಸಿ.ಎಚ್.ಕುಞ್ಞಂಬು ಅವರನ್ನು ಕ್ಷೇತ್ರ ಆಡಳಿತ ಮಂಡಳಿ ಮತ್ತು ಸೇವಾ ಸಮಿತಿ ಅಭಿನಂದಿಸಿದೆ.
ಡಾಮರೀಕರಣಕ್ಕೆ 1 ಲಕ್ಷ ರೂ. ಬಿಡುಗಡೆ ಮಾಡಿದ ಪುತ್ತಿಗೆ ಪಂಚಾಯ್ತಿಯನ್ನೂ ಇತ್ತೀಚೆಗೆ ಕ್ಷೇತ್ರ ವಠಾರದಲ್ಲಿ ಸೇರಿದ ಸಭೆ ಅಭಿನಂದಿಸಿದೆ. ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಮಂಟಂಪಾಡಿ ತಿಮ್ಮಣ್ಣ ರೈ ಅಧ್ಯಕ್ಷತೆ ವಹಿಸಿದ್ದರು.
ಇದೇ 31ರಂದು ಕ್ಷೇತ್ರದ ಮಹಿಳಾ ಸಮಿತಿಯ ಆಶ್ರಯದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಗೆ ಸಹಕಾರ ನೀಡುವಂತೆ ಸಭೆ ಮನವಿ ಮಾಡಿತು.
ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಸ್ವಾಗತಿಸಿ, ರಾಜೇಂದ್ರ ರೈ ವಂದಿಸಿದರು.
ಜು.25ರಿಂದ ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಅಧ್ಯಯನ ಶಿಬಿರ
ಮಂಜೇಶ್ವರ: ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಅಧ್ಯಯನ ಶಿಬಿರ ಇದೇ 25 ಮತ್ತು 26ರಂದು ಬಂದ್ಯೋಡು ಬೇರಿಕೆಯಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 2 ಗಂಟೆಗೆ ಶಿಬಿರವನ್ನು ಸಿ.ಪಿ.ಐ(ಎಂ) ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್ ಉದ್ಘಾಟಿಸುವರು. ಗುಲಾಬ್ ಜಾನ್, ಕೆ.ಕುಞ್ಞಿಕಣ್ಣನ್, ಶಂಕರೈ ಮಾಸ್ಟರ್, ಟಿ.ಕೆ.ರವಿ, ಶಾಸಕ ಸಿ.ಎಚ್.ಕುಞ್ಞಂಬು ಉಪನ್ಯಾಸ ನೀಡುವರು.
ಈ ಕುರಿತು ಇತ್ತೀಚೆಗೆ ಜರುಗಿದ ಸ್ವಾಗತ ಸಮಿತಿ ಸಭೆಯಲ್ಲಿ ಡಿವೈಎಫ್ಐ ಬ್ಲಾಕ್ ಕಾರ್ಯದಶರ್ಿ ಬಿ.ಎ.ಮೊಹಮ್ಮದ್, ಸಿ.ಪಿ.ಎಂ. ಲೋಕಲ್ ಕಾರ್ಯದಶರ್ಿ ದಾಮೋದರ ಬೇರಿಕೆ ಹಾಜರಿದ್ದರು. ಶಿಬಿರದ ಯಶಸ್ವಿಗೆ ನಾರಾಯಣ ಬೇರಿಕೆ(ಅಧ್ಯಕ್ಷ), ಫಾರೂಕ್ ಶಿರಿಯ(ಸಂಚಾಲಕ) ಸಹಿತ 51 ಮಂದಿಯನ್ನೊಳಗೊಂಡ ಸಮಿತಿಯನ್ನು ರೂಪಿಸಲಾಗಿದೆ.
ಲವೀನಾ ಜ್ಯೋತಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಆಗ್ರಹ
ಕಾಸರಗೋಡು: ಸಂಶಯಾಸ್ಪದ ರೀತಿಯಲ್ಲಿ ಕೊಲ್ಲಂಗಾನದ ಲವೀನಾ ಜ್ಯೋತಿ ಮತ್ತು ಆಕೆಯ ಮಗುವಿನ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕ್ರಿಯಾ ಸಮಿತಿ ಸಭೆ ಆಗ್ರಹಿಸಿದೆ.
ಲವೀನಾ ಜ್ಯೋತಿಯ ಪತಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಮದ್ಯ ಮಾಫಿಯಾದ ಕೈಗಳು ಈತನನ್ನು ಸಂರಕ್ಷಿಸುತ್ತಿವೆ ಎಂದು ಸಮಿತಿ ಆರೋಪಿಸಿದೆ.
ಪ್ರಕರಣ ಕುರಿತು ತನಿಖೆ ನಡೆಸುವಂತೆ ಲಾರೆನ್ಸ್ ಡಿ'ಸೋಜಾ(ಅಧ್ಯಕ್ಷ), ವಿಲ್ಫ್ರೆಡ್ ಡಿ'ಸೋಜಾ, ಅಬೂಬಕ್ಕರ್(ಉಪಾಧ್ಯಕ್ಷರು), ಜೋನಿ ಕ್ರಾಸ್ತಾ ಚೆನ್ನೆಗುಳಿ(ಪ್ರಧಾನ ಸಂಚಾಲಕ), ಸಂತೋಷ್ ಕ್ರಾಸ್ತಾ, ಜೆಸಿಯಾ ಡಿ'ಸೋಜಾ(ಜಂಟಿ ಸಂಚಾಲಕರು), ಬಾಲಕೃಷ್ಣ ಪ್ರಭು ಮತ್ತು ಅನಿಲ್ ಲೋಬೋ(ಕೋಶಾಧಿಕಾರಿಗಳು) ನೇತೃತ್ವದಲ್ಲಿ ಕ್ರಿಯಾ ಸಮಿತಿಯನ್ನು ರೂಪಿಸಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment