Sunday, July 19, 2009

`ಭಾಷೆಯ ಬಗ್ಗೆ ಸಂಕುಚಿತ ಮನೋಭಾವ ಸಲ್ಲದು'/Sheni Smarane


ಹೊಸಂಗಡಿ(ಕಾಸರಗೋಡು): ಭಾಷೆಯ ಬಗ್ಗೆ ಸಂಕುಚಿತ ಮನೋಭಾವ ಸಲ್ಲದು. ಕೇರಳ ತುಳು ಅಕಾಡೆಮಿಯ ಬಗ್ಗೆ ಉತ್ತಮ ವಿಮಶರ್ೆ ಬರಲಿ; ಆದರೆ ರಾಜಕೀಯ ಪ್ರೇರಿತ ವಿಮಶರ್ೆ ಆರೋಗ್ಯಕರವಲ್ಲ ಎಂದು ಶಾಸಕ ಸಿ.ಎಚ್.ಕುಞ್ಞಂಬು ಶನಿವಾರ ಇಲ್ಲಿ ಹೇಳಿದರು.
ಪಾತರ್ಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಮತ್ತು ಅಪೂರ್ವ ಕಲಾವಿದರ ಆಶ್ರಯದಲ್ಲಿ ಶಿವಳ್ಳಿ ಕಾಂಪ್ಲೆಕ್ಸಿನಲ್ಲಿ ಏರ್ಪಡಿಸಿದ ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆಯ ಹುಚ್ಚು ಸಲ್ಲದು ಎಂದ ಅವರು, ಕೇರಳದ ಟ್ರೈಬಲ್ ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆ ಬಗ್ಗೆ ಸಕರ್ಾರ ಚಿಂತನೆ ನಡೆಸುತ್ತಿದೆ ಎಂದರು.
ಶೇಣಿ ಗ್ರಂಥಾಲಯ:
20 ಲಕ್ಷ ರೂ.ಗಳ ಪಾತರ್ಿಸುಬ್ಬ ಕಲಾ ಕ್ಷೇತ್ರದ ಪ್ರಾಜೆಕ್ಟನ್ನು ಸಕರ್ಾರಕ್ಕೆ ಸಲ್ಲಿಸಲಾಗಿದೆ. ಪಾತರ್ಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ನಾಟಕ ತಂಡ(ಡ್ರಾಮಾ ಟ್ರೂಪ್)ವನ್ನೂ ಕಟ್ಟುವ ಉದ್ದೇಶ ಹೊಂದಿದೆ. ಕಲಾ ಕ್ಷೇತ್ರವನ್ನು ಕ್ಷೇತ್ರ ಪರಿಸರದಲ್ಲಿ ಸ್ಥಾಪಿಸಿದರೆ ಅದಕ್ಕೆ ಮತ್ತಷ್ಟು ಮಹತ್ವ ಬರುತ್ತದೆ. ಕಲಾ ಕ್ಷೇತ್ರದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಸ್ಮರಣಾರ್ಥ ಗ್ರಂಥಾಲಯ ರೂಪಿಸಲಾಗುವುದು ಎಂದವರು ತಿಳಿಸಿದರು.
ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದ 3 ಕಟ್ಟಡಗಳ ಕಾಮಗಾರಿ ಆರಂಭಗೊಂಡಿದೆ. 2 ವರ್ಷಗಳಲ್ಲಿ ಇದರ ಕೆಲಸ ಪೂರ್ಣಗೊಳ್ಳಲಿದೆ ಎಂದೂ ಅವರು ಹೇಳಿದರು.
`ಶೃಂಗಾರ ರಾವಣ':
ಬದುಕಿನಲ್ಲಿ ಅಸಾಮಾನ್ಯ ಶಿಸ್ತು ಹೊಂದಿದ್ದ ಶೇಣಿ ಅವರು ತಮ್ಮ ಜೀವನ ಶೈಲಿಯಲ್ಲಿ ಕಲೆಯನ್ನು ರೂಢಿಸಿಕೊಂಡಿದ್ದರು. ಅವರೊಬ್ಬ ಶೃಂಗಾರ ರಾವಣ ಆಗಿದ್ದರು ಎಂದು ಯಕ್ಷಗಾನ ಕಲಾವಿದ ಶೇಣಿ ಶಂಕರ ಭಟ್ ಶನಿವಾರ ತಮ್ಮ ತಂದೆಯನ್ನು ನೆನಪಿಸಿಕೊಂಡರು.
ಶೇಣಿ ಅವರು ಹರಿದಾಸ ಎನ್ನುವುದನ್ನು ಹೆಚ್ಚಿನವರು ಅಂಗೀಕರಿಸಲಿಲ್ಲ. ಆ ಬಗ್ಗೆ ಅವರಿಗೆ ನೋವಿತ್ತು. ಇದರಿಂದ ಬೇಸತ್ತುಕೊಂಡ ಅವರು ಯಕ್ಷಗಾನಕ್ಕೆ ಬಂದರು.
ಟೆಸ್ಟ್ ಕಲಾವಿದ:
ಶೇಣಿ ಓರ್ವ ಟೆಸ್ಟ್ ಕಲಾವಿದ. ಇಂದಿನವರು 20-20 ಕಲಾವಿದರು. ಗಾಂಧೀ ಭಕ್ತರಾಗಿದ್ದ ಅವರು ಶಂಕರಾಚಾರ್ಯರ ಪರಮ ಶಿಷ್ಯರಾಗಿದ್ದರು. ಮನುಷ್ಯರಲ್ಲಿ ದೇವರನ್ನು ಕಾಣುತ್ತಿದ್ದ ಅವರೊಬ್ಬ `ಫಿಲಾಸಫಿಕಲ್ ಮ್ಯಾನ್' ಎಂದವರು ವಿಶ್ಲೇಷಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಂಸ್ಮರಣಾ ಭಾಷಣ ಮಾಡಿದರು. ಪಾತರ್ಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಅಧ್ಯಕ್ಷ ಶಂಕರ ರೈ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಘಟಕದ ಅಧ್ಯಕ್ಷ ಎಸ್.ವಿ.ಭಟ್, ಯಕ್ಷಗಾನ ಕಲಾವಿದರಾದ ಶೇಣಿ ಶಂಕರ ಭಟ್, ಸುಬ್ರಾಯ ಹೊಳ್ಳ ಕಾಸರಗೋಡು, ತುಳು ಅಕಾಡೆಮಿ ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ಹಾಜರಿದ್ದರು.
ಅಪೂರ್ವ ಕಲಾವಿದರು ಅಧ್ಯಕ್ಷ ಉಮೇಶ್ ಸಾಲಿಯಾನ್ ಸ್ವಾಗತಿಸಿ, ಪಾತರ್ಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಸದಸ್ಯ ಸಂಕಬೈಲು ಸತೀಶ ಅಡಪ ವಂದಿಸಿದರು. ಕಲಾ ಕ್ಷೇತ್ರದ ಸದಸ್ಯ ಎಂ.ನಾ.ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment