Saturday, July 25, 2009

Udupi News

ಕಳವು ಪ್ರಕರಣ 

ದಿನಾಂಕ: 23-24/7/09 ರ ರಾತ್ರಿ ವೇಳೆಯಲ್ಲಿ ಕಾರ್ಕಳ ನಗರ ಠಾಣಾ ಸರಹದ್ದಿನ ಬೈಲೂರಿನ ಉಡುಪಿ. ಜಿ.ಪಂ.ಹಿ.ಪ್ರಾ. ಶಾಲೆ ಬಸ್ರಿ ಬೈಲೂರು ಕಾರ್ಕಳ ತಾಲೂಕು ಇಲ್ಲಿನ ಅಕ್ಷರದಾಸೋಹಕ್ಕೆ ಸಂಬಂಧಿಸಿದ ಅಡುಗೆಕೋಣೆಯ ಬೀಗವನ್ನು ಯಾರೋ ಕಳ್ಳರು ಮುರಿದು ಕೋಣೆಯಲ್ಲಿದ್ದ 2 ಇಂಡೇನ್ ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿರುತ್ತಾರೆ. ಇದರ ಅಂದಾಜು ಬೆಲೆ ರೂ. 1,500/- ಆಗಿರುತ್ತದೆ. ಈ ಬಗ್ಗೆ ಉಡುಪಿ.ಜಿ.ಪಂ.ಹಿ.ಪ್ರಾ.ಶಾಲೆ ಬಸ್ರಿ ಬೈಲೂರಿನ ಮುಖ್ಯೋಪಾಧ್ಯಾಯರಾದ ಕೆ.ಎಸ್.ಹೊಳ್ಳ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 96/09 ಕಲಂ. 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜ್ವರದಿಂದ ಬಳಲಿ ಸಾವು ಪ್ರಕರಣ

ಪಿ.ರಾಮಣ್ಣ(39ವರ್ಷ) ತಂದೆ: ಪಿ.ಅಪ್ಪಣ್ಣ ನಾಯ್ಡು, ವಾಸ: ಎಸ್.ವಿ ಕನ್ಸ್ಟ್ರಕ್ಷನ್, ಟಿ.ಕೆ.ಎಸ್ ನಗರ, ಪ್ಲಾಟ್ ನಂ 56 ತಿರುವತ್ತೂರು, ಚೆನೈ, ತಮಿಳುನಾಡು, ಕೇರ್ಆಫ್: ಸಂದೀಪ್, ಸಿ.ಸಿ.ಎಸ್ ಮಲ್ಪೆ ಎಂಬವರು ಬಂದರಿನಲ್ಲಿ ಪಿಟ್ಟಿಂಗ್ ಸೆಕ್ಷನ್ನಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ನರೇಂದ್ರ ಕುಮಾರ್ (21ವರ್ಷ) ಮದ್ಯಪ್ರದೇಶ ಎಂಬವರು ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಸ್ಥಳೀಯ ವ್ಶೆದ್ಯರಿಂದ ಚಿಕಿತ್ಸೆ ಪಡೆದುಕೊಂಡು ಕೊಡವೂರು ಗ್ರಾಮದ ಕಲ್ಮಾಡಿಯಲ್ಲಿ ತನ್ನ ರೂಮಿನಲ್ಲಿ ವಿಶ್ರಾಂತಿಯಲ್ಲಿದ್ದು ದಿನಾಂಕ 24/07/09 ರಂದು ಸಂಜೆ 5:30 ಗಂಟೆ ಸಮಯಕ್ಕೆ ಇನ್ನೊಬ್ಬ ಕೆಲಸಗಾರ ಕಿಶೋರ ಎಂಬವರು ಫೋನ್ ಮಾಡಿ ನರೇಂದ್ರ ಕುಮಾರ್ರವರು ವಿಪರೀತ ಜ್ವರದಿಂದ ಮಾತಾನಾಡುವುದಿಲ್ಲ ಎಂದು ತಿಳಿಸಿದಂತೆ ಕೂಡಲೇ ಆ್ಯಂಬುಲೆನ್ಸ್ನಲ್ಲಿ ಉಡುಪಿ ಸರಕಾರಿ ಆಸ್ಪತ್ರಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ನರೇಂದ್ರ ಕುಮಾರ್ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ಪಿ.ರಾಮಣ್ಣ(39ವರ್ಷ) ರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 20/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
 
ಎಚ್ ಜಯರಾಮ ಶೆಟ್ಟಿ ತಂದೆ:ಅಣ್ಣಯ್ಯ ಶೆಟ್ಟಿ ವಾಸ: ಕಕ್ಕುಂಜೆ ಎಂಬವರ ಹೆಂಡತಿಯ ಅಜ್ಜಿ ಸುಮಾರು 70 ವರ್ಷ ಪ್ರಾಯದ ಲಕ್ಷ್ಮೀ ಶೆಡ್ತಿ ಗಂಡ: ನಂದ್ಯಪ್ಪ ಶೆಟ್ಟಿ ಎಂಬವರು ಅವರ ಅಕ್ಕ ಮುತ್ತಮ್ಮ ಶೆಡ್ತಿಯವರೊಂದಿಗೆ ಹಳ್ಳಾಡಿಯಲ್ಲಿ ವಾಸವಾಗಿದ್ದು ಅವರಿಗೆ ಯಾರೂ ಗಂಡು ಮಕ್ಕಳು ಇಲ್ಲದಿದ್ದು ಅವರ ಯೋಗಕ್ಷೇಮವನ್ನು ಜಯರಾಮ ಶೆಟ್ಟಿರವರು ವಾರಕ್ಕೊಮ್ಮೆ ಹೋಗಿ ನೋಡಿಕೊಂಡು ಬರುತ್ತಿರುವುದಾಗಿದೆ. ಅವರಿಗೆ ಅಸೌಖ್ಯವಿದ್ದು ಮದ್ದು ಮಾಡುತ್ತಿದ್ದು ದಿನಾಂಕ: 24/07/09 ರಾತ್ರಿಯಿಂದ 25/07/09 ಬೆಳಗ್ಗಿನ ಮಧ್ಯಾವಧಿಯಲ್ಲಿ ಅಸೌಖ್ಯದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಜಯರಾಮ ಶೆಟ್ಟಿರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 26/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
ದಿನಾಂಕ:22/07/09 ರಂದು ಬೆಳಿಗ್ಗೆ 02:00 ಗಂಟೆಗೆ ಮಣಿಪಾಲ ಠಾಣಾ ಸರಹದ್ದಿನ ಶಿವಳ್ಳಿ ಗ್ರಾಮದ ಕೀತರ್ಿ ಸಾಮ್ರಾಟ್ಟಿಲ್ಲಿ ಅಪರ್ಾಟ್ ಮೆಂಟ್ನಲ್ಲಿ ಪ್ರಕಾಶ ಯಾದವ, ಪೌಲ್ , ಕಾತರ್ಿಕ್, ಕಬೀರ್ ಮತ್ತು ಇತರ 5 ಮಂದಿ ವಿದ್ಯಾಥರ್ಿಗಳು ಅಕ್ರಮ ಕೂಟ ಸೇರಿ ಸಾಗರ್ ಬಾಬರ್ ತಂದೆ: ದೀಪಕ್ ಬಾಬ್ವಾರ್ ವಾಸ: ರೂಂ ನಂಬ್ರ 309, ಪ್ರೀಮಿಯರ್ ಗ್ರೀನ್ ವುಡ್ಸ್, ವಿದ್ಯಾರ್ಥನಗರ್ ಮಣಿಪಾಲ ಎಂಬವನಿಗೂ ಈತನ ಗೆಳೆಯರಾದ ಅನುರಾಗ್ ಎಂಬವರಿಗೆ ಹಾಕಿ ಕೋಲಿನಿಂದ, ಟ್ಯೂಬ್ ಲೈಟ್ ಹೋಲ್ಡರ್ ಹಾಗು ಚೂರಿಯಿಂದ ಹೊಡೆದ ಪರಿಣಾಮ ಸಾಗರ್ ಬಾಬರ್ ಹಾಗೂ ಆತನ ಗೆಳೆಯ ಅನುರಾಗ ಗಾಯಗೊಂಡಿದ್ದು ಮಣಿಪಾಲ ಕೆ.ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಸಾಗರ್ ಬಾಬರ್ ರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 132/09 ಕಲಂ. 143,147,148,324,149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣಗಳು
 
ದಿನಾಂಕ;23/07/09 ರಂದು 20-45 ಗಂಟೆಗೆ ಕುಂದಾಪುರ ತಾಲೂಕು ಶೀರೂರು ಗ್ರಾಮದ ಮಾಕರ್ೇಟ್ ಬಳಿ ರಾ.ಹೆ. 17 ರಸ್ತೆಯ ಬದಿಯಲ್ಲಿ . ಮುಲ್ಲಾ ಫಾರೂಕ್ (35) ತಂದೆ :ಮುಲ್ಲಾ ಇಬ್ರಾಹಿಂ, ವಾಸ : ಹಡವಿನ ಕೋಣೆ,ಶಿರೂರು ಗ್ರಾಮ ಕುಂದಾಪುರ ಎಂಬವರು ನಿಂತುಕೊಂಡಿರುವಾಗ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಆರೋಪಿ ಕೆ.ಎ. 25-ಎನ್- 4781 ನೇ ಬೊಲೆರೋ ಜೀಪ್ ಚಾಲಕ ಯೋಗಿಶ್ ಮಂಜಪ್ಪ ನಾಯಕ್ ಎಂಬವನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾ.ಹೆ. 17 ರಸ್ತೆಯ ಎಡ ಬದಿಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಾವಣಗೆರೆ ಮೂಲದ ಮೊಹಮ್ಮದ್ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮುಲ್ಲಾ ಫಾರೂಕ್ ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 176/09 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 24/07/09 ರಂದು ಬೆಳಿಗ್ಗೆ ಸಮಯ ಸುಮಾರು 07-00 ಗಂಟೆಯ ಹೊತ್ತಿಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕರಿಕಟ್ಟೆ ರಾ.ಹೆ 17 ರಸ್ತೆಯ ಎಡ ಬದಿಯಲ್ಲಿ . ರವಿ ಹೋಬಳಿದಾರ್, (29) ತಂದೆಳ ರಾಯ ಹೋಬಳಿದಾರ್, ವಾಸ : ಎಲ್ಲೂರು, ಗೋಳಿಹೊಳೆ ಗ್ರಾಮ ಕುಂದಾಪುರ ಇವರ ಭಾವ ಸುಮಾರು 50 ವರ್ಷ ಪ್ರಾಯದ ಶ್ರೀನಿವಾಸ ಎಂಬವರೊಂದಿಗೆ ಬಸ್ಸಿಗಾಗಿ ಕಾಯುತ್ತಿದ್ದಾಗ ಆರೋಪಿ ಲಾರಿ ಕೆಎ 25-ಸಿ- 1953 ನೇದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ತನ್ನ ಎದುರಿಗಿದ್ದ ವಾಹನವನ್ನು ಹಿಂದಿಕ್ಕಿ ಹೊಗುವ ಭರದಲ್ಲಿ ಭಾವ ಶ್ರೀನಿವಾಸರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿಗೆ, ಎಡ ಕೈಗೆ ಮತ್ತು ಮುಖಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ರವಿ ಹೋಬಳಿದಾರ್, (29) ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 177/09 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಕಳವು ಪ್ರಕರಣ ಪತ್ತೆ
ದಿನಾಂಕ 05/07/09 ರಂದು ರಾತ್ರಿ ಯಾರೋ ಕಳ್ಳರು ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಹಟ್ಟಿಕುದ್ರು ಬೊಬ್ಬರ್ಯ ದೇವಸ್ಥಾನದ ಗರ್ಭಗುಡಿಂು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಒಳ ಪ್ರವೇಶಿಸಿ ಬೊಬ್ಬರ್ಯ ದೇವರ ತಲೆಯ ಮೇಲಿರುವ ಬೆಳ್ಳಿಯ ಒಂದು ಸುತ್ತಿಗೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಬೆಳ್ಳಿಯ ಸುತ್ತಿಗೆಯ ಹಿಡಿ ಸೇರಿ ಇದರ ತೂಕ 300 ಗ್ರಾಂ ಅಗಿರುತ್ತದೆ. ಇದರ ಅಂದಾಜು ಬೆಲೆ 7500/- ಆಗಿರುತ್ತದೆ. ಈ ಬಗ್ಗೆ ದಿನಾಂಕ 23/07/09 ರಂದು ಕುಂದಾಪುರ ಪೊಲೀಸರು ದೇವಸ್ಥಾನದ ಕಳವು ಮಾಡಿದ ಕಳ್ಳರನ್ನು ಹಿಡಿದು ಕರೆದುಕೊಂಡು ಬಂದಿದ್ದು ದೇವಸ್ಥಾನದಿಂದ ಕಳವು ಮಾಡಿದ ಬಗ್ಗೆ ನುಡಿದಿರುತ್ತಾನೆ, ಈ ಬಗ್ಗೆ ಕೃಷ್ಣ ಪೂಜಾರಿ ತಂದೆ: ಗಣಪ ಪೂಜಾರಿ ವಾಸ: ಹೊಸಮನೆ ಹಟ್ಟಿಕುದ್ರು ಬಸ್ರೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ಕುಂದಾಪುರ ಠಾಣೆಗೆ ಬಂದು ನೀಡಿದ ಫಿರ್ಯಾದಿಯಂತೆ ಅಪರಾಧ ಕ್ರಮಾಂಕ 218/09 ಕಲಂ 457 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಲಾಗಿದೆ.
ದಿನಾಂಕ 05/07/09 ರಂದು ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶ್ರೀ ಬೈಲುಚಿಕ್ಕು ದೈವಸ್ಥಾನದ ಚೌಳಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ಪ್ರವೇಸಿಸಿ ಗರ್ಭ ಗುಡಿಗೆ ಬಾಗಿಲಿಗೆ ಹಾಕಿದ ಬೀಗವನ್ನು ಸಹ ಒಡೆದು ಒಳ ಪ್ರವೇಶಿಸಿ ಚಿಕ್ಕು ದೇವರ ಕಿವಿಯಲ್ಲಿರುವ ಒಂದು ಜೊತೆ ಚಿನ್ನದ ಬೆಂಡೋಲೆ, ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಹಾಗೂ ಬೆಳ್ಳಿಯ ತಾಳಿ ಕಾಲಿನಲ್ಲಿದ್ದ ಒಂದು ಜೊತೆ ಬೊತೆ ಬೆಳ್ಳಿಯ ಕಾಲು ಚೈನನ್ನು ಕಳವು ಮಾಕೊಂಡು ಹೋಗಿರುವುದಾಗಿದೆ ಇವುಗಳ ಒಟ್ಟು ಮೌಲ್ಯ 6300/- ರೂ ಆಗಬಹುದು ದಿನಾಂಕ 23/07/09 ರಂದು ಕುಂದಾಪುರ ಪೊಲೀಸರು ದೇವಸ್ಥಾನದ ಕಳವು ಮಾಡಿದ ಕಳ್ಳರನ್ನು ಹಿಡಿದು ಕರೆದುಕೊಂಡು ಬಂದಿದ್ದು ಆತನು ನಮ್ಮ ದೇವಸ್ಥಾನದಿಂದ ಕಳವು ಮಾಡಿದ ಬಗ್ಗೆ ನುಡಿದಿರುತ್ತಾನೆ, ಆದುದರಿಂದ ಈ ದಿನ ರಂಗನಾಥ ಕಾರಂತ್ ತಂದೆ:ದಿ/ನಾಗಪ್ಪ ಕಾರಂತ್ ವಾಸ:ಹನುಮಾನ್ ಗ್ಯಾರೇಜ್ ಬಳಿ ವಡೇರಹೋಬಳಿ ಗ್ರಾಮ ಕುಂದಾಪುರ ತಾಲೂಕು ಕುಂದಾಪುರ ಠಾಣೆಗೆ ಬಂದು ನೀಡಿದ ಫಿರ್ಯಾದಿಯಂತೆ ಅಪರಾಧ ಕ್ರಮಾಂಕ 219/09 ಕಲಂ 457 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಲಾಗಿದೆ.
 
ಆತ್ಮಹತ್ಯೆ ಪ್ರಕರಣ
ಬಾಬು, ತಂದೆ: ಶೀನ ಮೋಗವೀರ, ವಾಸ: ನಲ್ತೂರು, ಯಡಾಡಿ ಮತ್ಯಾಡಿ ಗ್ರಾಮಕುಂದಾಪುರ ತಾಲೂಕು ರವರ ತಮ್ಮ 27 ವರ್ಷದ ಚಂದ್ರರವರು ಒಂದು ವಾರದ ಹಿಂದೆ ಬೆಂಗಳೂರಿನಿಂದ ಊರಿಗೆ ಬಂದಿದ್ದು, ವಿಪರೀತ ಮದ್ಯಪಾನ ಮಾಡುತ್ತಿದ್ದು ಸಾಲವಿರುವುದಾಗಿ ತಿಳಿಸಿದ್ದು ಈ ದಿನ ದಿನಾಂಕ 24.07.09 ರಂದು ಮದ್ಯಾಹ್ನ ಸುಮಾರು 2;00 ಗಂಟೆ ಸಮಯಕ್ಕೆ ನರೆಮನೆಯ ಗಣೇಶ ಎಂಬವರು ದನ ಮೇಯಿಸಲು ಹೋದವರು ಮನೆಗೆ ಬಂದು ಚಂದ್ರನು ಸುರಿಗೆ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿರುವುದಾಗಿದೆ. ಎಂದು ತಿಳಿಸಿದ್ದು ವಿಪರೀತ ಮದ್ಯಪಾನ ಮಾಡುತ್ತಿದ್ದು ಸಾಲ ಮಾಡಿದ್ದುದ್ದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಾಬು, ರವರು ನೀಡಿದ ದೂರಿನ ಮೇರೆಗೆ ಕೋಟಾ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 24.7.09 ರಂದು ಬೆಳಿಗ್ಗೆ ಸುಮಾರು 07:30 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಚೌಕಿಯಂಗಡಿ ಜಿ.ಪ.ಹಿ.ಪ್ರಾ. ಶಾಲೆಯ ಬಳಿಯ ವಾಸಿ ಸುಮಾರು 68 ವರ್ಷ ಪ್ರಾಯದ ಶ್ರೀಮತಿ ಸೀತಾ ಶೆಟ್ಟಿ ಗಂಡ:ದಿವಂಗತ ಸುಂದರ ಶೆಟ್ಟಿ ಎಂಬವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಳಿಯ ಗೇರು ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶೇಖರ ಶೆಟ್ಟಿ (46) ತಂದೆ: ದಿ. ಸುಂದರ ಶೆಟ್ಟಿ ವಾಸ: ಉಷಾ ನಿಲಯ, ಪೇರಡ್ಕ, ಮಾಳ ಗ್ರಾಮ, ಕಾರ್ಕಳ ತಾಲೂಕು. ರವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆ ಪ್ರಕರಣ

ಕುಂದಾಪುರ ತಾಲೂಕು ಶಿರೂರು ಗ್ರಾಮದ ಶಿರೂರು ಮಾಕರ್ೇಟ್ ಆಝಾದ್ ಕಾಲೋನಿ ಎಂಬಲ್ಲಿನ ವಾಸಿ ಶ್ರೀಮತಿ ಗುಲ್ ಝಾರ್ (37) ಗಂಡ : ಅಕ್ಬರ್, ಶರೀಫ್, ವಾಸ : ಆಝಾದ್ ಕಾಲೋನಿ ಶಿರೂರು ಗ್ರಾಮ, ಕುಂದಾಪು ಇವರು ಠಾಣೆಗೆ ಬಂದು ಹಾಜರಾಗಿ ದಿನಾಂಕ 13/07/09 ರಂದು ಬೆಳಿಗ್ಗೆ 09-30 ಗಂಟೆಗೆ ನನ್ನ ಗಂಡ ಅಕ್ಬರ್ ಶರೀಫ್ ಪ್ರಾಯ (49) ವರ್ಷ ಎಂಬವರು ಬಟ್ಟೆಗೆ ಇಸ್ತ್ರಿ ಹಾಕಿಕೊಂಡು ಬರುತ್ತೇನೆ ಎಂದು ಹೇಳಿಹೋದವರು ಈ ತನಕ ಮನೆಗೆ ವಾಪಾಸು ಬಂದಿರುವುದಿಲ್ಲವಾಗಿ ಕಾಣೆಯಾಗಿರುತ್ತಾರೆ ಎಂಬುದಾಗಿ ದೂರು ನೀಡಿದ್ದು ಅವರ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 178/09 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
 
 
ಇತರೆ ಪ್ರಕರಣಗಳು
ಉಡುಪಿನಗರ ಠಾಣೆಯ ಪೊಲೀಸ್ ಉಪನೀರೀಕ್ಷಕರು ಶ್ರೀ ಮಾರುತಿ ನಾಯಕ್ ರವರು ಈ ದಿನ ದಿನಾಂಕ: 24/07/09 ರಂದು ಸಿಬ್ಬಂದಿಯವರಾದ ಎ.ಪಿ.ಸಿ. 158 ನೇ ರವರ ಜೊತೆಯಲ್ಲಿ ಇಲಾಖಾ ಜೀಪಿನಲ್ಲಿ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ರಾತ್ರಿ 02:45 ಗಂಟೆಗೆ ಉಡುಪಿ ಐಡಿಯಲ್ ಜಂಕ್ಷನ್ ಬಳಿ ತಲುಪಿದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಹಾಗೂ ಆತನು ಯಾವುದೋ ಬೇವಾರೆಂಟ್ ತಕ್ಷೀರು ಮಾಡುವ ಇರಾದೆಯಿಂದ ಇದ್ದುದಾಗಿ ಬಲವಾದ ಸಂಶಯ ಬಂದುದರಿಂದ ವಶಕ್ಕೆ ತೆಗೆದುಕೊಂಡಿದ್ದು ಈತನು ಎ. ಬಿ. ನಾಗರಾಜ ಪ್ರಾಯ: 35 ವರ್ಷ, ತಂದೆ: ದಿ ಬೊಬಯ್ಯ ಗೌಡ, ವಾಸ: ಒಡಗಿನಬೈಲು ಶಾಲೆಯ ಬಳಿ, ಹೊನ್ನಳ್ಳಿ ಅಂಚೆ, ಶೃಂಗೇರಿ. ಚಿಕ್ಕಮಗಳೂರು ಜಿಲ್ಲೆ, ಎಂಬುದಾಗಿ ತಿಳಿಸಿದ್ದು ಈ ಬಗ್ಗೆ ಪೊಲೀಸ್ ಉಪನೀರೀಕ್ಷಕರು ಶ್ರೀ ಮಾರುತಿ ನಾಯಕ್ ಉಡುಪಿನಗರ ಠಾಣೆಯ ರವರು ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 241/09 ಕಲಂ 41(1)(ಎ) 109 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 23-07-09 ರಂದು ಅಪರಾಹ್ನ 5:00 ಗಂಟೆ ವೇಳೆಗೆ ಆಹಾರ ಮತ್ತು ನಾಗರಿಕ ಪೂರೈಕೆ ನಿರೀಕ್ಷಕರು ಕುಂದಾಪುರ ಇವರು ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 17 ರ ಬಳಿ ರಥಬೀದಿಯಲ್ಲಿರುವ ಪ್ರಿಯಾ ಡ್ರೆಸ್ ಸೆಂಟರ್ ಎಂಬಲ್ಲಿ ಅಕ್ರಮವಾಗಿ ಯಾವುದೇ ದಾಖಲೆ ಪತ್ರಗಳಿಲ್ಲದೇ ರಿಕ್ಷಾಗಳಿಗೆ ಅಳವಡಿಸುವ ಎಲ್ಪಿಜಿ ಸಿಲಿಂಡರ್ ದಾಸ್ತಾನಿರಿಸಿರುವುದಾಗಿ ಕೆ. ರಾಮಚಂದ್ರ ಬನ್ನಂತಾಯ ಫೂಡ್ ಇನ್ಸ್ಪೇಕ್ಟರ್ ಕುಂದಾಪುರ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಕುಂದಾಪುರ ತಾಲೂಕು ಶಿರಸ್ತೆದಾರರಾದ ಶ್ರೀ ತಿಪ್ಪೆಸ್ವಾಮಿ, ಆಹಾರ ನಿರೀಕ್ಷಕರಾದ ಶ್ರೀ ನರಸಿಂಹ ಇವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿ ಮೈಕಲ್ರೆಬೆರೋ ತಂದೆ: ದಿವಗಂತ ಆಲ್ಬಟರ್್ರೆರೋ ವಾಸ: ಪ್ರಿಯಾ ಡ್ರೆಸ್ ಸೆಂಟರ್ ಹೆಮ್ಮಾಡಿ ಗ್ರಾಮ ಕುಂದಾಪುರ ಈತನು ಸಿಲಿಂಡರ್ಗಳನ್ನು ಖರೀದಿಸಿದ ಬಗ್ಗೆ ಖರೀದಿ ಬಿಲ್ಲುಗಳಾಗಲೀ, ಮಾರಟ ಮಾಡುವ ಬಗ್ಗೆ ಮಾರಟ ಬಿಲ್ಲುಗಳಾಗಲೀ, ಪಂಚಾಯತ್ ಪರವಾನಿಗೆಯಾಗಲೀ ಇಲ್ಲದೇ ಇರುವುದನ್ನು ಪತ್ತೆ ಹಚ್ಚಿರುವುದಾಗಿದೆ ಈ ಬಗ್ಗೆ ಕೆ. ರಾಮಚಂದ್ರ ಬನ್ನಂತಾಯ ಫೂಡ್ ಇನ್ಸ್ಪೇಕ್ಟರ್ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 217/09 ಕಲಂ 3 ಎಶೆನ್ಸಿಯಲ್ಕಮಾಂಡಿಟೀಸ್ ಆಕ್ಟ್ 1955 2(ಇ)(ಜೆ)4(1)ಇ)ಪೆಟ್ರೋಲಿಯಮ್ ಆಕ್ಟ್ 1934 10 ಎ,10ಎಎ ಎಶೆನ್ಸಿಯಲ್ಕಮಾಂಡಿಟೀಸ್ ಆಕ್ಟ್ 1955 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 11.07.2009 ರಂದು 14:45 ಗಂಟೆಗೆ ಶಂಕರಪುರದ ಇನ್ನಂಜೆ ಗ್ರಾಮದ ಲೆವಿನಾ ಬೇಕರಿ ಬಳಿ, ಒಲಿವರ್ ರೆಬೆಲ್ಲೊ, 37 ವರ್ಷ, ತಂದೆ: ಇಂದೋರ್ ರೆಬೆಲ್ಲೊ, ವಾಸ: ಹ್ಯೂಮನ್ ನೆಸ್ಟ್, ಶಂಕರಪುರ, ಉಡುಪಿ ತಾಲೂಕು ಎಂಬವರು ಪತ್ನಿ ಹಾಗೂ ಮಗಳ ಜೊತೆ ಶಂಕರಪುರ ಪೇಟೆಗೆ ಹೋಗಿ ವಾಪಸ್ಸು ಮನೆ ಕಡೆಗೆ ಬರುತ್ತಿರುವಾಗ ಆರೋಪಿ ರೊನಾಲ್ಡ್ ಕ್ಯಾಸ್ತೆಲಿನೊ ಎಂಬಾತನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಒಲಿವರ್ ರೆಬೆಲ್ಲೊ, ರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 145/09 ಕಲಂ 341,504,506 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment