ಕಾಸರಗೋಡು: ನಗರದ ಎಲೆಕ್ಟ್ರಾನಿಕ್ಸ್ ಉಪಕರಣ ಮಾರಾಟ ಮಳಿಗೆಯ ಶಟರ್ ಮುರಿದು ಕಳವು ನಡೆಸಿದ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ ಮಾಲಕರು ಅಂಗಡಿಗೆ ಬಂದಾಗಲೇ ಕಳವು ನಡೆದಿರುವುದು ಅರಿವಿಗೆ ಬಂತು. 25 ಮೊಬೈಲ್ ಫೋನ್ ಮತ್ತು 2 ಡಿಜಿಟಲ್ ಕ್ಯಾಮೆರಾಗಳು ಕಳವಾಗಿದೆ. ಅಂಗಡಿಯ ಮೇಲಂತಸ್ತಿನ ಶಟರ್ ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಬೀಗ ಮತ್ತು ಲಾಕರ್ ಒಡೆಯಲಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೇವಿಂಜೆ ಕೊಲೆ: ಮಂಪರು ಪರೀಕ್ಷೆ
ಕಾಸರಗೋಡು: ಸಿ.ಪಿ.ಎಂ. ಕಾರ್ಯಕರ್ತ ಹಾಗೂ ಗುತ್ತಿಗೆದಾರನಾಗಿದ್ದ ಟಿ.ಅಬ್ದುಲ್ ರಹಿಮಾನ್(50) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಪತ್ನಿ ಮತ್ತು ಇಬ್ಬರು ಮಕ್ಕಳ ಸಹಿತ ಐವರನ್ನು ಮಂಪರು ಪರೀಕ್ಷೆ ಮಾಡುವಂತೆ ಕಾಸರಗೋಡು ಪ್ರಥಮ ದಜರ್ೆ ನ್ಯಾಯಾಲಯ ಅನುಮತಿ ನೀಡಿದೆ.
ಪತ್ನಿ ಆಸ್ಯಾ, ಆಕೆಯ ಮಕ್ಕಳಾದ ಇಷರ್ಾದ್, ರಶಾದ್, ಪತ್ನಿಯ ಸಹೋದರ ಇಸ್ಮಾಯಿಲ್, ಭಾವ ಅಬ್ಬಾಸ್ ಎಂಬವರನ್ನು ಮಂಪರು ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಕ್ರೈಂ ಬ್ರ್ಯಾಂಚ್ಗೆ ಆದೇಶ ನೀಡಿದೆ.
2002 ಸೆ.25ರಂದು ಬೇವಿಂಜೆಯ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣ ಈಗಲೂ ನಿಗೂಢವಾಗಿ ಉಳಿದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
ಕಾಞಂಗಾಡು ನಿವಾಸಿ ಅಬುದಾಭಿಯಲ್ಲಿ ಕೊಲೆ
ಕಾಸರಗೋಡು: ಕಾಞಂಗಾಡು ನಿವಾಸಿ ಅಬುದಾಭಿಯ ಅಂಗಡಿಯೊಂದರಲ್ಲಿ ಇರಿದು ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಕಾಞಂಗಾಡಿನ ಕೊಳವಯಲಿನ ನಿವಾಸಿ ಕೋಳಿಚ್ಚಾಲ್ ರಸಾಕ್ ಯಾನೆ ಅಬ್ದುಲ್ ರಸಾಕ್(38) ಸಾವನ್ನಪ್ಪಿದ ವ್ಯಕ್ತಿ. ಇವರು ಕಳೆದ 14 ವರ್ಷಗಳಿಂದ ಅಬುದಾಭಿಯಲ್ಲಿ ವ್ಯಾಪಾರ ಸಂಸ್ಥೆ ನಡೆಸುತ್ತಿದ್ದರು. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ತಳಂಗೆರೆ ಕಳವು ಸುಳಿವು ಲಭ್ಯ
ಕಾಸರಗೋಡು: ಕಾಸರಗೋಡು ಮತ್ತು ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸರಣಿ ಕಳವು ನಡೆಸಿದ ಆರೋಪಿ ಮುತ್ತಪ್ಪ ಯಾನೆ ಸುರೇಶ್ ತಳಂಗೆರೆ ಕಳವು ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ತಳಂಗೆರೆ ಕಡವತ್ ಹಾರಿಸ್ ಎಂಬವರ ಮನೆಯಲ್ಲಿ ಕಳೆದ ಜ.31ರಂದು 30 ಪವನ್ ಚಿನ್ನಾಭರಣ ಮತ್ತು 1.5 ಲಕ್ಷ ರೂ. ಕಳವು ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಈತನಿಂದ ಮತ್ತಷ್ಟು ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.
ಬಸ್ಸು ಡಿಕ್ಕಿ : ವಿದ್ಯಾಥರ್ಿನಿಗೆ ಗಂಭೀರ
ಕಾಸರಗೋಡು: ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದು ಪ್ಲಸ್ ವನ್ ವಿದ್ಯಾಥರ್ಿನಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಕುಣಿಯ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಕುಣಿಯ ಸಕರ್ಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿನಿ ಹಾಗೂ ಸ್ಥಳೀಯ ಹಮೀದ್ ಎಂಬವರ ಪುತ್ರಿ ಸಾಜಿದಾ(17) ಗಾಯಾಳು. ಶಾಲೆಯ ಮುಂಭಾಗದಲ್ಲಿ ಬಸ್ಸು ಡಿಕ್ಕಿ ಹೊಡೆದಿದೆ. ಈಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಣಿಯ ಸಕರ್ಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿನಿ ಹಾಗೂ ಸ್ಥಳೀಯ ಹಮೀದ್ ಎಂಬವರ ಪುತ್ರಿ ಸಾಜಿದಾ(17) ಗಾಯಾಳು. ಶಾಲೆಯ ಮುಂಭಾಗದಲ್ಲಿ ಬಸ್ಸು ಡಿಕ್ಕಿ ಹೊಡೆದಿದೆ. ಈಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷ ಸೇವಿಸಿ ಗೃಹಿಣಿ ಸಾವು
ಕಾಸರಗೋಡು: ಗೃಹಿಣಿಯೊಬ್ಬರು ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ಬೇಕಲ ಸಮೀಪದ ಕೋಟಿಕುಳ ಎಂಬಲ್ಲಿ ನಡೆದಿದೆ.
ವಿಷ ಸೇವಿಸಿ ಅಸ್ವಸ್ಥಗೊಂಡ ಇವರನ್ನು ನಗರದ ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಿಲ್ಲ.
ಅನಾರೋಗ್ಯದಿಂದ ಜುಗುಪ್ಸೆಗೊಂಡು ಈ ದುಸ್ಸಾಹಸಕ್ಕಿಳಿದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇಬ್ಬರು ಮಕ್ಕಳಿದ್ದಾರೆ.
ವಿಷ ಸೇವಿಸಿ ಅಸ್ವಸ್ಥಗೊಂಡ ಇವರನ್ನು ನಗರದ ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಿಲ್ಲ.
ಅನಾರೋಗ್ಯದಿಂದ ಜುಗುಪ್ಸೆಗೊಂಡು ಈ ದುಸ್ಸಾಹಸಕ್ಕಿಳಿದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇಬ್ಬರು ಮಕ್ಕಳಿದ್ದಾರೆ.
ಹಲ್ಲೆ: ಆಸ್ಪತ್ರೆಗೆ
ಕಾಸರಗೋಡು: ನವ ಸತಿ-ಪತಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಶುಕ್ರವಾರ ರಾತ್ರಿ ಪೊವ್ವಲ್ನಲ್ಲಿ ನಡೆದಿದೆ.
ಗಾಯಾಳುಗಳಾದ ಕುಂಬಳೆ ಸಮೀಪದ ಪೆರುವಾಡ್ ಕಡಪ್ಪುರದ ಅಬ್ದುಲ್ಲರ ಪುತ್ರ ಎ.ಬಿ.ರಿಫಾಯಿ ಮತ್ತು ಆತನ ಪತ್ನಿ ನಸೀಮಾ ನಗರದ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪೊವ್ವಲ್ನ ತನ್ನ ಪತ್ನಿಯ ಮನೆಗೆ ಹೋಗಿದ್ದ ವೇಳೆ ಹಲ್ಲೆ ನಡೆದಿದೆ. ಮನೆಯವರ ಪ್ರತಿಭಟನೆಯ ಮಧ್ಯೆ ವಿವಾಹವಾದುದೇ ಘಟನೆಗೆ ಕಾರಣವೆನ್ನಲಾಗಿದೆ.
ಗಾಯಾಳುಗಳಾದ ಕುಂಬಳೆ ಸಮೀಪದ ಪೆರುವಾಡ್ ಕಡಪ್ಪುರದ ಅಬ್ದುಲ್ಲರ ಪುತ್ರ ಎ.ಬಿ.ರಿಫಾಯಿ ಮತ್ತು ಆತನ ಪತ್ನಿ ನಸೀಮಾ ನಗರದ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪೊವ್ವಲ್ನ ತನ್ನ ಪತ್ನಿಯ ಮನೆಗೆ ಹೋಗಿದ್ದ ವೇಳೆ ಹಲ್ಲೆ ನಡೆದಿದೆ. ಮನೆಯವರ ಪ್ರತಿಭಟನೆಯ ಮಧ್ಯೆ ವಿವಾಹವಾದುದೇ ಘಟನೆಗೆ ಕಾರಣವೆನ್ನಲಾಗಿದೆ.
ನಿಧನ
ಕೆ.ಪದ್ಮನಾಭನ್
ಕಾಸರಗೋಡು: ನೇಯ್ಗೆ ಕಾಮರ್ಿಕ ತೆರುವತ್ ಸಿರಾಮಿಕ್ಸ್ ರಸ್ತೆಯ ಪುದಿಯಪುರ ನಿವಾಸಿ ಕೆ.ಪದ್ಮನಾಭನ್ ನಿಧನರಾದರು.
ಕಾಸರಗೋಡು ವೀವರ್ಸ್ ಕೋ.ಆಪರೇಟಿವ್ ಸೊಸೈಟಿಯ ನಿದರ್ೇಶಕರಾಗಿದ್ದರು. ಪತ್ನಿ ನಾರಾಯಣಿ ಮತ್ತು ನಾಲ್ವರು ಮಕ್ಕಳಿದ್ದಾರೆ.
ಕೆ.ಪದ್ಮನಾಭನ್
ಕಾಸರಗೋಡು: ನೇಯ್ಗೆ ಕಾಮರ್ಿಕ ತೆರುವತ್ ಸಿರಾಮಿಕ್ಸ್ ರಸ್ತೆಯ ಪುದಿಯಪುರ ನಿವಾಸಿ ಕೆ.ಪದ್ಮನಾಭನ್ ನಿಧನರಾದರು.
ಕಾಸರಗೋಡು ವೀವರ್ಸ್ ಕೋ.ಆಪರೇಟಿವ್ ಸೊಸೈಟಿಯ ನಿದರ್ೇಶಕರಾಗಿದ್ದರು. ಪತ್ನಿ ನಾರಾಯಣಿ ಮತ್ತು ನಾಲ್ವರು ಮಕ್ಕಳಿದ್ದಾರೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment