Wednesday, July 22, 2009

ಬಾವಿಯಲ್ಲಿ ಶವ ಪತ್ತೆ/dead body Found

ಕಾಸರಗೋಡು: ತೃಕ್ಕರಿಪುರ ಸಮೀಪದ ಚೀಮೇನಿ ಸಕರ್ಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾಥರ್ಿನಿಯ ಶವ ಮನೆ ಬಳಿಯ ಬಾವಿಯಲ್ಲಿ ಬುಧವಾರ ಪತ್ತೆಯಾಗಿದೆ.
ಶವವನ್ನು ಸ್ಥಳೀಯ ನಿವಾಸಿ ಪಿ.ಪಿ.ಕುಞ್ಞಿಕಣ್ಣನ್ ಅವರ ಪುತ್ರಿ ಪಿ.ಪಿ.ನೀನಾ(20) ಎಂದು ಗುರುತಿಸಲಾಗಿದೆ.
ಕಾಲೇಜಿನ ಶಿಕ್ಷಣಕ್ಕೆ ಸಂಬಂಧಿಸಿ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂಬ ಅಭಿಪ್ರಾಯ ಕೇಳಿಬಂದಿದೆ. ಕಾಲೇಜಿಗೆ ಬುಧವಾರ ರಜೆ ಸಾರಲಾಗಿತ್ತು.

ಯುವತಿಯ ಅಪಹರಣ ಯತ್ನ: ಯುವಕನ ಸೆರೆ
ಕಾಸರಗೋಡು: ತಾಯಿಯೊಂದಿಗೆ ನಗರದ ಬಸ್ಸು ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದ ಯುವತಿಯ ಮೇಲೆ ಆಮಿಷ ತೋರಿ ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಯುವಕನನ್ನು ನಗರ ಪೊಲೀಸರು ಬುಧವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಉಪ್ಪಳದ ಮುಸೋಡಿಯ 23ರ ಹರೆಯದ ಯುವತಿ ಅಪಹರಣಕ್ಕೆ ತುತ್ತಾದವಳು. ಯುವತಿಯೊಡನೆ ತಂಪು ಪಾನೀಯ ಕುಡಿಯಲು ಒತ್ತಾಯ ಮಾಡಿದಾಗ ಆಕೆ ಬೊಬ್ಬಿಟ್ಟಿದ್ದಾಳೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರ ನೆರವಿನಿಂದ ಸ್ಥಳೀಯರು ಯುವಕನನ್ನು ಬೆನ್ನಟ್ಟಿ ಹಿಡಿದರು. ಯುವತಿಯ ತಾಯಿ ಅಂಗಡಿಯಂದರಿಂದ ಸಾಮಗ್ರಿ ಖರೀದಿಸಲು ಹೊರಟಿದ್ದ ಸಮಯ ಕಾದು ಯುವಕ ಈ ಕೃತ್ಯವೆಸಗಿದ್ದಾನೆ.

ದುಬೈಯಿಂದ ಹೊರ ಯುವಕ ನಾಪತ್ತೆ
ಕಾಸರಗೋಡು: ಕೊಲ್ಲಿರಾಷ್ಟ್ರದಿಂದ ತಂದೆಗೆ ಹೇಳದೆ ಕೇರಳಕ್ಕೆ ಬಂದ ಯುವಕ ನಾಪತ್ತೆಯಾಗಿದ್ದಾನೆ ಎಂದು ಸಂಬಂಧಿಕರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಣ್ಣೂರಿನ ಅಬ್ದುಲ್ ಮಜೀದ್ ಎಂಬವರ ಪುತ್ರ ನಿಸಾರ್ ಮಜೀದ್(21) ಎಂಬಾತನೇ ಕಾಣೆಯಾದ ಯುವಕ. ಜೂನ್ 28ರಂದು ದುಬೈಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿಳಿದ ಈತ  ಮಂಗಳೂರಿನತ್ತ ಪಯಣ ಬೆಳೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಸ್ಸಿಗೆ ಕಲ್ಲೆಸೆದು ಹಾನಿ
ಕಾಸರಗೋಡು: ಕಾಸರಗೋಡು-ಪೆರ್ಲ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸನ್ನು ಎಡನೀರು ಶಾಲಾ ವಿದ್ಯಾಥರ್ಿಗಳು  ಕಲ್ಲೆಸೆದು ಹಾನಿಗೊಳಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಬಸ್ಸಿನ ಹಿಂಭಾಗದ ಗಾಜು ಸಂಪೂರ್ಣವಾಗಿ ಪುಡಿಯಾಗಿದೆ. ಬಸ್ಸಿಗೆ ಎಲ್ಲಾ ವಿದ್ಯಾಥರ್ಿಗಳು ಹತ್ತುವುದನ್ನು ವಿರೋಧಿಸಿದಾಗ ವಿದ್ಯಾಥರ್ಿಗಳು ಈ ಕೃತ್ಯವೆಸಗಿದ್ದಾರೆ.

No comments:

Post a Comment