ಕಾಸರಗೋಡು: ಪೆರ್ಲ ನಲಂದಾ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕತರ್ೆ ಹಾಗೂ ತೃತೀಯ ಬಿ.ಬಿ.ಎಂ. ವಿದ್ಯಾಥರ್ಿನಿ ಶ್ವೇತ ರಮ್ಯಾ ಅವರಿಗೆ ಕಣ್ಣೂರು ವಿಶ್ವವಿದ್ಯಾನಿಲಯದ 2008-09ನೇ ಸಾಲಿನ ಎನ್.ಎಸ್.ಎಸ್. ಉತ್ತಮ ಸ್ವಯಂಸೇವಕಿ ಪ್ರಶಸ್ತಿಯನ್ನು ಪಡೆದುಕೊಂಡರು.
ಇತ್ತೀಚೆಗೆ ಕಣ್ಣೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಕುಲಪತಿ ಮೈಕೆಲ್ ತರಗನ್ ಪ್ರಶಸ್ತಿ ವಿತರಿಸಿದರು.
ಅಭಿನಂದನೆ: ಕಾಲೇಜಿಗೆ ಪ್ರಪ್ರಥಮ ಬಾರಿಗೆ ಪ್ರಶಸ್ತಿ ಗಳಿಸಿದ ಶ್ವೇತ ರಮ್ಯಾ ಅವರನ್ನು ಕಾಲೇಜಿನ ಆಡಳಿತ ನಿದರ್ೇಶಕ ಅಹಮ್ಮದ್ ಕಬೀರ್, ಪ್ರಾಂಶುಪಾಲ ಜೇಕಬ್ ಟಿ.ಟಿ, ಎನ್.ಎಸ್.ಎಸ್. ಯೋಜನಾಧಿಕಾರಿ ಉದಯರಾಜ ಅರಳಿತ್ತಾಯ ಕೆ.ವಿ. ಹಾಗೂ ಉಪನ್ಯಾಸಕ ಮತ್ತು ವಿದ್ಯಾಥರ್ಿ ವೃಂದ ಅಭಿನಂದಿಸಿದೆ.
ಸಹಸ್ರ ನಾಳಿಕೇರ ಮಹಾಗಣಪತಿ ಯಾಗ ಕಾರ್ಯಾಲಯಕ್ಕೆ ಚಾಲನೆ
ಕಾಸರಗೋಡು: ಸಾರ್ವಜನಿಕ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಬರುವ ತಿಂಗಳು ನಡೆಯಲಿರುವ ಶತರುದ್ರಾಭಿಷೇಕ ಮತ್ತು ಸಹಸ್ರ ನಾಳಿಕೇರ ಮಹಾಗಣಪತಿ ಯಾಗದ ಕಾರ್ಯಾಲಯವನ್ನು ಇಲ್ಲಿನ ಜಿಲ್ಲಾ ಸಹಕಾರಿ ಬ್ಯಾಂಕಿನ ಸಮೀಪದ ಕಟ್ಟಡದಲ್ಲಿ ಇತ್ತೀಚೆಗೆ ಶ್ರೀನಿವಾಸ ಶೆಣೈ ಉದ್ಘಾಟಿಸಿದರು.
ಆ.24ರಂದು ಶತರುದ್ರಾಭಿಷೇಕ ಮತ್ತು 25ರಂದು ಸಹಸ್ರ ನಾಳಿಕೇರ ಮಹಾಗಣಪತಿ ಯಾಗ ಜರುಗಲಿದೆ. ಇದಕ್ಕೆ ಅಗತ್ಯವಿರುವ ಪೂಜಾದ್ರವ್ಯಗಳನ್ನು ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Wednesday, July 22, 2009
ಶ್ವೇತ ರಮ್ಯಾಗೆ ಎನ್.ಎಸ್.ಎಸ್. ಪ್ರಶಸ್ತಿ/NSS Best Volenteer Award
Subscribe to:
Post Comments (Atom)
No comments:
Post a Comment