
ಕಾಸರಗೋಡು: ವ್ಯಾಸರ ಕೃತಿಗಳಿಂದ ಕಾಸರಗೋಡು ಕನರ್ಾಟಕಕ್ಕೆ ಮತ್ತಷ್ಟು ಹತ್ತಿರವಾಗಿದೆ ಎಂದು ಪತ್ರಕರ್ತ, ಸಾಹಿತಿ ಜಿ.ಪಿ.ಬಸವರಾಜು ಭಾನುವಾರ ಇಲ್ಲಿ ನುಡಿದರು.
ಚನ್ನಪಟ್ಟಣದ ಪಲ್ಲವ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಯೋಗದಲ್ಲಿ ಕಾಸರಗೋಡಿನ ಬೀರಂತಬೈಲು ಲಯನ್ಸ್ ಸೇವಾ ಮಂದಿರದಲ್ಲಿ ಎಂ.ವ್ಯಾಸ ಸ್ಮರಣೆ ಮತ್ತು ವ್ಯಾಸರ ಕೆಂಡ(ಕತೆಗಳು) ಮತ್ತು ಮೌನಗರ್ಭ(ಲೇಖನಗಳು) ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವ್ಯಾಸರು ಓರ್ವ ಬೆಚ್ಚಗಿನ ಸ್ನೇಹಿತ; ಆತ್ಮೀಯ ವ್ಯಕ್ತಿ ಎಂದವರು ಗುಣಗಾನ ಮಾಡಿದರು.
ವ್ಯಾಸರ ಬಗ್ಗೆ ಸಂಸ್ಮರಣಾ ಭಾಷಣ ಮಾಡಿದ ಎಚ್.ರಮೇಶ್ ಕೆದಿಲಾಯ, ವ್ಯಾಸರು ಸಾಹಿತಿಯಾಗಿ ಹುಟ್ಟು-ಸಾವನ್ನು ಅತ್ಯಂತ ತೀವ್ರವಾಗಿ ಅನುಭವಿಸಿದರು. ಬದುಕಿನ ಅರ್ಧ ಸತ್ಯಗಳನ್ನು ಪೂರ್ಣ ಮಾಡಲು ಹೊರಟವರು. ಅವರು ಸಾವಿಗೆ ಎಂದೂ ಹೆದರಿದವರಲ್ಲ. ಆದರೆ ಅವರ ಹೃದಯದಲ್ಲಿ ಹಾಸ್ಯಗಾರನಿದ್ದ ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು.
ಡಾ.ವರದರಾಜ ಚಂದ್ರಗಿರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಸುಕುಮಾರ ಆಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕಳವು ಪ್ರಕರಣ
ಕೋಟತಟ್ಟು ಕಲ್ಮಾಡಿ ರಸ್ತೆ ನಿವಾಸಿ ರಾಮ ಮರಕಾಲರ ಮಗನಾದ 28 ವರ್ಷ ಪ್ರಾಯದ ರವಿಚಂದ್ರ ಕೆ. ಎಂಬವರು ದಿನಾಂಕ: 25/07/09ರಂದು ರಾತ್ರಿ ಸಮಯ ಸುಮಾರು 8:30 ಕ್ಕೆ ತನ್ನ ಸ್ವಾತಿ ಸ್ಟುಡಿಯೋದ ಸಾಮಾಗ್ರಿಗಳನ್ನು ಒಳಗೆ ಇಟ್ಟು ಬಾಗಿಲು ಹಾಕಿ ಮನೆಗೆ ಹೋಗಿದ್ದು, ದಿನಾಂಕ: 26/07/09 ರಂದು ಬೆಳಿಗ್ಗೆ 7:30 ಗಂಟೆಗೆ ಅವರು ಮನೆಯಲ್ಲಿರುವಾಗ ಸ್ಟುಡಿಯೋದ ಕೆಲಸದವನಾದ ಸಂತೋಷ್ ಎಂಬಾತನು ಪೋನ್ ಮಾಡಿ ಸ್ಟುಡಿಯೋದ ಬಾಗಿಲನ್ನು ಒಡೆದಿರುವುದಾಗಿ ತಿಳಿಸಿದ ಮೇರೆಗೆ ರವಿಚಂದ್ರ ರವರು ಅವರ ಸ್ವಾತಿ ಸ್ಟುಡಿಯೋಗೆ ಬಂದು ನೋಡಿದಾಗ ಸ್ಟುಡಿಯೋದ ಮುಖ್ಯದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು, ಸ್ಟುಡಿಯೋದ ಒಳಗಿದ್ದ ಲೆನೆವೋ ಲ್ಯಾಪ್ಟಾಪ್ ಕಂಪ್ಯೂಟರ್ - 1, ಬೆಲೆ ರೂ. 47,000/- ಮತ್ತು ನೆಕೋನ್ ಡಿ 40 ಡಿಜಿಟಲ್ ಕೆಮರಾ ಜೊತೆಗೆ ಚಾರ್ಜರ್ ಮತ್ತು ಪ್ಲಾಶ್, ಬೆಲೆ ರೂ. 27,000/- ಹಾಗೂ ಡ್ರಾವರ್ನಲ್ಲಿಟ್ಟಿದ್ದ 1,000/ ರೂ ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳುವಾದ ಸೊತ್ತಿನ ಓಟ್ಟು ಮೌಲ್ಯ 75,000/-ರೂ ಆಗಬಹುದು ಎಂದು ರವಿಚಂದ್ರ ಕೆ. ರವರು ನೀಡಿದ ಪಿರ್ಯಾದಿಯಂತೆ ಕೋಟಾ ಠಾಣಾ ಅಪರಾಧ ಕ್ರಮಾಂಕ: 178/09 ಕಲಂ 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣದ ಪ್ರಕರಣ
ದಿನಾಂಕ 25.07.09 ರಂದು ಮಧ್ಯಹ್ನ 12.30 ಗಂಟೆಯ ಮೊದಲು ಶ್ರೀ ಗೋಪಾಲ ನಾಯ್ಕ (42 ವರ್ಷ) ತಂದೆ: ಬಚ್ಚ ನಾಯ್ಕ, ವಾಸ: ನಿಲ್ಸ್ಕಿಲ್ ಪೋಸ್ಟ್, ಕರಿಮನೆ ಗ್ರಾಮ, ಹೊಸನಗರ, ಶಿವಮೊಗ್ಗ ಜಿಲ್ಲೆ ಯವರ ತಂಗಿಯಾದ ರತ್ನ ನಾಯ್ಕ ಎಂಬವರು ಕೆಳಾರ್ಕಳಬೆಟ್ಟು ಗ್ರಾಮದ ತನ್ನ ವಾಸದ ಮನೆಯಲ್ಲಿ ಮನೆ ಬಾಗಿಲಿಗೆ ಚಿಲಕ ಹಾಕಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರನ್ನು ಸುಮಾರು 16 ವರ್ಷದ ಹಿಂದೆ ಕೆಲಾರ್ಕಳಬೆಟ್ಟು ಗ್ರಾಮದ ಪ್ರಭಾಕರ ನಾಯ್ಕ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು ಮೃತರ ಗಂಡ ಸಂಪಾದನೆ ಮಾಡಿದ್ದನ್ನು ಕುಡಿದು ಖಚರ್ು ಮಾಡುತ್ತಿದ್ದು ಮನೆ ಕಡೆ ನೋಡದೇ ಇದ್ದು ಅಲ್ಲದೇ ಮೃತರಿಗೆ ಒಂದು ವರ್ಷದ ಹಿಂದೆ ಗರ್ಭ ಕೋಶದ ಶಸé್ರ ಚಿಕಿತ್ಸೆ ಮಾಡಿಸಿದ್ದು ಈ ಎಲ್ಲಾ ಕಾರಣಗಳಿಂದ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ ಎಂಬುದಾಗಿ ಗೋಪಾಲ ನಾಯ್ಕರವರು ನೀಡಿದ ಪಿರ್ಯಾದಿಯಂತೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ 21/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
ದಿನಾಂಕ: 25/07/09 ರಂದು 16:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಜಂಕ್ಷನ್ ಬಳಿ ಸಂತೋಷ ಶೆಟ್ಟಿ ತಂದೆ: ಕೃಷ್ಣಯ್ಯ ಶೆಟ್ಟಿ ಪಾಲಡ್ಕ ಗ್ರಾಮ ಮೂಡಬಿದ್ರೆ ಈತನು ಬದಲಿ ನಿವರ್ಾಹಕನಾಗಿ ಕೆಲಸ ಮಾಡುತ್ತಿದ್ದ ವಿಶಾಲ್ ಬಸ್ ನಂ: ಕೆ.ಎ. 20 ಬಿ. 1788 ನೇ ಬಸ್ನಲ್ಲಿ ಬರುತ್ತಿರುವಾಗ ಆಪಾದಿತರಾದ ಕುಷಾ ರೈ , ರಂಜಿತ್, ಉಮೇಶ್, ಇವರುಗಳು ಕೆ.ಎ. 20 ಎ. 4747 ನೇ ದುಗರ್ಾಪರಮೇಶ್ವರಿ ಬಸ್ಸನ್ನು ಅಡ್ಡ ಇಟ್ಟಾಗ ಬಸ್ನ್ನು ತೆಗೆಯುವಂತೆ ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು, ನಂತರ ಆಪಾದಿರೆಲ್ಲರೂ ರಾಡ್ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಸಂತೋಷ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/09 ಕಲಂ. 341, 323, 324, 326, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 23/07/09 ರಂದು ಮಧ್ಯಾಹ್ನ 01:45 ಗಂಟೆಗೆ ಹೆಬ್ರಿ ಠಾಣಾ ಸರಹದ್ದಿನ ಹೆಬ್ರಿ ಗ್ರಾಮದ ಕೆಳಪೇಟೆ ಜಂಕ್ಷನ್ ಬಳಿ ಆರೋಪಿ ಸುರೇಶ ಹಾಗೂ ಇತರೆ 7-8 ಜನರು ಆಕ್ರಮ ಕೂಟ ಸೇರಿಕೊಂಡು, ಅನಿಲ್ ವಾಸ್ ಶರಾವತಿ ನಗರ, ಶಿವಮೊಗ್ಗ ಎಂಬವರು ಚಲಾಯಿಸುತ್ತಿದ್ದ ಕೆ.ಎ14-ಎ-4392ನೇ ಬಸ್ನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಡ್ರೈವರ್ ಸೀಟಿನಿಂದ ಕೆಳಗೆ ಹಾಕಿ, ಆರೋಪಿ ಸುರೇಶನು ಬಸ್ ಕಂಡಕ್ಟರ್ ಹನುಮಂತಪ್ಪ @ ಭೀಮಪ್ಪ ಎಂಬವರಿಗೆ ಕಬ್ಬಿಣದ ರಾಡಿನಿಂದ ಹೊಡೆದು ಹಾಗೂ ಇತರೆ 7-8 ಜನ ಆರೋಪಿಗಳು ಕೈಯಿಂದ ಹೊಡೆದು ಗಾಯಗೊಳಿಸಿದಲ್ಲದೇ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಈ ಬಗ್ಗೆ ಅನಿಲ್ ವಾಸ್ ರವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/09, ಕಲಂ 143,147, 148,323, 324,504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 25/07/09 ರಂದು 16:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಜಂಕ್ಷನ್ ಬಳಿ ಕéುಶ ರೈ ತಂದೆ: ಕಿಟ್ಟಣ್ಣ ರೈ ವಾಸ: ಬೋಲಂಬಳ ಮನೆ ಕೊಣಾಜೆ ಅಂಚೆ ಪುತ್ತೂರು ತಾಲೂಕು ಇವರು ಚಾಲಕನಾಗಿ ಕೆಲಸ ಮಾಡುತ್ತಿದ್ದ ದುಗರ್ಾಪರಮೇಶ್ವರಿ ಬಸ್ ಕೆ.ಎ. 20 ಎ. 4747 ನೇದನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಆಪಾದಿತ ರಾದಯಶೋಧರ , ಪ್ರಕಾಶ,ಸಂತೋಷ, ಸುಧಾಕರ ಪ್ರಸಾದ ಪದ್ಮ ಕುಮಾರ್ ಎಂಬವರುಗಳು ಕೆ.ಎ. 20 ಬಿ. 1788 ನೇ ವಿಶಾಲ್ ಬಸ್ಸನ್ನು ಬಸ್ನ ಮುಂದೆ ನಿಲ್ಲಿಸಿ ಆಪಾದಿತರಾದ ಸಂತೋಷ ಕುಮಾರ್ ಶೆಟ್ಟಿ ಮತ್ತು ಪ್ರಸಾದ ವೀಲ್ ಬಾಕ್ಸ್ ಮತ್ತು ಲಿವರ್ನಿಂದ ಹೊಡೆದು ಉಳಿದ ಆರೋಪಿಗಳು ಕೈಗಳಿಂದ ಹೊಡೆದು ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಸಂತೋಷ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/09 ಕಲಂ. 143,147, 148, 323, 324, 504, 506 ಜೊತೆಗೆ 149 ಐ.ಪಿ.ಸಿ ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
ಕಾಡ್ಯ (40) ತಂದೆ: ದಿ. ಮೆಣ್ಕ ವಾಸ: ಪೊಸರುಗುಡ್ಡೆ ಮಿಯಾರು ಗ್ರಾಮ ಕಾರ್ಕಳ. ಎಂಬವರ ಅಣ್ಣನಾದ ಪೊರಂಕ್ಲ (65ವರ್ಷ) ಎಂಬವರು ದಿನಾಂಕ: 25/7/09 ರಂದು ಬೆ. 08:30 ಗಂಟೆಯ ವೇಳೆಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಪೊಸರುಗುಡ್ಡೆ ಎಂಬಲ್ಲಿ ಮನೆಯ ಪಕ್ಕದ ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತ ಪೊರಂಕ್ಲ ಎಂಬವರು ಈಗ್ಗೆ ಕೆಲವು ದಿನಗಳಿಂದ ಟಿ.ಬಿ ಖಾಯಿಲೆಯಿಂದ ಬಲಳುತ್ತಿದ್ದು ಔಷಧಿ ಮಾಡಿದರೂ ಗುಣಮುಖವಾಗದೇ ಇದ್ದು, ಇದೇ ಕಾರಣದಿಂದ ಮಾನಸಿಕವಾಗಿ ನೊಂದು ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಡ್ಯ (40) ರವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 21/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೋಸ ಪ್ರಕರಣ
ಉಡುಪಿ ತಾಲೂಕು ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ವಾಸಿ ಇಸ್ಮಾಯಿಲ್ ತಂದೆ: ಮೂಸಬ್ಬ ಎಂಬವರು ದಿನಾಂಕ: 11/10/02ರಂದು ಅನ್ಸಿರಾ ಬಾನುನ್ನು ಮದುವೆಯಾಗಿ 2 ಮಕ್ಕಳಾಗಿರುತ್ತವೆ. ಇಸ್ಮಾಯಿಲ್ ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನೌಕರಿ ಮಾಡಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಊರಿಗೆ ಬಂದಾಗ ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ಎಂಬಲ್ಲಿ 0.5 ಸೆಂಟ್ಸ್ ಜಾಗದ ಮನೆಯನ್ನು ಜ್ಯೋತಿ ಎಂಬವರಿಂದ ಖರೀದಿಸಿ ಮುಂಗಡ ಹಣ ನೀಡಿ ಅನ್ಸಿರಾ ಬಾನುವಿನ ಹೆಸರಿನಲ್ಲಿ ಕರಾರು ಮತ್ತು ಅಧಿಕಾರ ಪತ್ರ ಮಾಡಿಸಿ ವಿದೇಶದಿಂದ ಬಂದ ನಂತರ ತನ್ನ ಹೆಸರಿಗೆ ಮಾಡಿಸುವುದಾಗಿ ಒಪ್ಪಂದ ಮಾಡಿ ವಿದೇಶಕ್ಕೆ ಹೋಗಿದ್ದು, ಈ ವರ್ಷ ಊರಿಗೆ ಬಂದಾಗ ದಿನಾಂಕ: 14.06.09 ರಂದು ಸಂಜೆ 6:00 ಗಂಟೆಗೆ ಆರೋಪಿಗಳಾದ ಅನ್ಸಿರಾ ಬಾನು 2.ಮೊಹಮ್ಮದ್ ಶೇಕಬ್ಬ 3. ಅಮೀನಾ 4. ಅಬ್ದುಲ್ ಎಮ್.ಕೆ. 5. ಅಶ್ರಫ್ 6. ಸಾದಿಕ್ 7. ಜಮಾಲ್ ಎಂಬವರುಗಳು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮನೆಗೂ ನಿನಗೂ ಸಂಬಂಧವಿಲ್ಲವೆಂದು ಮನೆಗೆ ಪ್ರವೇಶ ಮಾಡಿದರೆ ಸೊಂಟ ಮುರಿದು ಹಾಕುತ್ತೇನೆಂದು ಬೆದರಿಸಿ, ಹೊರ ದೇಶದಲ್ಲಿ ಸಂಪಾದಿಸಿದ ಹಣದಲ್ಲಿ ಖರೀದಿಸಿದ ಜಾಗ ಮತ್ತು ಮನೆಯನ್ನು ಮೋಸ ಮಾಡುವ ಉದ್ದೇಶದಿಂದ ಇತರ ಆರೋಪಿಗಳ ಬೆಂಬಲದಿಂದ ಮನೆಯನ್ನು ಕಾನೂನು ಬಾಹಿರವಾಗಿ ಸ್ವಾಧೀನಕ್ಕೆ ದಾಖಲೆಗಳನ್ನು ಸೃಷ್ಟಿಸಲು ತಯಾರು ಮಾಡುತ್ತಿದ್ದಾರೆ ಎಂಬುದಾಗಿ ಮಾನ್ಯ ನ್ಯಾಯಾಲಯ ಪಿರ್ಯಾದು ನಂ.380/09ರಲ್ಲಿ ದೂರು ನೀಡಿದ್ದು ಈ ಬಗ್ಗೆ ಇಸ್ಮಾಯಿಲ್ರವರು ಕಾಪು ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 147/09 ಕಲಂ 341,407,420,504,506, ಜೊತೆಗೆ 143 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೆ ಪ್ರಕರಣಗಳು
ಕಾರ್ಕಳನಗರ ಠಾಣೆಯ ಪೊಲೀಸ್ ಉಪನೀರೀಕ್ಷಕರು ಶ್ರೀ ರಾಮಚಂದ್ರನಾಯಕ್ ರವರು ದಿನಾಂಕ: 25/07/09 ರಂದು 15:00 ಗಂಟೆಗೆ ಪ್ರೋಬೆಷನರಿ ಪಿ.ಎಸ್.ಐ ಕಾಂತರಾಜ್ ಮತ್ತು ಸಿಬ್ಬಂದಿಯವರು ಗಸ್ತಿನಲ್ಲಿರುವಾಗ ದೊರೆತ ಖಚಿತ ವರ್ತಮಾನದಂತೆ ಕಾರ್ಕಳ ಕಸಬಾ ಗ್ರಾಮದ ಕಾಳಿಕಾಂಬಾ ದೇವಸ್ಥಾನದ ಬಳಿ ಯಾರೋ ಒಬ್ಬ ಯುವಕ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾರೆ ಅವರ ಬಗ್ಗೆ ಸಂಶಯವಿರುತ್ತದೆ. ಎಂಬುವುದಾಗಿ ತಿಳಿಸಿದಂತೆ ಸ್ಥಳಕ್ಕೆ ಹೋಗಿ, ಅಸಾಮಿಯವರನ್ನು ವಿಚಾರಿಸಿದಾಗ ಅವರ ಇರುವಿಕೆಯ ಬಗ್ಗೆ ಸಮರ್ಪಕ ಉತ್ತರ ನೀಡದೇ ಇದ್ದ ಕಾರಣ ಇವರು ಯಾವುದೋ ಬೇವಾರಂಟು ತಕ್ಸೀರು ಮಾಡಲು ಹೊಂಚು ಹಾಕುತ್ತಿದ್ದವರನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ ಅಬ್ದುಲ್ ಮಲಿಕ್ (28) ತಂದೆ: ಎಸ್ ಮೊಹಮ್ಮದ್ ಸಾಲ್ಮರ ಮನೆ ಚಿಕ್ಮದ್ಮೂರು ಪುತ್ತೂರು ದ.ಕ ಜಿಲ್ಲೆ ಎಂಬುದಾಗಿ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಈ ಬಗ್ಗೆ ಪೊಲೀಸ್ ಉಪನೀರೀಕ್ಷಕರು ಶ್ರೀ ರಾಮಚಂದ್ರನಾಯಕ್ ರವರು ಕಾರ್ಕಳನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 241/09 ಕಲಂ 41(1) 109 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--
http://www.kasaragodvartha.com/the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment