ಕಾಸರಗೋಡು: ಮನೆಗೆಲಸಕ್ಕಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಇಲ್ಲಿನ ತಳಂಗೆರೆಯಲ್ಲಿ ನಡೆದಿದೆ.ಮೂಲತಃ ಶಿವಮೊಗ್ಗ ನಿವಾಸಿ ಸಜಿಲ(18) ಸಾವನ್ನಪ್ಪಿದ ಯುವತಿ. ಈಕೆ ತಳಂಗೆರೆ ಕೆ.ಎ.ಇಬ್ರಾಹಿಂ ಎಂಬವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಮನೆಗೆಲಸಕ್ಕಿದ್ದಳು. ಗುರುವಾರ ಸಂಜೆ ವೇಳೆಗೆ ಸಾವು ಸಂಭವಿಸಿದೆ. ಗ್ರೈಂಡರ್ಗೆ ಶಾಲು ಸಿಲುಕಿ ಕುತ್ತಿಗೆ ಬಿಗಿದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಆದರೆ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿರುವ ಯುವತಿಯ ಹೆತ್ತವರು ಶವವನ್ನು ಶುಕ್ರವಾರ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದಿದ್ದಾರೆ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾಸಕರಿಗೆ ಅಗೌರವ: ಅಮಾನತು
ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಮಾವೇಲಿ ಎಕ್ಸ್ಪ್ರೆಸ್ಸಿನಲ್ಲಿ ಸಂಚರಿಸುತ್ತಿರುವಾಗ ಶಾಸಕ ಸಿ.ಟಿ.ಅಹಮ್ಮದಾಲಿ ಅವರೊಂದಿಗೆ ಅಗೌರವದಿಂದ ವತರ್ಿಸಿದ ಆರ್.ಪಿ.ಎಫ್. ಕಾನ್ಸ್ಟೇಬಲ್ ಪಿ.ಸಿ.ಜೋಸೆಫ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.ಇತ್ತೀಚೆಗೆ ಎನರ್ಾಕುಳಂ ಎಂಬಲ್ಲಿ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಶಾಸಕರು ರೈಲ್ವೆ ಉಪ ಸಚಿವ ಇ.ಅಹಮ್ಮದ್ಗೆ ದೂರು ನೀಡಿದ್ದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರೈಲ್ವೇ ಸುರಕ್ಷಾ ಆಯುಕ್ತರಿಗೂ ಶಾಸಕರು ಮನವಿ ಮಾಡಿದ್ದಾರೆ.
ಡೆಂಗ್ಯು ಜ್ವರ: ಆಸ್ಪತ್ರೆಗೆ
ಕಾಸರಗೋಡು: ಸೀತಾಂಗೋಳಿಯ ರಾಜೀವ್ ನಗರ ಕಾಲನಿ ಸಮೀಪದ ನಿವಾಸಿಗಳಾದ ದಂಪತಿಗಳು ಡೆಂಗ್ಯು ಜ್ವರ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಸ್ಥಳೀಯ ಜೋಸೆಫ್ ಡಿ'ಸೋಜಾ ಅವರ ಪುತ್ರ ರಾಜು ಸ್ಟೀಫನ್ ಮತ್ತು ಅವರ ಪತ್ನಿ ವೀಣಾ ಡಿ'ಸೋಜಾ ಅವರು ಇತ್ತೀಚೆಗೆ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಇವರಿಗೆ ಡೆಂಗ್ಯು ಜ್ವರ ಇದೆ ಎಂದು ವೈದ್ಯರು ದೃಢೀಕರಿಸಿದ್ದರು.
ಕಿಚ್ಚಿಟ್ಟು ಬೈಕ್ ನಾಶ
ಕಾಸರಗೋಡು: ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಪೆಟ್ರೋಲ್ ಸುರಿದು ಕಿಚ್ಚಿಟ್ಟು ನಾಶಪಡಿಸಿದ ಘಟನೆ ಶುಕ್ರವಾರ ಮುಂಜಾನೆ ನಗರದಲ್ಲಿ ನಡೆದಿದೆ.ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಎದುರು ಇರುವ ಅಬೂಬಕ್ಕರ್ ಕೋಯ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜ್ವರ ಬಾಧಿಸಿ ವಿದ್ಯಾರ್ಥಿ ಸಾವು
ಕಾಸರಗೋಡು: ಜ್ವರ ಬಾಧಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಕುಂಬಳೆಯಲ್ಲಿ ನಡೆದಿದೆ.ಕುಂಬಳೆ ಆರಿಕ್ಕಾಡಿ ನಿವಾಸಿ ಅಬ್ದುಲ್ಲಕುಞ್ಞಿ ಅವರ ಪುತ್ರ ಕಲಂದರ್ ಶಫೀಕ್(22) ಸಾವನ್ನಪ್ಪಿದ ಯುವಕ. ಈತ ಬೆಂಗಳೂರಿನಲ್ಲಿ ಎಂ.ಬಿ.ಎ.ಈ ಮೂಲಕ ಜಿಲ್ಲೆಯಲ್ಲಿ ಜ್ವರ ಬಾಧಿಸಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೇರಿದೆ. ಸಾಂಕ್ರಾಮಿಕ ಜ್ವರಗಳಾದ ಚಿಕುನ್ಗುನ್ಯಾ, ಡೆಂಗ್ಯೂ ಜಿಲ್ಲೆಯಲ್ಲಿ ಹರಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿಯೇ 2 ಸಾವಿರಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ.
ಹಲ್ಲೆ
ಕಾಸರಗೋಡು: ಗುತ್ತಿಗೆದಾರನೋರ್ವನ ತಲೆಗೆ ತಂಡವೊಂದು ಮಾರಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ಚೆರ್ಕಳದಲ್ಲಿ ನಡೆದಿದೆ.ಚೆರ್ಕಳದ ಕೆ.ಎಂ.ಅಬ್ದುಲ್ ರಹಿಮಾನ್ ಗಾಯಾಳು.ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೂರ್ವದ್ವೇಷ ಘಟನೆಗೆ ಕಾರಣೆಂದು ನಗರ ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ದೂರು
ಕಾಸರಗೋಡು: ವರದಕ್ಷಿಣೆಗೆ ಸಂಬಂಧಿಸಿ ಕಿರುಕುಳ ನೀಡಿದ ಆರೊಪಿಗಳ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪೆರಿಯಡ್ಕದ ಕೆ.ಎಚ್.ಮೊಯ್ದೀನ್ ಅವರ ಪುತ್ರಿ ಆಯಿಷತ್ ಷಬಾನ ದೂರು ನೀಡಿದ್ದಾರೆ. ಈಕೆಯ ಪತಿ ಚೆಮ್ನಾಡ್ ನಿವಾಸಿ ಮುಹಮ್ಮದ್ ರಾಫಿ, ಆತನ ತಂದೆ ಮೊಯ್ದು, ತಾಯಿ ರುಖಿಯ, ಸಹೋದರ ಖಬೀರ್ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ.
--www.kasaragodvartha.comthe first local online news paper in Malayalam.brings latest news in Malayalam & English links our home land to the world.:::: the signature of Kasaragod ::::
Friday, July 31, 2009
Subscribe to:
Post Comments (Atom)
No comments:
Post a Comment