Friday, July 31, 2009

ಗಾಂಜಾ ವಶ/Gaanja-Arrest

ಮಂಗಳೂರು: ಸಿ.ಓ.ಡಿ ಡಿ.ವೈಎಸ್.ಪಿಯವರಾದ ಶ್ರೀ. ಸುಬಾಶ್ಚಂದ್ರ ರವರು ನೀಡಿದ ಮಾಹಿತಿಯನ್ನು ಅನುಸರಿಸಿ ಈ ದಿನ ತಾರೀಕು 30/07/2009 ರಂದು ಮಂಗಳೂರು ನಗರದ ಸವರ್ಿಸ್ ಬಸ್ಸುನಿಲ್ದಾಣದ ಬಳಿ ಬಾಗಲಕೋಟೆ ತಾಲೂಕಿನ ಸರಗಪ್ಪ ಎಂಬವನನ್ನು ಬಂಧಿಸಿ ಆತನಿಂದ ಸುಮಾರು 50,000/- ರೂಪಾಯಿ ಮೌಲ್ಯದ 2 ಕಿಲೋ 100 ಗ್ರಾಂ ನಿಷೇಧಿತ ಮಾಧಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಡಿ.ಸಿ.ಐ.ಬಿ. ಇನ್ಸ್ಪೆಕ್ಟರ್ ಹೆಚ್.ಎನ್.ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡವು ಯಶಸ್ವಿಯಾಗಿರುತ್ತದೆ.
ಖಚಿತ ವರ್ತಮಾನದಂತೆ ಸುರತ್ಕಲ್ನಿಂದ ಮಂಗಳೂರಿಗೆ ಗಾಂಜಾ ಮಾರಾಟ ಮಾಡುವ ಕುರಿತು ಗೋಣಿ ಚೀಲದಲ್ಲಿ ಗಾಂಜಾವನ್ನು ತರುತ್ತಿದ್ದಾನೆ ಎಂಬ ಮಾಹಿತಿಯಂತೆ ಈ ದಿನ ತಾರೀಕು 30/07/2009 ರಂದು ಬೆಳಗ್ಗಿನ ಜಾವ 0730 ಗಂಟೆಗೆ ನಗರ ಮಂಗಳೂರು ಸವರ್ಿಸ್ ಬಸ್ಸ್ನಿಲ್ದಾಣದ ಬಳಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮಣ್ಣಿಕೇರಿ ಗ್ರಾಮ ದೇವಿ ದೇವಸ್ಥಾನದ ಬಳಿಯ ರಾಮಪ್ಪ ಎಂಬವರ ಮಗ 35 ವರ್ಷದ ಸಗರಪ್ಪ ಯಾನೆ ಶಂಕರ ಎಂಬವನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 50,000/- ರೂಪಾಯಿ ಮೌಲ್ಯದ 2 ಕಿಲೋ 100 ಗ್ರಾಂ ನಿಷೇಧಿತ ಮಾಧಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾಯರ್ಾಚರಣೆಯಲ್ಲಿ ಡಿ.ಸಿ.ಐ.ಬಿ ಇನ್ಸ್ಪೆಕ್ಟರ್ ಹೆಚ್.ಎನ್.ವೆಂಕಟೇಶ್ ಪ್ರಸನ್ನ ಮತ್ತು ಎಎಸ್ಐ ನಾರಾಯಣ ಮಣಿಯಾಣಿ, ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಸಂತೋಷ್ ಪಡೀಲ್, ಗಣೇಶ್ ಕಲ್ಲಡ್ಕ, ಚಂದ್ರ, ಚೇತನ್ ಬೊಟ್ಯಾಡಿ, ದಿನೇಶ್ ಬೇಕಲ್, ಕುಮಾರ, ಪ್ರಶಾಂತ್, ಧಮರ್ೇಂದ್ರ, ಶಾಂತಶೆಟ್ಟಿ ಹಾಗೂ ದೇವಯ್ಯ ಮತ್ತು ಎನ್ಡಿಪಿಎಸ್ ಘಟಕದ ಸಿಬ್ಬಂಧಿ ಕೃಷ್ಣ ರವರು ಮೇಲಿನ ಕಾಯರ್ಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ.

 
ಕುಸಿದು ಬಿದ್ದು ಸಾವು
 
ದಿನಾಂಕ 30/07/09 ರಂದು ಕೋಟಾ ಠಾಣಾ ಸರಹದ್ದಿನ ತೆಕ್ಕಟ್ಟೆಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರದ ವಾಸಿ ಬಿಡುಗು ಪೂಜಾರಿ (65 ವರ್ಷ)ರವರು ಸಂಜೆ 5:30 ಗಂಟೆಗೆ ತೆಕ್ಕಟ್ಟೆಯ ಮಲ್ಯಾಡಿ ನೀರಿನ ಹೊಂಡದಲ್ಲಿ ಬಲೆಯನ್ನು ಕಟ್ಟಿ ಮೀನು ಹಿಡಿಯಲು ಹೋದವರು ಸುಸ್ತಾಗಿ ಅಲ್ಲಿಯೇ ಹೊಂಡದ ಬಳಿ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ. ಮೃತ ದೇಹವು ದಿನಾಂಕ 31/07/09ರ ಬೆಳಿಗ್ಗೆ ಪತ್ತೆಯಾಗಿದ್ದು ಈ ಬಗ್ಗೆ ಅವರ ಮಗನಾದ ರಾಜುರವರು ಕೋಟಾ ಠಾಣೆಯಲ್ಲಿ ಪಿರ್ಯಾದು ನೀಡಿದ್ದು ಅದರಂತೆ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 27/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನದಿ ನೀರಿನಲ್ಲಿ ಕೊಚ್ಚಿ ಹೋದವರ ಮೃತ ದೇಹ ಪತ್ತೆ
ದಿನಾಂಕ 26/07/09 ರಂದು ಬೆಳಿಗ್ಗೆ 10.30 ಗಂಟೆಗೆ ತಮಿಳುನಾಡಿನ ಈಚಂಬಾಡಿ ವಾಸಿ ರಾಜಶೇಖರನ್ (32 ವರ್ಷ) ಎಂಬವರು ಸೌಪಣರ್ಿಕಾ ಸ್ನಾನಘಟ್ಟದಲ್ಲಿ ಸ್ನಾನ ಮಾಡುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಈ ದಿನ ದಿನಾಂಕ 31/07/09 ರಂದು 10.30 ಗಂಟೆಗೆ ಕೊಲ್ಲೂರು ಗ್ರಾಮದ ಮಾವಿನಕಾರು ಸೇತುವೆಯ ಬಳಿ ಸೌಪಣರ್ಿಕ ಹೊಳೆಯಲ್ಲಿ ರಾಜಶೇಖರನ್ರ ಮೃತ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಜಯಚಂದ್ರ ತಂದೆ: ರಾಜು ಪೂಜಾರಿ, ಸೌಪಣರ್ಿಕಾ ಸ್ನಾನಘಟ್ಟ, ಕೊಲ್ಲೂರು ಗ್ರಾಮ, ಕುಂದಾಪುರರವರು ನೀಡಿದ ದೂರಿನ ಮೇರೆಗೆ ಕೊಲ್ಲುರು ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 04/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ 31/07/09 ರಂದು ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಾಲಾಡಿ ಕಡೆುಂದ ಅಂಪಾರು ಕಡೆಗೆ ಆರೋಪಿ ಪ್ರಕಾಶ ಕುಲಾಲ (25 ವರ್ಷ) ಎಂಬವರು ತನ್ನ ಕೆಎ 20 ಎ 7779 ನಂಬ್ರದ ತೂಪಾನ್ ಟ್ರಾಕ್ಸ್ನ್ನು ಚಲಾಯಿಸಿಕೊಂಡು ಬಂದು ಬೆಳಿಗ್ಗೆ 07:45 ಗಂಟೆ ಸುಮಾರಿಗೆ ಶಂಕರನಾರಾಯಣ ಗ್ರಾಮದ ಹೆರವಳ್ಳಿ ಎಂಬಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿ ಟೆಂಪೋ ಟ್ರಾಕ್ಸ್ ಪಲ್ಟಿಯಾಗಿ ರಸ್ತೆಗೆ ಅಡ್ಡಬಿದ್ದ ಪರಿಣಾಮ ಟೆಂಪೋ ಟ್ರಾಕ್ಸ್ನಲ್ಲಿ ಗಿರಿಜಾ ಕ್ಲೇ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಲು ಪ್ರಯಾಣಿಸುತ್ತಿದ್ದ ಫಾಜಿಲ್ (21 ವರ್ಷ) ತಂದೆ: ಅಬ್ದುಲ ಮಜೀದ್, ವಾಸ: ಗುಡಿಕೆರೆ, 74 ಉಳ್ಳೂರು ಕುಂದಾಪುರ ತಾಲೂಕು, ರಾಘವೇಂದ್ರ ನಾಯ್ಕ, ಗಂಗಮ್ಮ ಶೆಡ್ತಿ, ಸಾವಿತ್ರಿ ನಾಯ್ಕ, ಯಶೋಧ ಕುಲಾಲ್ತಿ ಎಂಬವರಿಗೆ ಸಾದಾ ಸ್ವರೂಪದ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಗಾಯಾಳು ಫಾಜಿಲ್ರವರು ನೀಡಿದ ದೂರಿನ ಮೇರೆಗೆ ಶಂಕರನಾರಾಯಣ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 103/09 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 

ಕಳವು ಪ್ರಕರಣ
 
ಶ್ರೀ ಮೂಡುರ ಪೂಜಾರಿ ತಂದೆ: ತಿಮ್ಮಪ್ಪ ಪ್ರೂಜಾರಿ ವಾಸ: ಹಕ್ಲಾಡಿ ಗ್ರಾಮದವರು ಹಕ್ಲಾಡಿ ಹೋರ್ಬೊಬ್ಬರ್ಯ ದೇವಸ್ಥಾನದಲ್ಲಿ ದರ್ಶನ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದು, ಹೋರ್ ಬೊಬ್ಬರ್ಯ ದೇವಸ್ತಾನದ ದರ್ಶನ ಸೇವೆಗೆ ಬೇಕಾಗುವ ಎಲ್ಲಾ ಚಿನ್ನ ಮತ್ತು ಬೆಳ್ಳಿಯ ದರ್ಶನ ಸಾಮಾಗ್ರಿಗಳನ್ನು ದರ್ಶನದ ಬಳಿಕ ದೇವಸ್ಥಾನದ ಆಡಳಿತ ಸಮಿತಿಯವರ ಅನುಮತಿಯಂತೆ ತಮ್ಮ ಬಳಿ ಇಟ್ಟುಕೊಂಡಿದ್ದು, ದಿನಾಂಕ 25-07-09 ರಂದು ತ್ರಾಸಿ ಗ್ರಾಮದಲ್ಲಿ ದರ್ಶನ ಸೇವೆಯನ್ನು ಮಾಡಿ ಎಲ್ಲಾ ಸೊತ್ತುಗಳನ್ನು ಒಂದು ಚೀಲದಲ್ಲಿ ಹಾಕಿ ಅವರ ಮನೆಯೊಳಗಿನ ಕಿಂಡಿ ಕೋಣೆಯಲ್ಲಿ ಇಟ್ಟಿದ್ದನ್ನು ದಿನಾಂಕ: 29-07-09ರಂದು ಮಧ್ಯಾಹ್ನ 2:00 ಗಂಟೆಗೆ ಕೋಣೆಗೆ ಹೋಗಿ ನೋಡಿದಾಗ ಅವರು ಇಟ್ಟಿದ್ದ ಸೊತ್ತುಗಳ ಸಮೇತ ಚೀಲ ಕಾಣೆಯಾಗಿದ್ದು, ಈ ಬಗ್ಗೆ ಅವರ ಮನೆಯವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆಯದೇ ಇದ್ದು, ಸದ್ರಿ ಸೊತ್ತುಗಳನ್ನು ಯಾರೋ ಮನೆಯೊಳಗೆ ಬಂದು ಸದ್ರಿ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಕಳವು ಮಾಡಿಕೊಂಡು ಹೋಗಿರುವ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 70,000/- ಆಗಬಹುದು ಎಂಬುದಾಗಿ ಶ್ರೀ ಮೂಡುರ ಪೂಜಾರಿ ರವರು ನೀಡಿದ ಪಿರ್ಯಾದಿಯಂತೆ ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 76/09 ಕಲಂ 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕರಣ
 
ಶ್ರೀಮತಿ ರೇಷ್ಮಾ (22 ವರ್ಷ) ಗಂಡ: ಆದಿಲ್ ಶೇರ್ ವಾಸ: ಹಿಲಾಫಿ ಮೊಹಲ್ಲಾ, ಹಾಸನ ರವರು ದಿನಾಂಕ: 25.08.05ರಂದು ಆದಿಲ್ ಶೇರ್ನನ್ನು ಮದುವೆಯಾಗಿ 2 ಮಕ್ಕಳಾಗಿರುತ್ತವೆ. ವಿವಾಹವಾದ ಕೆಲವೇ ದಿನಗಳಲ್ಲಿ ಅದಿಲ್ ಶೇರ್ ಮತ್ತು ಅವನ ಮನೆಯವರಾದ ಅಲ್ಲಾಹ್ ಬಕ್ಷ್, ಶಕೀಲ, ಜರೀನಾ, ನಯಾಜ್ ಅಹ್ಮದ್ ಮತ್ತು ಅಮೀರ್ ಜಾನ್ ರವರು ರೇಷ್ಮಾರವರಿಗೆ ವರದಕ್ಷಿಣೆ ನೀಡುವಂತೆ ಪೀಡಿಸುತ್ತಾ ಕಠಿಣವಾದ ಕೆಲಸ ಮಾಡಿಸುತ್ತಿದ್ದು, ಪದೇ ಪದೇ ಅವರಿಗೆ ಮತ್ತು ಮಕ್ಕಳಿಗೆ ಹಿಯಾಳಿಸುವುದು ಹಾಗೂ ದೈಹಿಕವಾಗಿ ಹಿಂಸೆ ನೀಡಲಾರಂಬಿಸಿದರು. ಕೆಲವು ದಿನಗಳ ನಂತರ ಅವರ ಗಂಡನ ಹಾಗೂ ಅವರ ಮನೆಯವರ ಕಿರುಕುಳವನ್ನು ಸಹಿಸಲಾಗದೇ ತಮ್ಮ ತವರು ಮನೆಗೆ ಹಿಂದಿರುಗಿರುತ್ತಾರೆ. ದಿನಾಂಕ: 19.04.09 ಬೆಳಿಗೆ 10:30 ಗಂಟೆಗೆ ಅವರ ಗಂಡ ಮತ್ತು ಆತನ ಮನೆಯವರು ತವರು ಮನೆಗೆ ಬಂದಿದ್ದ ರೇಷ್ಮಾರವರನ್ನು ಮನೆಯಿಂದ ಹೊರಗೆ ಎಳೆದು ಹಾಕಿ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ಒದ್ದು ಹಲ್ಲೆ ಮಡಿರುತ್ತಾರೆ. ಹಾಗೂ ಹಿಂದಿರುಗಿ ಹೋಗುವಾಗ ಈ ಮೊದಲೇ ಬೇಡಿಕೆ ಇಟ್ಟ ಚಿನ್ನಾಭರಣ ತಂದುಕೊಡದಿದ್ದರೆ ರೇಷ್ಮಾರವರನ್ನು ಮತ್ತು ಅವರ ಮಕ್ಕಳನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ರೇಷ್ಮಾರವರು ಖಾಸಾಗಿ ಪಿರ್ಯಾದಿ ನೀಡಿದ್ದು ಅದರಂತೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: ಅ.ಕ್ರ. 151/09 ಕಲಂ 498 ಎ, 506 ಜೊತೆಗೆ 149 ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ: 29/07/2009 ರಂದು ಮುಲ್ಲಾ ಮಹಮ್ಮದ್ ಸಾಬ್ ರವರು ಅವರ ಹೆಂಡತಿ ಪಾತಿಮಾಬಿ ಎಂಬವರೊಂದಿಗೆ ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನ್ ಬಳಿ ಬಸ್ಸಿನಿಂದಿಳಿದು ರಸ್ತೆ ದಾಟುವರೇ ರಾ.ಹೆ.17 ರಲ್ಲಿ ನಿಂತಿರುವಾಗ ಸಮಯ ಸುಮಾರು 10-45 ಗಂಟೆಗೆ ಕೆ.ಎ.20 ಎಸ್. 9183 ನೇ ಮೋಟಾರು ಸೈಕಲನ್ನು ಅದರ ಚಾಲಕನು ಕೋಟೇಶ್ವರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾತಿಮಾಬಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಯ ಹಿಂಭಾಗ, ಬಲ ತೊಡೆಗೆ ಹಾಗೂ ಬಲ ಭಾಗದ ಕೆನ್ನೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮುಲ್ಲಾ ಮಹಮ್ಮದ್ ಸಾಬ್ ರವರು ನೀಡಿದ ಪಿರ್ಯಾದಿಯಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 226/09 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 29/07/09 ರಂದು 16.45 ಗಂಟೆಗೆ ಆದಿ ಉಡುಪಿ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಕಛೇರಿ ಬಳಿ ಮೊಟಾರು ಸೈಕಲ್ ನಂಬ್ರ ಕೆಎ-20-ಕೆ-2870ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಕರಾವಳಿ ಜಂಕ್ಷನ್ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿರುವ ವೇಳೆ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸುವ ಭರದಲ್ಲಿ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಅಂದರೆ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಬಾಗ್ಯರಾಜ್ (22 ವರ್ಷ) ತಂದೆ:ಕೆ ಬಾಬು ವಾಸ: ಅಂಬಲಪಾಡಿ, ಪಂದುಬೆಟ್ಟು, ಉಡುಪಿ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನಂ ಕೆಎ-30-ಕೆ-0938ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಗ್ಯರಾಜ್ ರವರ ತುಟಿಗೆ ರಕ್ತಗಾಯ ಹಾಗೂ ತಲೆಗೆ, ಕೈಗೆ ಹಾಗೂ ಸೊಂಟಕ್ಕೆ ಜಜ್ಜಿದ ಒಳಗಾಯವಾಗಿರುತ್ತದೆ ಮತ್ತು ಆಪಾದಿತ ಮೋಟಾರು ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಬಾಗ್ಯರಾಜ್ ರವರು ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 249/09 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹಲ್ಲೆ ಪ್ರಕರಣ
 
ದಿನಾಂಕ: 30/07/09 ರಂದು ರಾತ್ರಿ ಸಮಯ 9.15 ಗಂಟೆಗೆ ಉಡುಪಿ ಕರಾವಳಿ ಜಂಕ್ಷನ್ ಬಳಿ ಇರುವ ಐ.ಓ.ಸಿ ಪೆಟ್ರೋಲ್ ಬಂಕ್ನಲ್ಲಿ ಕೆ ಬಾಲಕೃಷ್ಣ ಶೆಣೈ ತಂದೆ: ಕೆ ವಾಸುದೇವ ಶೆಣೈ ವಾಸ: ದ್ವಾರಕ, ಡಿ-60, ಅನಂತ ನಗರ, ಮಣಿಪಾಲ ರವರು ಕಾರ್ ನಂಬ್ರ ಕೆಎ-20-ಎಂ-4182ನೇದಕ್ಕೆ ಪೆಟ್ರೋಲ್ ತುಂಬಿಸಿದ್ದು, ಆ ವೇಳೆ ಬಸ್ ನಂ ಕೆಎ-20-ಸಿ-6789ನೇ ಬಸ್ಸನ್ನು ಅದರ ಚಾಲಕನು ಅವರ ಕಾರಿಗೆ ಅಡ್ಡವಾಗಿ ನಿಲ್ಲಿಸಿದಾಗ ಅದನ್ನು ಹಿಂತೆಗೆಯುವರೇ ಆತನ ಬಳಿ ಹೇಳಿದಾಗ ಆತ ಒಪ್ಪದೇ ಗಲಾಟೆಗೆ ಪ್ರಾರಂಭಿಸಿ, ಬಸ್ಸಿನ ಮಾಲಕ ಹಾಗೂ ಇತರ ಮೂರು ಮಂದಿ ಬಾಲಕೃಷ್ಣ ಶೆಣೈ ಹಾಗೂ ಅವರ ಮಗ ಸಂದೀಪನಿಗೆ ಆವಾಚ್ಯ ಶಬ್ದಗಳಿಂದ ಬೈದು, ಕಾರನ್ನು ಪುಡಿ ಮಾಡುವುದಾಗಿ ಬೆದರಿಸಿ, ಅವರಿಗೆ ಹೊಡೆದು ಕೈಗೆ ಗಾಯಗೊಳಿಸಿ, ಕತ್ತಿಗೆ ಕೈ ಹಾಕಿ ದೂಡಿದ್ದು, ಅಲ್ಲದೇ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಬಾಲಕೃಷ್ಣ ಶೆಣೈ ಯವರು ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 250/09 ಕಲಂ 323, 324, 504, 506, 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 30/07/09 ರಂದು ರಾತ್ರಿ 9.00 ಗಂಟೆಗೆ ಉಡುಪಿ ಕರಾವಳಿ ಜಂಕ್ಷನ್ ಬಳಿ ಇರುವ ರೋಹಿಣಿ ಪೆಟ್ರೊಲ್ ಬಂಕ್ನಲ್ಲಿ 2 ಜನರು ಕಾರ್ ನಂಬ್ರ ಕೆಎ-20-ಎಂ-4182ನೇದಕ್ಕೆ ಪೆಟ್ರೋಲ್ ಹಾಕಲು ಬಂದಿದ್ದು, ಸದ್ರಿ ಕಾರಿನ ಎದುರು ಸುದಾರ್ ಬಸ್ಸ್ ಡಿಸೇಲ್ ಹಾಕಲು ನಿಂತಿದ್ದು, ಕಾರಿಗೆ ಪೆಟ್ರೋಲ್ ಹಾಕಿದ ಬಳಿಕ ಬಸ್ಸಿನವರಲ್ಲಿ ಬಸ್ಸು ತೆಗೆಯಿರಿ ಎಂದು ಹೇಳಿದಾಗ ಬಸ್ಸಿನವರು ಸ್ವಲ್ಪ ನಿಲ್ಲಿ ಮತ್ತೆ ಬಸ್ಸು ತೆಗೆಯುತ್ತೇನೆ ಎಂದಾಗ ಬಸ್ಸಿನ ಎದುರು ಹೋಗಿ ಕುಳಿತು ಬಸ್ಸನ್ನು ತೆಗೆಯಲು ಬಿಡುವುದಿಲ್ಲ ಎಂದು ಜಗಳ ಪ್ರಾರಂಭಿಸಿ ಬಸ್ಸಿನವರೊಂದಿಗೆ ಹೊಡೆದಾಡಿಕೊಂಡರು. ಆಗ ರಾಜೇಶ್ ಶೆಟ್ಟಿ ತಂದೆ:ನಾರಾಯಣ ಶೆಟ್ಟಿ ವಾಸ: ನಿಟ್ಟೂರು, ಉಡುಪಿ ರವರು ಹಾಗೂ ನಿತಿನ್, ಕುಮಾರ್ ರವರು ಜಗಳವನ್ನು ಬಿಡಿಸಿದ್ದ ವೇಳೆ ಅವರನ್ನು ಉದ್ದೇಶಿಸಿ ನಿಮಗೆ ಡಿಸೇಲ್ ಹಾಕುವಾಗ ಬಸ್ಸನ್ನು ಸರಿಯಾಗಿ ನಿಲ್ಲಿಸಲು ಆಗುವುದಿಲ್ಲವಾ ಎಂದು ಕಾರಿನಲ್ಲಿದ್ದವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ರಾಜೇಶ್ ಶೆಟ್ಟಿ, ನಿತಿನ್ ಮತ್ತು ಕುಮಾರ ಎಂಬವರಿಗೆ ಹೊಟ್ಟೆಗೆ ಬೆನ್ನಿಗೆ ಕೈಗೆ ಹೊಡೆದರು. ಗಲಾಟೆ ಜಾಸ್ತಿಯಾದ ಸಮಯ ಬಸ್ಸಿನವರು ಮತ್ತು ಇತರರು ಬಂದಾಗ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕಾರ್ ಚಲಾಯಿಸಿಕೊಂಡು ಹೋಗಿರುವುದಾಗಿದೆ ಈ ಬಗ್ಗೆ ರಾಜೇಶ್ ಶೆಟ್ಟಿ ಯವರು ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 251/09 ಕಲಂ 323, 504, 506, 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಇತರ ಪ್ರಕರಣ
 
ದಿನಾಂಕ: 30/7/09 ರಂದು ಹರೀಶ (40 ವರ್ಷ) ತಂದೆ: ಪರದೇಶಿ ವಾಸ: ಕಂಚಿನಡ್ಕ, ನಡ್ಸಾಲು ಗ್ರಾಮದವರು ಅವರ ಮಗಳೊಂದಿಗೆ ಬಜಾಜ್ ಎಂ. 80 ವಾಹನದಲ್ಲಿ ಹೋಗುತ್ತಿದ್ದಾಗ ನಡ್ಸಾಲು ಗ್ರಾಮದ ಕಾರ್ಕಳ ಜಂಕ್ಷನ್ ಬಳಿ 16:00 ಘಂಟೆಗೆ ಶಿವ, ಗಣೇಶ ಮತ್ತು ಗೋವಿಂದ ಎಂಬವರು ಸಮಾನ ಉದ್ದೇಶದಿಂದ ಮೋಟಾರ್ ಸೈಕಲ್ನಲ್ಲಿ ಬಂದು ಅವರನ್ನು ತಡೆದು ನಿಲ್ಲಿಸಿ, ಕೈಕಾಲುಗಳನ್ನು ಕಡಿದು ಹಾಕುವುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ. ಹಳೇ ದ್ವೇಷದಿಂದ ಅವರು ಈ ಕೃತ್ಯವೆಸಗಿದ್ದಾಗಿದೆ ಎಂಬುದಾಗಿ ಹರೀಶ್ ರವರು ನೀಡಿದ ಪಿರ್ಯಾದಿಯಂತೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 129/09 ಕಲಂ: 341, 506, ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಕಳವಾದ ಬೈಕಿನ ಸಹಿತ ಆರೋಪಿಗಳ ಸೆರೆ
 
ದಿನಾಂಕ 24/07/2009ರಂದು ರಾತ್ರಿ ಸಮಯದಲ್ಲಿ ಕುಂದಾಪುರ ಕೋಣಿ ಗ್ರಾಮದ ಹೆಚ್.ಎಂ.ಟಿ., ರಸ್ತೆಯ ಬಳಿ ವಾಸವಿರುವ ಗಿರೀಶ್ ಹೆಬ್ಬಾರ್ರವರು ಮನೆಯ ಎದುರು ಪಾಕರ್್ ಮಾಡಲಾಗಿದ್ದ ಹೀರೋಹೋಂಡಾ ಮೋಟಾರು ಬೈಕ್ ಕೆಎ 20 ಎಲ್ 7231ನ್ನು ಕದ್ದ ಇಬ್ಬರು ಆರೋಪಿಗಳನ್ನು ಕೇವಲ ಐದು ದಿನಗಳಲ್ಲಿ ಉಡುಪಿ ಕಲ್ಯಾಣಪುರ ಸಂತೆಕಟ್ಟೆ ಬಳಿ ಖಚಿತ ವರ್ತಮಾನದಂತೆ ಮಾರಾಟಕ್ಕೆ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದು ಆರೋಪಿಗಳನ್ನು ಕುಂದಾಪುರ ತಾಲೂಕಿನ ವಡೇರಹೋಬಳಿಯ ಸಂತೋಷ (27 ವರ್ಷ) ಹಾಗೂ ಕೋಣಿಯ ರತ್ನಾಕರ (27 ವರ್ಷ) ಎಂದು ಗುರುತಿಸಲಾಗಿದೆ. ಬೈಕಿನ ಅಂದಾಜು ಬೆಲೆ 23,000/- ರೂಪಾಯಿ ಆಗಿರುತ್ತದೆ. ಈ ಕಾಯರ್ಾಚರಣೆಯನ್ನು ದಿನಾಂಕ 29/07/2009ರ ರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ್ ಎಸ್. ತಳಗೇರಿರವರ ನಿದರ್ೇಶನದಂತೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಯಂತ್ ವಿ.ಶೆಟ್ಟಿರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ., ಪೊಲೀಸ್ ನಿರೀಕ್ಷಕರಾದ ಶ್ರೀ ಗಣೇಶ್ ಎಂ. ಹೆಗಡೆ ಮತ್ತು ಅವರ ಸಿಬ್ಬಂದಿಯವರಾದ ಶ್ರೀಯುತರಾದ ದಾಮೋದರ ಪುತ್ತೂರು, ಮಹಾಬಲ ಶೆಟ್ಟಿ, ನಾರಾಯಣ, ಸತೀಶ್ ಬಲ್ಲಾಳ್, ಉದಯ್ ಕುಂದರ್, ದಿನೇಶ್ ಶೆಟ್ಟಿ, ವಾಮನ, ರತ್ನಾಕರ, ಮನೋಹರ ಉದ್ಯಾವರರವರು ನಡೆಸಿರುತ್ತಾರೆ. ವಶಪಡಿಸಿಕೊಂಡ ಬೈಕ್ ಮತ್ತು ಆರೋಪಿಗಳನ್ನು ಕುಂದಾಪುರ ಠಾಣೆಗೆ ಹಸ್ತಾಂತರಿಸಲಾಗಿದೆ.
 
ಅನುಮಾನಾಸ್ಪದ ವ್ಯಕ್ತಿಯ ಬಂಧನ
ದಿನಾಂಕ 29/07/09 ರಂದು ರಾತ್ರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ.ರವರು ಠಾಣಾ ಸಿಬ್ಬಂದಿಯವರೊಂದಿಗೆ ಗಸ್ತು ಕರ್ತವ್ಯದಲ್ಲಿರುವಾಗ ರಾತ್ರಿ ಸುಮಾರು 2:30 ಘಂಟೆಗೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಬೆಳ್ಮಣ್ ಕಾಪರ್ೊರೇಶನ್ ಬ್ಯಾಂಕ್ ಬಳಿ ಇರುವ ಕಟ್ಡಡದ ಬಳಿ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದನ್ನು ಕಂಡು ಆತನು ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಲ್ಲಿದ್ದಾನೆ ಎಂಬ ಬಲವಾದ ಗುಮಾನಿಯ ಮೇರೆಗೆ ಮುಂಜಾಗ್ರತಾ ಕ್ರಮಕ್ಕಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಲ್ಲಿ ತನ್ನ ಹೆಸರು ವಿಶಾಲ್ ರಾಥೋಡ್ ಅಲಿಯಾಸ ವಿಶ್ವನಾಥ ಅಲಿಯಾಸ್ ಭೋಲ (21 ವರ್ಷ), ತಂದೆ ದಿವಂಗತ ರಮೇಶ್ ರಾಥೋಡ್ ವಾಸ: ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜು ಎದುರುಗಡೆ, ಸೇಡಂ ರಸ್ತೆ, ಗುಲ್ಬರ್ಗ ಎಂದು ತಿಳಿಸಿದ್ದು ಆತನಿಂದ ಸದ್ವರ್ತನೆಗಾಗಿ ಮುಚ್ಚಳಿಕೆ ಪಡೆಯುವರೇ ಕಾರ್ಕಳ ತಾಲೂಕು ದಂಢಾಧಿಕಾರಿಯವರಿಗೆ ಠಾಣಾ ಅಪರಾಧ ಕ್ರಮಾಂಕ 88/09 ಕಲಂ 109 ಸಿ.ಆರ್.ಪಿ.ಸಿ.ಯಂತೆ ವರದಿ ಸಲ್ಲಿಸಲಾಗಿದೆ.
 
 
ಅಪಘಾತ ಪ್ರಕರಣಗಳು
 
ದಿನಾಂಕ 29-07-09 ರಂದು ಮದ್ಯಾಹ್ನ 3.15 ಗಂಟೆಗೆ ಕೊಲ್ಲೂರು ಠಾಣಾ ಸರಹದ್ದಿನ ಉಳಿಕೋಣು, ಮುದೂರು ಗ್ರಾಮದ ಕುಂದಾಪುರ ವಾಸಿ ಶೀನ ಪೂಜಾರಿ(48) ತಂದೆ: ದಿ ಗೋವಿಂದ ಪೂಜಾರಿ, ಎಂಬವರು ಕೊಲ್ಲೂರಿಗೆ ಬರುವರೇ ತನ್ನ ಮೋಟಾರ್ ಸೈಕಲ್ ನಂಬ್ರ ಕೆ.ಎ. 20 ಕೆ 5484 ರಲ್ಲಿ ಹಿಂಬದಿ ಕುಳಿತಿದ್ದು, ಮಂಜುನಾಥರವರು ಚಲಾಯಿಸಿಕೊಂಡು ಬರುತ್ತಿರುವಾಗ, ಜಡ್ಕಲ್ ಶಾಲೆಯ ಬಳಿ ತಿರುವಿನಲ್ಲಿ ಆರೋಪಿ ತನ್ನ ಕಾರುಚಾಲಕ ನಂಬ್ರ ಕೆ.ಎ.424110 ನ್ನು ಕೊಲ್ಲೂರಿನಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋ.ಸೈಕಲ್ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಶೀನ ಪೂಜಾರಿರವರಿಗೆ ಸಾಧಾರಣ ಗಾಯವಾಗಿದ್ದು, ಮೋ.ಸೈಕಲ್ ಚಲಾಯಿಸುತ್ತಿದ್ದ ಮಂಜುನಾಥನಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯ ಉಂಟಾಗಿರುವುದಾಗಿದೆ. ಈ ಅಪಘಾತದ ಬಗ್ಗೆ ಶೀನ ಪೂಜಾರಿ ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 46/09 ಕಲಂ. 279,337,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 28/7/09 ರಂದು ಬೋಜ.ಡಿ.ಕೊಟ್ಯಾನ್ ಎಂಬವರು ತನ್ನ ಬಜಾಜ್ ಎಂ80 ನಂಬ್ರ ಕೆಎ 20 ಎಲ್ 4629 ನ್ನು ಸವಾರಿ ಮಾಡಿಕೊಂಡು ಮನೆ ಕಡೆಗೆ ಸುಲ್ತಾನ್ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 22.00 ಘಂಟೆಗೆ ಕುಂದರ್ ಮೂಲ ಸ್ಥಾನದ ಬಳಿ ತಲ್ಫಿದಾಗ ಎದುರಿನಿಂದ ಅಂದರೆ ಕೋಡಿ ಕಡೆಯಿಂದ ಸುಲ್ತಾನ್ ರಸ್ತೆ ಕಡೆಗೆ ಆರೋಪಿ ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ14-ಜೆ-673 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಎಂ80 ಸವಾರರಿಗೆ ಡಿಕ್ಕಿ ಹೊಡೆದು ಅಪಘಾತವೆಸಗಿರುತ್ತಾರೆ. ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಎಂ80 ಸವಾರ ಭೋಜ ರವರ ಎಡಕಾಲಿಗೆ ರಕ್ತಗಾಯ ಹಾಗೂ ಎಡಕಣ್ಣಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ವತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಅಪಘಾತದ ಬಗ್ಗೆ ಮನೋಹರ (29) ತಂದೆ; ವೆಂಕಪ್ಪ ಕಕರ್ೆರ ವಾಸ; ಕಾಂಚನ್ ಐಸ್ ಪ್ಲಾಂಟ್ ಬಳಿ ಹೆಜಮಾಡಿ ಗ್ರಾಮ ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಪಡುಬಿದ್ರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/09 ಕಲಂ. 279,337,ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರಮೇಶ ತಂದೆ: ಲೋಕಯ್ಯ ಕಲ್ಲಾರಿ ಮನೆ, ಬೆಳ್ತಂಗಡಿ ಎಂಬವರು ಕೆ.ಎ. 20/ಎ 4046 ನೇ ಲಾರಿಯಲ್ಲಿ ಕ್ಲಿನರ್ ಆಗಿದ್ದು, ದಿನಾಂಕ 28/07/09 ರಂದು ಉಡುಪಿ ನಿಟ್ಟೂರಿನಿಂದ ಮಾರ್ಬಲ್ ತುಂಬಿಸಿಕೊಂಡು ವಾಲ್ತೂರು ಕಡೆಗೆ ಬರುತ್ತಾ ಕುಂದಾಪುರ ಕಂಡ್ಲೂರು-ವಾಲ್ತೂರು ರಸ್ತೆಯ ಸಾಗರ ಎಸ್ಟೇಟ್ ಹತ್ತಿರ ತಲುಪುವಾಗ್ಗೆ ರಾತ್ರಿ ಸಮಯ 11:15 ಗಂಟೆಗೆ ಆರೋಪಿ ಕೆ.ಎ. 20/ ಎ 4046 ನೇ ಲಾರಿ ಚಾಲಕ ರಮೇಶ್ ರೆಡ್ಡಿಯು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಲಾರಿಯು ಮುಗುಚಿ ಬಿದ್ದು, ಲಾರಿಯ ಒಳಗಿದ್ದ, ಕೂಲಿಯಾಳುಗಳಾದ ಮಂಜುನಾಥ ಮತ್ತು ಸಿದ್ದಪ್ಪರವರಿಗೆ ಗಾಯಗಳಾಗಿದ್ದು, ಅಲ್ಲದೇ ಲಾರಿ ಚಾಲಕ ರಮೇಶ್ ರೆಡ್ಡಿ ಇವರಿಗೂ ಗಾಯವಾಗಿರುತ್ತದೆ. ಈ ಬಗ್ಗೆ ರಮೇಶರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 225/09 ಕಲಂ. 279,337,ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 29/07/09 ರಂದು ಜೆಸಿಂತ್ ಸಿ. ಮೆಂಡೋನ್ಸ, ಗಂಡ: ಚಾಲ್ಸ್ ಮೆಂಡೋನ್ಸ್, ವಾಸ: ಮನೆ ನಂ. 4-709, ರಾಜೀವ ನಗರ, ಅಲೆವೂರ್ ರೋಡ್, ಮಣಿಪಾಲ್, ಉಡುಪಿ. ಎಂಬವರು ತಮ್ಮ ಮನೆ ರಾಜೀವ ನಗರಕ್ಕೆ ಹೋಗುವರೇ ತಮ್ಮ ಕಾರ್ ನಂಬ್ರ: ಕೆ.ಎ-20-ಎನ್-970ನ್ನು ಚಲಾಯಿಸಿಕೊಂಡು ತೆಂಕುಪೇಟೆ ಮಾರ್ಗವಾಗಿ ಸಮಯ ಸುಮಾರು 17:00 ಗಂಟೆಗೆ ಬೀಡಿನಗುಡ್ಡೆ ಜಂಕ್ಷನ್ ಬಳಿ ತಲುಪುವಾಗ್ಗೆ ಆಪಾದಿತ ಕೆ.ಎ-19-ಎಂ-7474ನೇ ಮಹೇಂದ್ರ ಜೀಪ್ನ ಚಾಲಕ ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಿಟ್ಪಾಡಿ ಕಡೆಯಿಂದ ಬೀಡಿನಗುಡ್ಡೆ ಕಡೆಗೆ ಚಲಾಯಿಸಿಕೊಂಡು ಬಂದು ಕಾರಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರಿನ ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ರಮೇಶರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 225/09 ಕಲಂ. 279,337,ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 29/07/09 ರಂದು ವೆಂಕಟೇಶ (31),ತಂದೆ: ದಿ: ಸೋಮನಾಥ ಶೇವರ್ೆಗಾರ, ವಾಸ: ತೆಂಕಬೆಟ್ಟು, ಉಪ್ಪೂರು ಗ್ರಾಮ, ಉಡುಪಿ ಎಂಬವರು ತನ್ನ ಮಾವ ಯು.ರಾಧಾಕೃಷ್ಣ ರವರೊಂದಿಗೆ ಆದಿ ಉಡುಪಿ ಸಂತೆಗೆ ಬಂದಿದ್ದು ಸಂತೆಯಲ್ಲಿ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಕರಾವಳಿ ಜಂಕ್ಷನ್ ಕಡೆಗೆ ಮಾವನವರೊಂದಿಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಂಜೆ ಸುಮಾರು 4:00 ಗಂಟೆ ಸಮಯಕ್ಕೆ ಆದಿ ಉಡುಪಿ ಆರ್.ಟಿ.ಓ ಕಛೇರಿಯ ಎದುರುಗಡೆ ತಲುಪುವರಷ್ಟರಲ್ಲಿ ಮಲ್ಪೆ ಕಡೆಯಿಂದ ಒಂದು ಪಿ.ಎಂ.ಟಿ ಬಸ್ಸು ನಂಬ್ರ ಕೆಎ 20 ಬಿ 4144 ನೇ ಚಾಲಕನು ತನ್ನ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಾವ ರಾಧಾಕೃಷ್ಣರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತೀವೃ ಗಾಯಗೊಂಡಿರುತ್ತಾರೆ. ಈ ಅಪಘಾತದ ಬಗ್ಗೆ ವೆಂಕಟೇಶ್ ರವರು ನೀಡಿದ ದೂರಿನ ಮೇರೆಗೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 248/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಮನುಷ್ಯಕಾಣೆ ಪ್ರಕರಣ
 
ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಪೊಸ್ಟ್ನ ಬ್ಯೂಟಿ ಹೋಮ್, ಮೇಘದಶರ್ಿನಿ ಹೋಟೆಲ್ ಹಿಂದುಗಡೆಯ ವಾಸಿ ಮಾಶರ್ೆಲ್ ರೋಶನ್ ಡಿಸೋಜ ಪ್ರಾಯ: 36 ವರ್ಷ, ಇವರ ತಂದೆಯಾದ ಹೆನ್ರಿ ಡಿಸೋಜ ಪ್ರಾಯ: 68 ವರ್ಷ ಎಂಬವರು ಇತ್ತೀಚೆಗೆ ಮಾನಸಿಕ ಅಸ್ವಸ್ಥರಾಗಿದ್ದು, ನೆನಪಿನ ಶಕ್ತಿ ತೀರಾ ಕಡಿಮೆಯಾಗಿದ್ದು, ವಿಪರೀತ ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು. ಈ ಬಗ್ಗೆ ಸುಮಾರು ಒಂದು ತಿಂಗಳುಗಳ ಕಾಲ ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ವ್ಶೆದ್ಯರಿಂದ ಚಿಕಿತ್ಸೆ ಪಡೆದುಕೊಂಡು ದಿ: 27/07/09 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದವರು. ದಿನಾಂಕ 29/07/09 ರಂದು ಬೆಳಿಗ್ಗೆ ಸುಮಾರು 6:00 ಗಂಟೆ ಸಮಯಕ್ಕೆ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ಮಾಶರ್ೆಲ್ ರೋಶನ್ ಡಿಸೋಜರವರು ನೀಡಿದ ದೂರಿನ ಮೇರೆಗೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 246/09 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment