Monday, July 27, 2009

ಘರ್ಷಣೆ: ಪೊಲೀಸರ ಸಹಿತ 6 ಮಂದಿಗೆ ಗಾಯ/6 Injured Near Cherangai

ಕಾಸರಗೋಡು: ಇಲ್ಲಿಗೆ ಸಮೀಪದ ನೆಲ್ಲಿಕುಂಜೆ ಚೇರಂಗೈ ಕಡಲ ತೀರದಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸರ ಸಹಿತ 6 ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಕಾವುಗೋಳಿಯ ವಿ.ಕೆ.ಮುರಳಿ, ಆರ್.ಕೆ.ಸುರೇಶ್, ಟಿ.ಕೆ.ಪ್ರಣಾಮ್, ನಗರ ಠಾಣೆಯ ಪೊಲೀಸರಾದ ಎಂ.ಬಿನು, ಬಿಜೇಶ್ ವಗರ್ಿಸ್ ಗಾಯಗೊಂಡವರು. ಸಿ.ಐ. ಟಿ.ಪಿ.ಪ್ರೇಮರಾಜನ್ ಅವರಿಗೂ ಕಲ್ಲುತೂರಾಟದಿಂದ ಗಾಯಗಳಾಗಿದೆ.
ನಿನ್ನೆ ಚೇರಂಗೈಯಲ್ಲಿ ಬೀಚ್ಗೆ ಆಗಮಿಸಿದ ಮಂದಿಯನ್ನು ಹೀಯಾಳಿಸಿದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದೆ. ಘಟನೆಗೆ ಬಂಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆ ತಂಡ ಹಿಂಸೆಗೆ ಇಳಿದಿದೆ.
ಘಟನೆಗೆ ಸಂಬಂಧಿಸಿದಂತೆ 8 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಾಯಾಳು ಸಾವು

ಕಾಸರಗೋಡು: ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದರು.
ಚೆಂಗಳ ಸಮೀಪದ ಸಂತೋಷ್ನಗರದ ನಿವಾಸಿ ಬಿ.ಕೆ.ಅಬ್ದುಲ್ ನಿಯಾಜ್(26) ಸಾವನ್ನಪ್ಪಿದ ವ್ಯಕ್ತಿ. ಜ.24ರಂದು ರಸ್ತೆ ಬದಿ ನಡೆಯುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿತ್ತು.
 
ಹಲ್ಲೆ
 
ಕಾಸರಗೋಡು: ಕಾಸರಗೋಡಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ಸಿನ ಚಾಲಕನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಸಾರಾಯಿ ಪ್ರಕರಣದ ವಾರೆಂಟ್ ಆರೋಪಿಯೂ ಆಗಿರುವ ಆರಿಕ್ಕಾಡಿಯ ಹಮೀದ್ ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಪಂಜಿಕಲ್ಲು ನಿವಾಸಿ ಪ್ರಭಾಕರ ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
 
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment