ಕಾಸರಗೋಡು: ವಿದ್ಯಾಮಂದಿರಗಳಲ್ಲಿ ರೇಗಿಂಗ್ ಒಂದು ಸಾಮಾಜಿಕ ವಿಪತ್ತಾಗಿ ಪರಿಣಮಿಸಿದೆ. ಇದನ್ನು ನಿವಾರಿಸಲು ವಿದ್ಯಾರ್ಥಿಗಳ ಸಹಿತ ಹೆತ್ತವರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶೆ ಎಂ.ಕೆ.ಪ್ರೇಮಲತಾ ಗುರುವಾರ ಇಲ್ಲಿ ತಿಳಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ರೇಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೇಗಿಂಗ್ ಕಾನೂನಿನ ಮೂಲಕ ಎದುರಿಸಲಾಗುವುದು. ಜಿಲ್ಲೆಯಲ್ಲಿ 110 ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ರೇಗಿಂಗ್ ವಿರೋಧಿ ಸಮಿತಿ ಮತ್ತು ರೇಗಿಂಗ್ ವಿರೋಧಿ ದಳವನ್ನು ರೂಪೀಕರಿಸಲಾಗುವುದು ಎಂದೂ ಅವರು ವಿವರಿಸಿದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ.ಎ.ವಿಜಯನ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಕನಸುಗಳೇ ಇಲ್ಲ; ಆದರೂ ಉತ್ತಮ ಕೌಟುಂಬಿಕ ವಾತಾವರಣ, ಅಧ್ಯಾಪಕ-ವಿದ್ಯಾರ್ಥಿಗಳ ಮಧ್ಯೆ ಸ್ನೇಹ ಸಂಬಂಧ ಮತ್ತು ಆರೋಗ್ಯಕರ ವಾಚನಾ ಅಭಿರುಚಿಯಿಂದ ರೇಗಿಂಗ್ ಪಿಡುಗನ್ನು ನಿರ್ಮೂಲನ ಮಾಡಲು ಸಾಧ್ಯ ಎಂದರು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಸಾಮಾಜಿಕ ವಿಪತ್ತನ್ನು ನಿವಾರಿಸಬಹುದು. ಆದರೆ ಕಾನೂನು ಕ್ರಮವೇ ಅಂತಿಮ ಅಸ್ತ್ರವಲ್ಲ. ವಿದ್ಯಾರ್ಥಿಗಳು ಆತ್ಮಪರಿಶೋಧನೆ ನಡೆಸಿದರೆ ಇಂಥ ಅಮಾನುಷ ವರ್ತನೆಯನ್ನು ನಿವಾರಿಸಲು ಸಾಧ್ಯವಿದೆ ಎಂದೂ ಅವರು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್, ಕಾಲೇಜು ಶಿಕ್ಷಣ ವಿಭಾಗದ ಉಪನಿರ್ದೇಶಕ ವಿ.ಗೋಪಿನಾಥನ್, ಕಾಸರಗೋಡು ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಕೆ.ಎಂ. ಭಟ್, ಹೊಸದುರ್ಗ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಸಿ.ಕೆ.ಶ್ರೀಧರನ್, ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎಸ್.ಅಜಯಕುಮಾರ್ ನಾಯರ್ ಹಾಜರಿದ್ದರು. ಜಿಲ್ಲಾಧಿಕಾರಿ ಆನಂದ ಶರ್ಮ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಕೆ.ಮಾಧವನ್ ನಂಬ್ಯಾರ್ ಸ್ವಾಗತಿಸಿ, ಕೆ.ರಮೇಶ್ ಭಾ ವಂದಿಸಿದರು.
ಆ.1 ಮತ್ತು 2ರಂದು ಕನ್ನಡ ಸಂಸ್ಕೃತಿ ಸಮ್ಮೇಳನ
ಕಾಸರಗೋಡು: 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ-2009 ಆ.1 ಮತ್ತು 2ರಂದು ಇಲ್ಲಿನ ಲಲಿತ ಕಲಾ ಸದನದಲ್ಲಿ ಜರುಗಲಿದೆ ಎಂದು ಕಾರ್ಯಕ್ರಮದ ಸಂಘಟಕರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..
ಸಂಜೆ 3 ಗಂಟೆಗೆ ನಡೆಯುವ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ.ಕಯ್ಯಾರ ಕಿಞ್ಞಣ್ಣ ರೈ ಸಮ್ಮೇಳನದ ಅಧ್ಯಕ್ಷತೆ ವಹಿಸುವರು.
ಬಳಿಕ ಹಾಸ್ಯ-ಲಾಸ್ಯ, ನೃತ್ಯ ವೈಭವ, ಕವಿಗೋಷ್ಠಿ, ಕರಗ ನೃತ್ಯ ಜರುಗಲಿದೆ.
2ರಂದು ಬೆಳಗ್ಗೆ 9.30ಕ್ಕೆ ದಾಸ ಸಂಕೀರ್ತನೆ, 10.15ಕ್ಕೆ ಕವಿಗೋಷ್ಠಿ, ಜನಪದ ವೈವಿಧ್ಯ, ಮಧ್ಯಾಹ್ನ 12.45ಕ್ಕೆ ತಬಲ ವಾದನ, 2.30ಕ್ಕೆ ಮನೆ ಮನೆಯಲ್ಲಿ ಭರತ ನಾಟ್ಯ ಸರಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ, ಸಂಜೆ 3.30ಕ್ಕೆ ಹೊರನಾಡು-ಗಡಿನಾಡು ಕನ್ನಡಿಗ ಗೋಷ್ಠಿ, 4.30ಕ್ಕೆ ಹನಿ ಹಾಸ್ಯ ನಡೆಯಲಿದೆ.
ಕನರ್ಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.
ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ:
ಪಿ.ಎಸ್.ಕಾರಂತ್(ಕನ್ನಡ ಸೇವೆ), ಡಾ.ಎಚ್.ಎಸ್.ಶಿವಶಂಕರ್, ಇಂದು ದಾಸ್ ಶೆಟ್ಟಿ(ಸಮಾಜ ಸೇವೆ), ಪದ್ಮನಾಭ ಬಿ.ಆರ್, ರಾಧಾಕೃಷ್ಣ ಉಳಿಯತ್ತಡ್ಕ(ಸಾಹಿತ್ಯ), ಕಾಗೋಡು ಅಣ್ಣಪ್ಪ(ರಂಗಕಲೆ), ಬಾಲಸುಬ್ರಹ್ಮಣ್ಯ ಎಂ.(ಎಂಜಿನಿಯರಿಂಗ್), ದೀಪಾ ರಾವ್(ಭರತನಾಟ್ಯ), ಕೆ.ವಿ.ರಮೇಶ್(ಬೊಂಬೆಯಾಟ), ಪ್ರದೀಪ್ ಕಾಸರಗೋಡು(ರಂಗಭೂಮಿ) ಎಂಬವರಿಗೆ ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ ನೀಡಲಾಗುವುದು.
ಹೃದಯವಂತರು ಪ್ರಶಸ್ತಿ:
ಕೆ.ಎಸ್.ಪ್ರಭಾಕರ್(ಆಡಳಿತ), ಜಯಪ್ರಕಾಶ್ ರಾವ್ ಪುತ್ತೂರು(ಸಾರ್ವಜನಿಕ ಸಂಪರ್ಕ), ಕೆ.ಎಂ.ಕೋಟ್ಯಾನ್ ಮುಂಬೈ, ಮಧುಕರ ರೈ ಕೊರೆಕ್ಕಾನ(ಸಮಾಜ ಸೇವೆ), ಡಾ.ಕೆ.ಬಿ.ನಾಗೂರು ಬಿಜಾಪುರ(ಆಯುವರ್ೇದ), ಎ.ನರಸಿಂಹ ಭಟ್(ಸಾಹಿತ್ಯ), ಡಾ.ವೆಂಕಟರಮಣ ಹೆಗ್ಡೆ ಸಿರ್ಸಿ (ಪ್ರಕೃತಿ ಚಿಕಿತ್ಸೆ), ಶಂಸುದ್ದೀನ್ ಸಾಲ್ಮರ ಪುತ್ತೂರು(ನಾಟಿ ವೈದ್ಯ), ಆರ್.ಧನರಾಜ್ ಮಂಗಳೂರು(ತುಳು ಚಿತ್ರರಂಗ), ಜಿ.ಎ.ಸಿದ್ಧಪ್ಪ ಬೆಂಗಳೂರು(ಪುಷ್ಪಾಲಂಕಾರ), ಭಾಸ್ಕರ ರೈ ಕುಕ್ಕುವಳ್ಳಿ(ಯಕ್ಷಗಾನ), ಪೆಡರ್ೂರು ಪ್ರಭಾಕರ್ ಕಲ್ಯಾಣಿ ಮಂಡ್ಯ(ರಂಗಭೂಮಿ), ರಂಗಪುತ್ಥಳಿ ರಘುನಂದನ್(ಬೊಂಬೆಯಾಟ), ವಾಪಿ ಕರ್ನಾಟಕ ಸಂಘ(ಕನ್ನಡ ಸೇವೆ).
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ್, ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಮ ಕಾಸರಗೋಡು, ವಿ.ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಅಗ್ಗಿತ್ತಾಯ, ಶಿವರಾಮ ಶೆಟ್ಟಿ, ಜಗದೀಶ್ ಕೂಡ್ಲು ಹಾಜರಿದ್ದರು.
--
http://www.kasaragodvartha.com/
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment