Monday, July 27, 2009

ಗಮಕ ಮಾಸಾಚರಣೆ ಉದ್ಘಾಟನೆ/Gamaka

ಕಾಸರಗೋಡು: ಕನರ್ಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಗಮಕ ಮಾಸಾಚರಣೆಯನ್ನು ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇತ್ತೀಚೆಗೆ ಮಠದಲ್ಲಿ ಉದ್ಘಾಟಿಸಿದರು.
ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಹಾಜರಿದ್ದರು.
ಟಿ. ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತನಾಡಿದರು.
ಘಟಕದ ಪ್ರಧಾನ ಕಾರ್ಯದಶರ್ಿ ಕಾಸರಗೋಡು ಚಿನ್ನಾ ಸ್ವಾಗತಿಸಿ, ಬೆಳ್ಳಿಗೆ ನಾರಾಯಣ ಮಣಿಯಾಣಿ ವಂದಿಸಿದರು.

ಬಿ.ಎಂ.ಎಸ್. ಸ್ಥಾಪಕ ದಿನಾಚರಣೆ

ಕಾಸರಗೋಡು: ಬಿ.ಎಂ.ಎಸ್. ಸ್ಥಾಪಕ ದಿನಾಚರಣೆ ಕುಂಬಳೆ ಸಮೀಪದ ನಾಯ್ಕಾಪಿನಲ್ಲಿ ಇತ್ತೀಚೆಗೆ ಜರುಗಿತು.
ಬಿ.ಎಂ.ಎಸ್.ಘಟಕ ಅಧ್ಯಕ್ಷ ಪ್ರಸಾದ್ ಪಾಟಾಳಿ ಉದ್ಘಾಟಿಸಿದರು. ಕುಂಬಳೆ ವಲಯ ಅಧ್ಯಕ್ಷ ಐತ್ತಪ್ಪ ಕುಲಾಲ್, ಕುಂಬಳೆ ಸಹಕಾರಿ ಬ್ಯಾಂಕಿನ ನಿದರ್ೇಶಕ ಮುರಳೀಧರ ಯಾದವ್, ದಯಾನಂದ ನಾಯ್ಕಾಪು, ಶಿವಕುಮಾರ್ ಕುಲಾಲ್, ಚರಣ್, ಮಹೇಂದ್ರ ಕುಮಾರ್, ಜಿತೇಶ್ ಹೆಗ್ಡೆ, ಚಿನ್ನು, ಬಾಲಕೃಷ್ಣ ಪೂಜಾರಿ, ವೇಣು ಕರಿವೆಳ್ಳೂರು ಹಾಜರಿದ್ದರು.
ರಾಜಗಟ್ಟಿ ನಾಯ್ಕಾಪು ಪ್ರಾಸ್ತಾವಿಕ ಮಾತನಾಡಿದರು.
ವಿಠಲ ಸ್ವಾಗತಿಸಿ, ಅಶೋಕ್ ಗಟ್ಟಿ ಮೂಲದ್ವಾರ ವಂದಿಸಿದರು.
 
ವಿದ್ಯಾಥರ್ಿಗಳಿಗೆ ಎನ್.ಎಸ್.ಎಸ್.ನಿಂದ ಸ್ವಾಗತ

ಕಾಸರಗೋಡು: ಕಾಸರಗೋಡು ಸಕರ್ಾರಿ ಕಾಲೇಜಿನ ಪ್ರಥಮ ಪದವಿ ವಿದ್ಯಾಥರ್ಿಗಳಿಗೆ ಎನ್.ಎಸ್.ಎಸ್. ಘಟಕದ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.
ಕಾಲೇಜು ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಮಾತನಾಡಿ, ರ್ಯಾಗಿಂಗ್ ವಿರುದ್ಧ ಪ್ರತಿಯೊಬ್ಬ ವಿದ್ಯಾಥರ್ಿಯೂ ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ರ್ಯಾಗಿಂಗ್ ವಿರೋಧಿ ಸಮಿತಿ ಸಂಚಾಲಕ ಶ್ರೀನಾಥ್ ಎ., ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ, ಪ್ರೊ.ನರೇಂದ್ರ, ಸ್ಮಿತಾ ಪಾರ್ವತಿ, ಎನ್.ಸಿ.ಸಿ. ಅಧಿಕಾರಿ ಸಿಜಿನ್ ಕುಮಾರ್, ಎನ್.ಎಸ್.ಎಸ್. ಕಾರ್ಯದಶರ್ಿಗಳಾದ ಖಾಲಿದ್, ನಯನ, ಮಹೇಶ್, ಜಿನೇಶ್ ಹಾಜರಿದ್ದರು.

ಅಭಿನಂದನೆ

ಕಾಸರಗೋಡು: ಭಾರತೀಯ ಯುವ ಸಂಚಲನದ ಬೇಳ ಘಟಕದ ಆಶ್ರಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ವಿಜೇತ ವಿದ್ಯಾಥರ್ಿಗಳಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ಬೇಳ ಶೋಕಮಾತಾ ದೇವಾಲಯದಲ್ಲಿ ಜರುಗಿತು.
ಕಾಸರಗೋಡು ವಲಯ ಪ್ರಧಾನ ಧರ್ಮಗುರು ಬಾಸಿಲ್ ವಾಸ್ ವಿದ್ಯಾಥರ್ಿಗಳನ್ನು ಅಭಿನಂದಿಸಿದರು. ಕಣ್ಣೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದ ಲಿಡಿಯಾ ಡಿ'ಸೋಜಾ ಅವರಿಗೆ ಸ್ಮರಣಿಕೆ ಸಹಿತ ನಗದು ಬಹುಮಾನ ನೀಡಿ ಗೌರವಿಸಿದರು.
ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ ಬೇಳ ಘಟಕದ ಅಧ್ಯಕ್ಷ ಸಂತೋಷ್, ಅರುಣ್, ವಿನೋದ್, ಎಡ್ವಡರ್್, ಸಂದೇಶ್ ಹಾಜರಿದ್ದರು.

ರೇಷನ್ ಅಂಗಡಿಗಳಲ್ಲಿ ಅವ್ಯವಹಾರ: ಡಿ.ವೈ.ಎಫ್.ಐ. ಎಚ್ಚರಿಕೆ

ಮಂಜೇಶ್ವರ: ರೇಷನ್ ಅಂಗಡಿಗಳಲ್ಲಿ ವ್ಯಾಪಕವಾಗಿ ನಡೆಯುವ ಅವ್ಯವಹಾರವನ್ನು ಕೊನೆಗೊಳಿಸಬೇಕು ಎಂದು ಡಿ.ವೈ.ಎಫ್.ಐ. ಮಂಜೇಶ್ವರ ಬ್ಲಾಕ್ ಸಮಿತಿ ಆಗ್ರಹಿಸಿದೆ.
ರೇಷನ್ ಅಂಗಡಿಗಳಲ್ಲಿ `ಅನ್ನಪೂರ್ಣ' ಕಾಡರ್ುದಾರರಿಗೆ 10 ಕಿಲೋ ಉಚಿತ ಅಕ್ಕಿ, `ಅಂತ್ಯೋದಯ ಅನ್ನ ಯೋಜನೆ'ಯಡಿ ಪ್ರತಿ ತಿಂಗಳಿಗೆ 2 ರೂ.ದರದಲ್ಲಿ 35 ಕಿಲೋ, ಬಿ.ಪಿ.ಎಲ್. ಕಾಡರ್ುದಾರರಿಗೆ 2 ರೂ. ದರದಲ್ಲಿ 25 ಕಿಲೋ ಅಕ್ಕಿ ಅಥವಾ ಗೋಧಿ, ಬಿ.ಪಿ.ಎಲ್., ಎ.ಎ.ವೈ ಕಾಡರ್ುದಾರರಿಗೆ 13.50 ರೂ. ದರದಲ್ಲಿ ಪ್ರತಿ ಸದಸ್ಯನಿಗೆ 400 ಗ್ರಾಂ ಸಕ್ಕರೆ, ಎ.ಪಿ.ಎಲ್. ಕಾಡರ್ುದಾರರಿಗೆ 8.90 ರೂ.ದರದಲ್ಲಿ 10 ಕಿಲೋ ಅಕ್ಕಿ, 6.70 ರೂ ದರದಲ್ಲಿ 2 ಕಿಲೋ ಗೋಧಿ, ವಿದ್ಯುತ್ ಸಂಪರ್ಕವಿಲ್ಲದ ಕಾಡರ್ುದಾರರಿಗೆ 5 ಲೀ., ವಿದ್ಯುತ್ ಸಂಪರ್ಕವಿರುವ ಕಾಡರ್ುದಾರರಿಗೆ 2 ಲೀ  ಸೀಮೆಎಣ್ಣೆ 9.50ರಿಂದ 9.70 ರೂ.ದರದಲ್ಲಿ ಲಭಿಸುತ್ತಿದೆ.
ಆಶ್ರಯ, ಪರಿಶಿಷ್ಟ ಜಾತಿ-ವರ್ಗ, ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ, ಮೀನು ಕಾಮರ್ಿಕರಿಗೆ ಕಾಲೋಚಿತವಾಗಿ ಸಕರ್ಾರ ವಿತರಿಸುವ ಸೌಲಭ್ಯವನ್ನು ಗ್ರಾಹಕರಿಗೆ ವಿತರಿಸದೆ ಜನತೆಗೆ ದ್ರೋಹವೆಸಗುತ್ತಿರುವ ರೇಷನ್ ಮಾಫಿಯಾಗಳ ಚಲನವಲನಗಳನ್ನು ಡಿ.ವೈ.ಎಫ್.ಐ. ಗಮನಿಸಿ ಹೋರಾಟಕ್ಕೆ ಇಳಿಯಲು ಮುಂದಾಗಿದೆ. ರೇಷನ್ ವ್ಯಾಪರಿಗಳ ವಂಚನೆಯ ಬಗ್ಗೆ ಸುಳಿವು ಲಭಿಸುವ ಸಾರ್ವಜನಿಕರು ಡಿ.ವೈ.ಎಫ್.ಐಯನ್ನು ಸಂಪಕರ್ಿಸುವಂತೆ ಮನವಿ ಮಾಡಲಾಗಿದೆ.
ಇತ್ತೀಚೆಗೆ ಹೊಸಂಗಡಿ ಎ.ಕೆ.ಜಿ. ಮಂದಿರದಲ್ಲಿ ನಡೆದ ಡಿ.ವೈ.ಎಫ್.ಐ. ಬ್ಲಾಕ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎನ್.ಕೆ.ಜಯರಾಮ ಅಧ್ಯಕ್ಷತೆ ವಹಿಸಿದ್ದರು.
ಅರವಿಂದ ಚಿಗುರುಪಾದೆ, ಫಾರುಕ್ ಶಿರಿಯ, ಶಿವಪ್ರಸಾದ್ ಚೆರುಗೋಳಿ, ಪಾರ್ವತಿ ಬೇಕೂರು, ಉಮೇಶ್ ಕನ್ನಟಿಪಾರೆ, ಅಬ್ಬಾಸ್ ಮುನ್ನೂರು, ಸತೀಶ ಎಲಿಯಾಣ, ಚಂದ್ರಹಾಸ ಕಾನ, ಬ್ಲಾಕ್ ಕಾರ್ಯದಶರ್ಿ ಬಿ.ಎ.ಮೊಹಮ್ಮದ್ ಹಾಜರಿದ್ದರು.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment