ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಧ್ಯಮ ಅಧ್ಯಾಪಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಪ್ರೊ.ಚಾಪಾಡಿ ವಾಸುದೇವ ಪ್ರಾಯೋಜಿತ `ಕಾಸರಗೋಡು ಕನ್ನಡ ವಿದ್ಯಾರ್ಥಿ ಪ್ರಶಸ್ತಿ' ವಿತರಣಾ ಸಮಾರಂಭ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ.ಪ್ಲಸ್ ಪಡೆದ ಶರತ್ ಕುಮಾರ್ ಜಿ.ಎಸ್.ಶೇಣಿ ಮತ್ತು ರೇಷ್ಮಾ ಕೆ.ಎಸ್. ಅಂಗಡಿಮೊಗರು ಇವರಿಗೆ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಸ್ಮರಣಕೆ ಸಹಿತ ನಗದು ಪುರಸ್ಕಾರ ವಿತರಿಸಿದರು. ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ಕೆ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಟಿ.ಡಿ. ಸದಾಶಿವ ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್ ವಂದಿಸಿದರು.ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡು: ರಾಜ್ಯ ಮೀನುಗಾರಿಕಾ ಇಲಾಖೆಯ ಕರಾವಳಿ ಅಭಿವೃದ್ಧಿ ಏಜೆನ್ಸಿ ಹಾಗೂ `ಮತ್ಸ್ಯಫೆಡ್'ನ ಆಶ್ರಯದಲ್ಲಿ ಸಮಗ್ರ ಕರಾವಳಿ ಅಭಿವೃದ್ಧಿ ಯೋಜನೆಯಡಿ ಇಲ್ಲಿನ ಕಸಬ ಕಡಪ್ಪುರದಲ್ಲಿ ನಿಮರ್ಿಸಿದ ಮತ್ಸ್ಯವಿಜ್ಞಾನ ಕೇಂದ್ರದ ಕಟ್ಟಡವನ್ನು ಇದೇ 31ರಂದು ಮೀನುಗಾರಿಕಾ ಸಚಿವ ಎಸ್.ಶರ್ಮ ಉದ್ಘಾಟಿಸುವರು.
ಶಾಸಕ ಸಿ.ಟಿ.ಅಹಮ್ಮದಾಲಿ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಕರುಣಾಕರನ್ ಉತ್ತಮ ಮೀನು ಕಾಮರ್ಿಕರನ್ನು ಸನ್ಮಾನಿಸುವರು.
ಆ.2ರಂದು ಸುಗಮ ಸಂಗೀತ ಶಿಬಿರ
ಕಾಸರಗೋಡು: ಇಲ್ಲಿನ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಆ.2ರಂದು ಸುಗಮ ಸಂಗೀತ ಶಿಬಿರ ಜರುಗಲಿದೆ.
ಶಾಲೆಯ ಮೆನೇಜರ್ ಸದಾಶಿವ ಶ್ಯಾನುಭೋಗ್ ಶಿಬಿರ ಉದ್ಘಾಟಿಸುವರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಿದ್ಯಾಧಿಕಾರಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎನ್.ಕೆ.ಮೋಹನ್ದಾಸ್, ಮುಖ್ಯೋಪಾಧ್ಯಾಯ ವೆಂಕರಮಣ ಭಟ್ ಭಾಗವಹಿಸುವರು.
ಕಾಸರಗೋಡಿನ ವಿಜಯ ಸಂಗೀತ ಪ್ರತಿಷ್ಠಾನ, ಪುತ್ತೂರಿನ ಸ್ವರಾಂಜಲಿ ನೃತ್ಯ ಸಂಗೀತ ಶಾಲೆ, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ದಳ ಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆಯುವ ಶಿಬಿರದಲ್ಲಿ ಗಾಯಕಿಯರಾದ ರಾಧಾ ಮುರಳೀಧರ್, ಶೋಭಿತಾ ಸತೀಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.
ಕನ್ನಡ ವಾಚನ ವಿಜೇತರು
ಕಾಸರಗೋಡು: ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಆಯೋಜಿಸಿದ ಪ್ರೌಢಶಾಲಾ ವಿಭಾಗದ ಕನ್ನಡ ವಾಚನ ಸ್ಪಧರ್ೆಯಲ್ಲಿ ತಾಲೂಕು ಮಟ್ಟದಲ್ಲಿ ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶೋಭಿತ್ ಎಂ. ಪ್ರಥಮ ಸ್ಥಾನ ಗಳಿಸಿದ್ದಾರೆ.
ಪೆರಡಾಲ ನವಜೀವನ ಪ್ರೌಢಶಾಲೆಯ ಶ್ರುತಿ ಎಸ್.ಶೇಟ್ ದ್ವಿತೀಯ ಮತ್ತು ಕಾಟುಕುಕ್ಕೆ ಎಸ್.ಎಸ್. ಪ್ರೌಢಶಾಲೆಯ ಕೇಶವ ಪ್ರಸಾದ್ ಎಸ್. ತೃತೀಯ ಸ್ಥಾನ ಗಳಿಸಿದ್ದಾರೆ.
ಇ-ವಿದ್ಯಾ ತರಬೇತಿ: ಅಜರ್ಿ ಆಹ್ವಾನ
ಕಾಸರಗೋಡು: ಮಧೂರು ಗ್ರಾಮ ಪಂಚಾಯ್ತಿಯ ಅಕ್ಷಯ 2ನೇ ಹಂತದ ಕಂಪ್ಯೂಟರ್ ಕಲಿಕಾ ಯೋಜನೆಯ ಇ-ವಿದ್ಯಾ ತರಬೇತಿಗೆ ಅಜರ್ಿ ಆಹ್ವಾನಿಸಲಾಗಿದೆ. ಅಜರ್ಿಗಳನ್ನು ಆ.10ರೊಳಗೆ ಪಂಚಾಯ್ತಿ ಕಚೇರಿಗೆ ಸಲ್ಲಿಸಬಹುದು.
ವಿಶ್ವ ಹಿಂದೂ ಪರಿಷತ್ತು ಘಟಕ ರೂಪೀಕರಣ
ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ತು, ಭಜರಂಗ ದಳದ ಮಂಜೇಶ್ವರ ನೂತನ ಘಟಕದ ಘೋಷಣೆ ಮತ್ತು ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ಜರುಗಿತು.
ಭಜರಂಗ ದಳದ ಸಂಚಾಲಕ ಸಂತೋಷ್ ಕೆ.ಜೆ. ಅಧ್ಯಕ್ಷತೆ ವಹಿಸಿದ್ದರು. ವಿ.ಎಚ್.ಪಿ. ಮಂಗಳೂರು ಗ್ರಾಮಾಂತರ ಕಾರ್ಯದಶರ್ಿ ಎಸ್.ನಾರಾಯಣ ಭಟ್, ಬಾಲಕೃಷ್ಣ ಶೆಟ್ಟಿ, ವಿ.ಎಚ್.ಪಿ. ಮಂಜೇಶ್ವರ ಮಾತೃ ಮಂಡಳಿ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರಾ, ಭಜರಂಗದಳ ಸಂಚಾಲಕ ಶರಣ್ ಹಾಜರಿದ್ದರು.
ಪದಾಧಿಕಾರಿಗಳು: ಆನಂದ ಆಚಾರ್ಯ(ಗೌರವಾಧ್ಯಕ್ಷ), ಹರೀಶ್ ಶೆಟ್ಟಿ ಮಾಡ(ಅಧ್ಯಕ್ಷ), ಹರೀಶ್ ಕನಿಲ, ಪುರುಷೋತ್ತಮ(ಉಪಾಧ್ಯಕ್ಷ), ತಾರಾನಾಥ ಹೊಸಂಗಡಿ(ಪ್ರಧಾನ ಕಾರ್ಯದಶರ್ಿ), ರಮೇಶ್ ಭಂಡಾರಿ(ಕೋಶಾಧಿಕಾರಿ), ಉಪೇಂದ್ರ ಆಚಾರ್ಯ(ಸಂಪರ್ಕ ಪ್ರಮುಖ) ಅವರನ್ನೊಳಗೊಂಡ ವಿಶ್ವ ಹಿಂದೂ ಪರಿಷತ್ತು ಘಟಕವನ್ನು ರೂಪೀಕರಿಸಲಾಯಿತು.
ಸಂತೋಷ್ ಕೆ.ಜೆ(ಪ್ರಧಾನ ಸಂಚಾಲಕ), ಉದಯ್ ಕುಮಾರ್(ಸಂಚಾಲಕ), ಪ್ರವೀಣ್ ಶೆಟ್ಟಿ, ಮಹೇಶ್ ಬೆಜ್ಜ, ಪುಂಡಲೀಕ ಮಂಜೇಶ್ವರ(ಸಹಸಂಚಾಲಕರು) ಎಂಬವರನ್ನು ಒಳಗೊಂಡ ಭಜರಂಗ ದಳ ಮಂಜೇಶ್ವರ ಘಟಕದ ಪದಾಧಿಕಾರಿಗಳನ್ನು ಆರಿಸಲಾಯಿತು.
ಕನ್ನಡ ನಂದಾದೀಪ ಸಮಾರಂಭ
ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ನಂದಾದೀಪ ಸಮಾರಂಭ ಇದೇ 31ರಂದು ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಜರುಗಲಿದೆ.
ಮಧ್ಯಾಹ್ನ 2 ಗಂಟೆಗೆ ಕವಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸುವರು. ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ರವಿ ಅಲೆವೂರಾಯ ವಕರ್ಾಡಿ ಅವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
--
www.kasaragodvartha.com
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment