ಕಾಸರಗೋಡು: ಪ್ರೀತಿಗೆ ಮಣಿಯುವುದೇ ಸಂಸ್ಕೃತಿ. ಓದುವಿಕೆಯೇ ನಿಜವಾದ ಸಂಸ್ಕೃತಿ ಎಂದು ಸಮ್ಮೇಳನಾಧ್ಯಕ್ಷ ವಿ.ಗ ನಾಯಕ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಟಿವಿಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ. ಕಚ್ಚಾಡುವ ಕೆಲಸ ಕನರ್ಾಟಕದಲ್ಲಿ ಹೆಚ್ಚಾಗಿದೆ. ಆದರೆ ಒಗ್ಗಟ್ಟಾಗುವ ಮೂಲಕ ಕನ್ನಡದ ಸಂಸ್ಕೃತಿಯನ್ನು ಉಳಿಸಬಹುದು. ಇಡೀ ಕನರ್ಾಟಕದ ಕನ್ನಡಕ್ಕಿಂತ ಕಾಸರಗೋಡಿನ ನೆಲದ ಕನ್ನಡ ಶುದ್ಧ, ಸುಂದರವಾಗಿದೆ ಎಂದೂ ಅವರು ಹೇಳಿದರು.
ದುಬೈ ಕನ್ನಡ ಸಂಘದ ಅಧ್ಯಕ್ಷ ಸಿ.ಆರ್.ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಿದರು. ರಾಮಚಂದ್ರ ಬೈಕಂಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಸಾರಾಂಗದ ನಿದರ್ೇಶಕ ಮೋಹನ್ ಕುಂಟಾರು `ಕಾಸರಗೋಡು ಸ್ವಾತಂತ್ರ್ಯ ಹೋರಾಟಗಾರರು' ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು. ಕೃತಿ ರಚಿಸಿದ ಕೆ.ಶಿವರಾಮ ಶೆಟ್ಟಿ ಕಾಸರಗೋಡು, ಸ್ವಾತಂತ್ರ್ಯ ಹೋರಾಟಗಾರ ನಾಮದೇವ ಶೆಣೈ, ಶಾಸಕ ಸಿ.ಟಿ. ಅಹಮ್ಮದಾಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕ.ಸಾ.ಪ. ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕಲ್ಕೂರ, ಲಲಿತಾ ಕಲಾ ಸದನದ ಅಧ್ಯಕ್ಷ ವೈ.ಎಸ್.ವಿ.ಭಟ್, ಪತ್ರಕರ್ತ ಎಸ್.ಕೆ.ಹಳೆಯಂಗಡಿ ಬರೋಡ ಹಾಜರಿದ್ದರು.
ಡಾ.ಎಚ್.ಎಸ್. ಶಿವಶಂಕರ್, ಇಂದುದಾಸ್ ಶೆಟ್ಟಿಬರೋಡಾ(ಸಮಾಜಸೇವೆ), ಪದ್ಮನಾಭ ಬಿ.ಆರ್. ದೊಡ್ಡಬಳ್ಳಾಪುರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ(ಸಾಹಿತ್ಯ), ಕಾಗೋಡು ಅಣ್ಣಪ್ಪ(ರಂಗಕಲೆ), ಬಾಲಸುಬ್ರಹ್ಮಣ್ಯ ಎಂ.(ಎಂಜಿನಿಯರಿಂಗ್), ವಿದುಷಿ ದೀಪಾ ರಾವ್ ದಾವಣಗೆರೆ(ಭರತನಾಟ್ಯ), ಪ್ರದೀಪ್ ಕಾಸರಗೋಡು(ರಂಗಭೂಮಿ) ಎಂಬವರಿಗೆ ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ ವಿತರಿಸಲಾಯಿತು.
ಉದ್ಘಾಟನಾ ಸಮಾರಂಭದ ಮೊದಲು ನೃತ್ಯ ವೈವಿಧ್ಯ ಹಾಗೂ ಪುತ್ತೂರಿನ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ `ಬಾರಿಸು ಕನ್ನಡ ಡಿಂಡಿಮ', ಚಿತ್ರಕಲಾವಿದ ವೀರೇಶ್ ಬಾದಾಮಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಶಿವರಾಮ ಕಾಸರಗೋಡು ಸ್ವಾಗತಿಸಿ, ದೀಪಾ ರಾವ್ ಕಾರ್ಯಕ್ರಮ ನಿರೂಪಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment