Thursday, July 16, 2009

ನಾಳೆ ಕೆ.ಎಸ್.ಟಿ.ಎ. ಧರಣಿ/KSTA Dharna

ಕಾಸರಗೋಡು: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆ.ಎಸ್.ಟಿ.ಎ.) ನೇತೃತ್ವದಲ್ಲಿ ಇದೇ 18ರಂದು ಬೆಳಗ್ಗೆ 10 ಗಂಟೆಗೆ ಡಿ.ಡಿ.ಇ. ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಪದಾಧಿಕಾರಿಗಳು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರ್ಧಯಾಪಕರ ಹುದ್ದೆ ಸಂರಕ್ಷಣೆ ಖಾತರಿಪಡಿಸಬೇಕು, ಮೇನೇಜರುಗಳ ಅಧಿಕಾರ ಕೊನೆಗೊಳಿಸಬೇಕು, ಪಂಚಾಯ್ತಿ ಶಾಲೆಗಳ ಅಧ್ಯಾಪಕರನ್ನೂ ಸಕರ್ಾರಿ ಶಾಲಾ ಅಧ್ಯಾಪಕರಾಗಿ ಪರಿಗಣಿಸಬೇಕು, ಆದಾಯ ರಹಿತ ಶಾಲೆಗಳ ನೇಮಕಾತಿಗೆ ಅಂಗೀಕಾರ ನೀಡಬೇಕು ಮೊದಲಾದ 19 ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲಾಗುವುದು ಎಂದವರು ವಿವರಿಸಿದರು.
ಧರಣಿಯನ್ನು ಸಂಘಟನೆಯ ಉಪಾಧ್ಯಕ್ಷ ಕೆ.ಜಿ.ಬಾಬು ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣನ್ ಮಾಸ್ಟರ್ ಟಿ.ವಿ, ಎಂ. ಬಾಲಕೃಷ್ಣನ್, ಕೆ.ರಾಘವನ್, ಕೆ.ವಿ.ಗೋವಿಂದನ್, ಪಿ.ವಿ.ಶ್ರೀದೇವಿ ಹಾಜರಿದ್ದರು.

ಉಚಿತ ಸಮವಸ್ತ್ರ ವಿತರಣೆ
ಕಾಸರಗೋಡು: ತ್ಯಾಗ ಹಾಗೂ ಸೇವಾ ಮನೋಭಾವಗಳನ್ನು ರೂಪಿಸುವ ಮೂಲಕ ಉತ್ತಮ ಸಮಾಜ ನಿಮರ್ಾಣ ಸಾಧ್ಯ ಎಂದು ಡಾ.ಅನಂತ ಕಾಮತ್ ಅಭಿಪ್ರಾಯಪಟ್ಟರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಎ.ಬಿ.ವಿ.ಪಿ. ರಾಮದಾಸ ನಗರ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಕೃಷ್ಣ ದಾಸ್ ವೈ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲು ಶಾಲಾ ಮೇನೇಜರ್ ಸದಾಶಿವ ಶ್ಯಾನುಭೋಗ್, ಮುಖ್ಯೋಪಾಧ್ಯಾಯ ವೆಂಕಟರಮಣ ಭಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣಯ್ಯ, ಅಧ್ಯಾಪಕರಾದ ನರಸಿಂಹ ಮಯ್ಯ, ಅರವಿಂದ ಎಂ.ಕೆ. ಹಾಜರಿದ್ದರು.
ಘಟಕ ಅಧ್ಯಕ್ಷ ಶ್ರೀನಾಥ್ ಸ್ವಾಗತಿಸಿ, ಅಧ್ಯಾಪಕ ವೇಣುಗೋಪಾಲ ಕೆ. ಕಾರ್ಯಕ್ರಮ ನಿರೂಪಿಸಿದರು.
 

No comments:

Post a Comment