Tuesday, July 14, 2009

ರಿಯಾನ:10 ದಿನದೊಳಗೆ ಪತ್ತೆ ಮಾಡಲು ಹೈಕೋಟರ್ು ಆದೇಶ/RIyana:High Court

ಕಾಸರಗೋಡು: ಇಲ್ಲಿನ ಚೆಂಗಳ ತೈವಳಪ್ಪು ನಿವಾಸಿ ರಿಯಾನ ಎಂಬ ಬಾಲಕಿಯನ್ನು 10 ದಿನದೊಳಗೆ ಪತ್ತೆ ಮಾಡುವಂತೆ ಕೇರಳ ಹೈಕೋಟರ್ು ಆದೇಶ ನೀಡಿದೆ.
ಪತ್ತೆ ಮಾಡಿದ ಆಕೆಯನ್ನು ಕಾಸರಗೋಡು ಜ್ಯೂಡೀಶಿಯಲ್ ಪ್ರಥಮ ದಜರ್ೆ ಮೆಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು ಎಂದು ಹೈಕೋಟರ್ು ವಿಭಾಗೀಯ ಪೀಠ ಕಟ್ಟಪ್ಪಣೆ ಮಾಡಿದೆ.
ಸಕರ್ಾರದ ವಕೀಲ ಪ್ರಕರಣದ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಮಜಾಯಿಷಿ ನೀಡಿದರೂ ನ್ಯಾಯಾಲಯ ತನ್ನ ಅತೃಪ್ತಿ ಪ್ರಕಟಿಸಿ ಈ ಆದೇಶ ನೀಡಿದೆ. ಅಲ್ಲದೆ ಇದೇ 24ರಂದು ರಿಯಾನಳನ್ನು ಹೈಕೋಟರ್ಿನಲ್ಲಿ ಹಾಜರುಪಡಿಸಬೇಕು ಎಂದೂ ಆದೇಶಿಸಿದೆ.
ಜನಪರ ನ್ಯಾಯ ವೇದಿಕೆ ಮತ್ತು ರಿಯಾನಳ ತಾಯಿ ಫೌಸಿಯಾ ಹೈಕೋಟರ್ಿನ ಮೆಟ್ಟಿಲೇರಿ ಹೇಬಿಯಸ್ ಕಾರ್ಪಸ್ ಅಜರ್ಿ ಸಲ್ಲಿಸಿದ್ದರು.
ಕಾಸರಗೋಡಿನ ವಿದ್ಯಾನಗರ ಸಮೀಪದ ನಾಯಮ್ಮಾರ್ಮೂಲೆಯ ಖಾಸಗಿ ಶಾಲೆಯ ವಿದ್ಯಾಥರ್ಿನಿಯಾಗಿದ್ದ ರಿಯಾನ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಳು.


ಕಾಞಂಗಾಡಿನಲ್ಲಿ ಹುಸಿ ಬಾಂಬ್ ಬೆದರಿಕೆ
ಕಾಸರಗೋಡು: ಕಾಞಂಗಾಡಿನ ನಿತ್ಯಾನಂದ ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆಯಲ್ಲಿ ಬಾಂಬ್ ಬೆದರಿಕೆ ಒಡ್ಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸಂಸ್ಥೆಯ ಪ್ರಾಂಶುಪಾಲರಿಗೆ ಅನಾಮಿಕ ವ್ಯಕ್ತಿ ಎರಡು ಬಾರಿ ಕರೆ ಮಾಡಿ ಬಾಂಬ್ ಬೆದರಿಕೆ ಒಡ್ಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿವೈಎಸ್ಪಿ ಹಬೀಬ್ ರಹಮಾನ್, ಸಿ.ಐ. ಕೆ.ಅಶ್ರಫ್ ವಿದ್ಯಾಥರ್ಿಗಳು ಮತ್ತು ಅಧ್ಯಾಪಕರನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು. ನಗರದಿಂದ ಶ್ವಾನದಳ ಪರಿಶೀಲನೆ ನಡೆಸಿದಾಗ ಹುಸಿ ಬೆದರಿಕೆ ಎಂಬುದು ಖಾತರಿಯಾಯಿತು.
  
 
ಸಮುದ್ರದಲ್ಲಿ ನಾಪತ್ತೆಯಾದ ಬಾಲಕನ ಶವ ಪತ್ತೆ
 
ಕಾಸರಗೋಡು: ಕಾಞಂಗಾಡು ಬಳಿ ಮುಟ್ಟತ್ತಲ ಕೋತ್ತಿಂಗಾಲ್ ಅಳಿವೆ ಪ್ರದೇಶದಲ್ಲಿ ಸಮುದ್ರಕ್ಕೆ ಆಟವಾಡಲು ಇಳಿದು ಭಾನುವಾರ ನಾಪತ್ತೆಯಾಗಿದ್ದ ಬಾಲಕನ ಶವ ಮಂಗಳವಾರ ಮುಂಜಾನೆ  ಪತ್ತೆಯಾಗಿದೆ.
ಮುಟ್ಟತ್ತಲ ನಿವಾಸಿ ಆಲಿ ಅವರ ಪುತ್ರ ಮುಹಮ್ಮದ್ ಕುಞ್ಞಿ(15) ಪತ್ತೆಯಾದ ಬಾಲಕ. ಈತ ತನ್ನ ಸಹೋದರನ ಜತೆಯಲ್ಲಿ  ಆಟವಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದನು.
ಮೀನುಗಾರಿಕಾ ಇಲಾಖೆಯ ಬೋಟ್, ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು.

ಬಾವಿಗೆ ಬಿದ್ದು ಯುವಕ ಸಾವು
ಮಂಜೇಶ್ವರ: ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ  ಘಟನೆ ಮಂಗಳವಾರ ಬೆಳಗ್ಗೆ ಪೆಮರ್ುದೆ ಸಮೀಪ ಮುನ್ನೂರಿನಲ್ಲಿ  ನಡೆದಿದೆ.
ಮುನ್ನೂರಿನ ಮಂಜಪ್ಪ ಮೂಲ್ಯರ ಪುತ್ರ ಸತೀಶ್ ಕುಲಾಲ್(30) ಸಾವನ್ನಪ್ಪಿದ ವ್ಯಕ್ತಿ. ನೀರು ಸೇದುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಕೂಲಿ ಕಾಮರ್ಿಕರಾಗಿದ್ದರು. ವಿಷಯ ತಿಳಿದು ನಗರದಿಂದ ಬಂದ ಅಗ್ನಿಶಾಮಕ ದಳ ಶವವನ್ನು ಮೇಲಕ್ಕೆತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ.

ಅಪರಿಚಿತ ವ್ಯಕ್ತಿಗೆ ರೈಲು ಡಿಕ್ಕಿ
ಕಾಸರಗೋಡು: ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡ ಅಪರಿಚಿತ ವ್ಯಕ್ತಿಯೊಬ್ಬರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಕುಂಬಳೆ ಸಮೀಪದ ಶಿರಿಯ ದೇವಸ್ಥಾನದ ಬಳಿಯ ರೈಲ್ವೇ ಹಳಿಯಲ್ಲಿ ರಕ್ತಸಿಕ್ತ ದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ಯಾಂಟ್ ಮತ್ತು ಅಂಗಿ ಧರಿಸಿದ್ದು, 45 ವರ್ಷ ಅಂದಾಜಿಸಲಾಗಿದೆ.

ಕಾಡುಹಂದಿ ಆಕ್ರಮಿಸಿ ಇಬ್ಬರು ಆಸ್ಪತ್ರೆಗೆ
ಕಾಸರಗೋಡು: ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಕಾಡುಹಂದಿ ಆಕ್ರಮಿಸಿದ ಪರಿಣಾಮ ಸವಾರರು ಗಾಯಗೊಂಡ ಘಟನೆ ಬೋವಿಕ್ಕಾನ ಬಳಿ ಸೋಮವಾರ ರಾತ್ರಿ ನಡೆದಿದೆ.
ಬೋವಿಕ್ಕಾನ ಸಮೀಪದ ಕಾಟಿಪಳ್ಳ ನಿವಾಸಿಗಳಾದ ಕೆ.ಅಜೀರ್ ಮತ್ತು ಕೆ.ರಫೀಕ್ ಗಾಯಗೊಂಡವರು. ಬೈಕ್ನ ಹಿಂಭಾಗದಿಂದ  ಹಂದಿ ಆಕ್ರಮಿಸಿದೆ ಎಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು ತಿಳಿಸಿದ್ದಾರೆ.

 
ಬೈಕ್ಗಳಿಗೆ ಕಾರು ಡಿಕ್ಕಿ: ನಾಲ್ವರು ಆಸ್ಪತ್ರೆಗೆ
 
ಕಾಸರಗೋಡು: ಕ್ವಾಲಿಸ್ ಕಾರು ಬೈಕುಗಳಿಗೆ ಡಿಕ್ಕಿ ಹೊಡೆದು ನರ್ಸರಿ ವಿದ್ಯಾಥರ್ಿ ಸಹಿತ ನಾಲ್ವರು ಗಾಯಗೊಂಡ ಘಟನೆ ವಿದ್ಯಾನಗರದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಆಲಂಪಾಡಿ ಎಮರ್ಾಳ ನಿವಾಸಿ ಮೊಯ್ದೀನ್, ನರ್ಸರಿ ವಿದ್ಯಾಥರ್ಿಯಾಗಿರುವ ಇವರ ಪುತ್ರ ಮನ್ಸೂರ್, ಚರ್ಲಡ್ಕದ ನಾರಾಯಣ, ಚೇನೆಕ್ಕೋಡಿನ ಚಂದ್ರಶೇಖರ ಗಾಯಗೊಂಡವರು.
ನಾರಾಯಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
 
ನಾಳೆಯಿಂದ ಸ್ಕೌಟ್ ಅಧ್ಯಾಪಕರಿಗೆ ತರಬೇತಿ
ಕಾಸರಗೋಡು: ಸ್ಕೌಟ್ ವಿಭಾಗದಲ್ಲಿ ಬೇಸಿಕ್ ಕೋಸರ್ಿನ ಅಂಗವಾಗಿ 16 ಮತ್ತು 17ರಂದು ಕಾಸರಗೋಡು ಸ್ಕೌಟ್ ಭವನದಲ್ಲಿ ತರಬೇತಿ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಘಟಕಗಳು ಇಲ್ಲದ ಹಾಗೂ ನಿಷ್ಕ್ರಿಯವಾಗಿರುವ ಶಾಲೆಗಳ ಅಧ್ಯಾಪಕರು ಭಾಗವಹಿಸಬೇಕು ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ತಿಳಿಸಿದ್ದಾರೆ.
 
 
ಮಂಜೇಶ್ವರ ಕಾಲೇಜನಲ್ಲಿ ಸೀಟು 
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಕರ್ಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ.ಎ., ಟಿ.ಟಿ.ಎಂ. ಕೋಸರ್ುಗಳಿಗೆ ಪರಿಶಿಷ್ಟ ವಿಭಾಗದ ಸೀಟು ತೆರವಾಗಿದೆ. ಅರ್ಹತೆ ಇರುವ ವಿದ್ಯಾಥರ್ಿಗಳು ಇದೇ 17ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.
 

No comments:

Post a Comment