ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಸುವರ್ಣ ಸಂಭ್ರಮದ ಪ್ರಯುಕ್ತ ನಿರ್ಮಿಸುವ ಗ್ರಂಥಾಲಯ ಕಟ್ಟಡ, ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂ.ಗಳ ಯೋಜನೆಗೆ ಅಂಗೀಕಾರ ಲಭಿಸಿದೆ
ಎಂದು ಶಾಸಕ ಸಿ.ಟಿ. ಅಹಮ್ಮದಾಲಿ ತಿಳಿಸಿದ್ದಾರೆ.
ಮಾಲಿನ್ಯ ಸಮಸ್ಯೆ: ಲಾರಿ ತಡೆದ ಸ್ಥಳೀಯರು
ಕಾಸರಗೋಡು: ಇಲ್ಲಿಗೆ ಸಮೀಪದ ಕೇಳುಗುಡ್ಡೆಯಲ್ಲಿ ನಗರದ ತ್ಯಾಜ್ಯಗಳನ್ನು ರಾಶಿ ಹಾಕಿರುವ ಪ್ರದೇಶದಿಂದ ಮಲಿನ ನೀರು ರಸ್ತೆ ಮತ್ತು ಸಮೀಪದ ಮನೆಗಳ ವಠಾರಗಳಲ್ಲಿ ಹರಿಯುತ್ತಿದ್ದು, ಸ್ಥಳೀಯರು ಇಂದು ತ್ಯಾಜ್ಯ ಹೇರಿಕೊಂಡ ಬಂದ ಲಾರಿಗಳನ್ನು ತಡೆದ ಘಟನೆ ನಡೆದಿದೆ.
ನಗರ ಸಭಾ ಸದಸ್ಯನ ಬಂಧನ
ಕಾಸರಗೋಡು: ಇಲ್ಲಿನ ನಗರ ಸಭಾ ಸದಸ್ಯ ಹಾಗೂ ನ್ಯಾಶನಲ್ ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ ಮಮ್ಮು ಚಾಲ ಎಂಬವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
2006 ಅ.30ರಂದು ವಿದ್ಯಾನಗರ ಬಳಿ ಹಾರಿಸ್ ಹಾದಿಮ್ ಎಂಬವರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ 5ನೇ ಆರೋಪಿಯಾಗಿರುವ ಮಮ್ಮು ಚಾಲ ಅವರನ್ನು ಬಂಧಿಸುವಂತೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ಆರೋಪಿ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
ಇನ್ನೊಂದು ಪ್ರಕರಣದಲ್ಲಿಯೂ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಬಿಗ್ಬಜಾರ್: ಅನುಮತಿ ನೀಡದ ನಗರಸಭೆ
ಕಾಸರಗೋಡು: ದೇಶದ ಪ್ರಮುಖ ಸುಪರ್ ಮಾರ್ಕೆಟ್ ಕಂಪೆನಿಯಾಗಿರುವ ಬಿಗ್ಬಜಾರ್ ತನ್ನ ಶಾಖೆಯನ್ನು ಕಾಸರಗೋಡಿನಲ್ಲಿ ತೆರೆಯಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನಗರಸಭೆ ತಿರಸ್ಕರಿಸಿದೆ.
ಹೊಸ ಬಸ್ಸು ನಿಲ್ದಾಣದ ಬಳಿ 30,000 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಸುಪರ್ ಮಾರ್ಕೆಟ್ ಕಾರ್ಯನಿರ್ವಹಿಸಲು ಸಿದ್ಧತೆಗಳು ನಡೆಯುತ್ತಿದ್ದು, ನಗರದ ವ್ಯಾಪಾರಿಗಳ ಮನವಿಯನ್ನು ಪರಿಗಣಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ತಿಳಿಸಿದ್ದಾರೆ.
ಪನ್ನಿಪ್ಪಾರೆ ಲೈಂಗಿಕ ದಂಧೆ: ಮಧ್ಯವರ್ತಿ ಸೆರೆ
ಕಾಸರಗೋಡು: ಪನ್ನಿಪ್ಪಾರೆ ಲೈಂಗಿಕ ದಂಧೆಯ ಮಧ್ಯವರ್ತಿ ವಾಹಿದಾ ಎಂಬಾಕೆಯನ್ನು ಶುಕ್ರವಾರ ಸಂಜೆ ನಗರ ಪೊಲೀಸರು ಬಂಧಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಗೆ ಸಮೀಪದ ಪನ್ನಿಪ್ಪಾರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ 16ರ ಹರೆಯದ ಬಾಲಕಿಯನ್ನು ಕಳೆದ ಎರಡೂವರೆ ವರ್ಷಗಳ ವರೆಗೆ ವಾಹಿದಾ ಮತ್ತು ಕೆಲವು ಮಹಿಳೆಯರು ದಂಧೆಯಲ್ಲಿ ಬಳಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ಮೌನವಾದ ಈ ಪ್ರಕರಣದ ಕೆಲವು ಆರೋಪಿಗಳನ್ನು ಪಾರು ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದ ಬೆನ್ನಿಗೆ ಮಧ್ಯವರ್ತಿ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.
ಬಾವಿ ಕುಸಿತ: ಸಾವು
ಕಾಸರಗೋಡು: ಪಯ್ಯನ್ನೂರು ಸಮೀಪ ಚೆರುಪುಳ ತಿಮಿರಿ ಎಂಬಲ್ಲಿ ಬಾವಿ ಕುಸಿದು ಬಿದ್ದು ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯ ಕುಞ್ಞಿರಾಮನ್(51) ಎಂಬವರು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಗ್ನಿಶಾಮಕ ದಳ ಶವವನ್ನು ಮೇಲಕ್ಕೆತ್ತಿದೆ.
ಯುವಕನ ಅಪಹರಣ: ದೂರು
ಕಾಸರಗೋಡು: ನಾಲ್ವರನ್ನೊಳಗೊಂಡ ತಂಡ ಯುವಕನನ್ನು ಅಪಹರಿಸಿದೆ ಎಂದು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕುಂಬಳೆಯ ಸರ್ಫ್ರಾಸ್ ಯಾನೆ ಮುನ್ನಾ(32) ಅಪಹರಣಕ್ಕೆ ಒಳಗಾದ ಯುವಕ.
ಇತ್ತೀಚೆಗೆ ಶಿರಿಯ ಬಳಿ ನಿಂತಿದ್ದ ಈತನನ್ನು ಪೊಲೀಸ್ ವೇಷಧಾರಿಗಳ ಸಹಿತ ಬಂದ ತಂಡ ಟಾಟಾ ಸುಮೋ ಕಾರಿನೊಳಗೆ ಬಲವಂತವಾಗಿ ಕೂಡಿಹಾಕಿ ಪರಾರಿಯಾಗಿದೆ.
ಪಾಲಿಟೆಕ್ನಿಕ್ಗೆ ಬಾಂಬ್ ಬೆದರಿಕೆ
ಆರೋಪಿ ಸೆರೆ
ಕಾಸರಗೋಡು: ಇತ್ತೀಚೆಗೆ ಕಾಞಂಗಾಡು ಪಾಲಿಟೆಕ್ನಿಕ್ಗೆ ಬಾಂಬ್ ಬೆದರಿಕೆ ಒಡ್ಡಿದ ಆರೋಪಿಯನ್ನು ಪೊಲೀಸರು ಬಂಧಿದ್ದಾರೆ.
ಇದೇ ಸಂಸ್ಥೆಯ ಮೆಕಾನಿಕ್ ದ್ವಿತೀಯ ವರ್ಷದ ವಿದ್ಯಾಥರ್ಿ ಚೆರ್ಕಳದ ಬಾಲನಡ್ಕ ನಿವಾಸಿ ಶ್ಯಾಮ್ರವಿ ಎಂಬಾತನೇ ಆರೋಪಿ.
ಈತ ಇದೇ 13ರಂದು ಕಾಞಂಗಾಡು ಪೆಟ್ರೋಲ್ ಪಂಪ್ ಬಳಿಯ ನಾಣ್ಯ ಬೂತ್ನಿಂದ ಕಾಲೇಜಿಗೆ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
No comments:
Post a Comment