ಕಾಸರಗೋಡು: ನೀಲೇಶ್ವರದಿಂದ ತೈಕಡಪ್ಪುರಕ್ಕೆ ಹೋಗುತ್ತಿದ್ದ ಬಸ್ಸು ಉರುಳಿ ಬಿದ್ದು 20 ಮಂದಿ ಗಾಯಗೊಂಡ ಘಟನೆ ಬುಧವಾರ ಸಂಜೆ ನೀಲೇಶ್ವರ ಬಳಿ ಕಣಿಚ್ಚಿರ ಎಂಬಲ್ಲಿ ನಡೆದಿದೆ.
ಜೀಪಿಗೆ ಸರಿದು ಹೋಗುತ್ತಿದ್ದಂತೆ ಬಸ್ಸು ಉರುಳಿದೆ. ಗಾಯಾಳುಗಳನ್ನು ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಗೆ ಕಿರುಕುಳ: ಯುವಕನ ಸೆರೆ
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ 8 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಯುವಕನನ್ನು ನಗರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಮೊಗ್ರಾಲ್ ಪುತ್ತೂರು ನಿವಾಸಿ ಆಟೋ ಚಾಲಕ ಆರೋಪಿಯಾಗಿದ್ದು, ಈತನನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮತ್ತು ಬಾಲಕಿಯ ಸಂಬಂಧಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಆಸ್ಪತ್ರೆಗೆ ರೋಗಿಯನ್ನು ಭೇಟಿ ಮಾಡುವ ಸೋಗಿನಲ್ಲಿ ಬಂದು ಮಂಗಳವಾರ ಬಾಲಕಿಗೆ ಕಿರುಕುಳ ನೀಡಿದ್ದು, ಇಂದು ಅದೇ ರೀತಿ ಬಂದ ಈತನ ಕೀಟಲೆಯನ್ನು ಸಹಿಸದ ಬಾಲಕಿ ಸಂಬಂಧಿಕರಿಗೆ ತಿಳಿಸಿದ್ದಳು.
ರಾಷ್ಟ್ರೀಯ ಹೆದ್ದಾರಿ ಕೆಟ್ಟುಹೋದ ರಾಷ್ಟ್ರೀಯ ಹೆದ್ದಾರಿ
ಮುಸ್ಲಿಂ ಯೂತ್ ಲೀಗ್ ರಸ್ತೆ ತಡೆ
ಮಂಜೇಶ್ವರ: ಉಪ್ಪಳದಿಂದ ಹೊಸಂಗಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಕೆಟ್ಟುಹೋಗಿದ್ದು, ಸಂಬಂಧಪಟ್ಟವರ ನಿರ್ಲಕ್ಷ್ಯವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸುಗಳ ವರೆಗೆ ರಸ್ತೆ ತಡೆ ನಡೆಸಿದರು.
ಉಪ್ಪಳ ಗೇಟ್ ಬಳಿ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಚೆರ್ಕಳ ಅಬ್ದುಲ್ಲ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ಉಮ್ಮರ್ ಅಪೋಲೊ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಲೀಗ್ ಉಪಾಧ್ಯಕ್ಷ ಕಲ್ಲಡ ಮಾಹಿನ್, ಕಾರ್ಯದಶರ್ಿ ಕೆ.ಕೆ.ಅಬ್ದುಲ್ಲ ಕುಞ್ಞಿ ಚೆರ್ಕಳ, ಉಪಾಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಜಿಲ್ಲಾ ಕಾರ್ಯದಶರ್ಿ ಯೂಸೆಫ್ ಉಳುವಾರು, ಹನೀಫ್, ಎಂ.ಕೆ.ಆಲಿ ಮಾಸ್ಟರ್, ಬಿ.ಎಚ್.ಅಬ್ದುಲ್ಲ ಕುಞ್ಞಿ, ಬಿ.ಎಂ. ಮಾಹಿನ್, ಹಮೀದ್ ಕಲ್ಪನ, ಅಶ್ರಫ್ ಸಿಟಿಸನ್, ಎಂ.ಎಂ.ಇಬ್ರಾಹಿಂ, ಕೆ.ವಿ.ಯೂಸೆಫ್ ಹಾಜರಿದ್ದರು.
No comments:
Post a Comment