Wednesday, July 15, 2009

ಚಂದನದಲ್ಲಿ ಕಾಸರಗೋಡು ಚಿನ್ನಾ/Interview Kasaragod Chinna

ಕಾಸರಗೋಡು:  ಬೆಂಗಳೂರು ದೂರದರ್ಶನ ಪ್ರಸ್ತುತಪಡಿಸುವ `ಸಂಚಯ' ಕಾರ್ಯಕ್ರಮದಲ್ಲಿ ರಂಗನಟ, ನಿದರ್ೇಶಕ ಕಾಸರಗೋಡು ಚಿನ್ನಾ ಅವರ ಸಂದರ್ಶನ ಇದೇ 18ರಂದು ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ.
ಇದೇ ಕಾರ್ಯಕ್ರಮ ಮರುದಿನ ಬೆಳಗ್ಗೆ 10 ಗಂಟೆಗೆ ಮರುಪ್ರಸಾರವಾಗಲಿದೆ. ಮೈಸೂರಿನ ಖ್ಯಾತ ಬರಹಗಾರ ಹಾಗೂ ಅಂಕಣಕಾರ ರವೀಂದ್ರ ಜೋಶಿ ಸಂದರ್ಶನ ನಡೆಸಿದ್ದಾರೆ.
 
 
ಬಿ.ಜೆ.ಪಿ. ಚೆಂಗಳ ಪಂಚಾಯ್ತಿ ಸಮಿತಿ ಸಭೆ
ಕಾಸರಗೋಡು: ಬಿ.ಜೆ.ಪಿ. ಚೆಂಗಳ ಪಂಚಾಯ್ತಿ ಮಟ್ಟದ ಚುನಾವಣಾ ಅವಲೋಕನಾ ಸಭೆ ಎಡನೀರಿನಲ್ಲಿ ಇತ್ತೀಚೆಗೆ ಜರುಗಿತು.
ಎಡನೀರು ವಿಷ್ಣುಮಂಗಲ ದೇವಸ್ಥಾನದಿಂದ ಚೆಂಬ್ರಪಾಡಿ ದೈವಸ್ಥಾನದ ವರೆಗೆ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತಿದ್ದು, ಶೀಘ್ರದಲ್ಲಿಯೇ ಚರಂಡಿಯನ್ನು ದುರಸ್ತಿಪಡಿಸಬೇಕು ಎಂದು ಸಭೆ ಆಗ್ರಹಿಸಿದೆ.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಗದೀಶ್ ಸಭೆಯನ್ನು ಉದ್ಘಾಟಿಸಿದರು. ಎಂ.ಕೆ.ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಮಂಡಲಾಧ್ಯಕ್ಷ ಎಸ್.ಕುಮಾರ್ ಹಾಜರಿದ್ದರು.
ರವಿಚಂದ್ರ ಕೆಮ್ಮಂಗಯ ಸ್ವಾಗತಿಸಿ, ಮಧುಸೂದನ ಕೆಮ್ಮಂಗಯ ವಂದಿಸಿದರು.


ಸಮಾಲೋಚನಾ ಸಭೆ
ಕಾಸರಗೋಡು: ಇಲ್ಲಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮತ್ತು ಮಂಗಳೂರಿನ ಹೃದಯವಾಹಿನಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಆ.1 ಮತ್ತು 2ರಂದು ಕಾಸರಗೋಡಿನ ಲಲಿತಕಲಾ ಸದನದಲ್ಲಿ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು, ಇದರ ಯಶಸ್ವಿಗೆ ಇದೇ 18ರಂದು ಸಂಜೆ 3.30ಕ್ಕೆ ಸ್ವಾಗತ ಸಮಿತಿ ಸಮಾಲೋಚನಾ ಸಭೆ ನಡೆಯಲಿದೆ.

 

 

No comments:

Post a Comment