Wednesday, July 15, 2009

'ತುಳುವರು ಸಂಘರ್ಷ ಪ್ರಿಯರಲ್ಲ'/Tulu Certificate Cource

ಕಾಸರಗೋಡು: ತುಳುವರು ಸಂಘರ್ಷ ಪ್ರಿಯರಲ್ಲ. ಆದರೆ ತುಳುವರ ಜಗಳ-ಬೈಗುಳ ಕುತೂಹಲಕರವಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಬುಧವಾರ ಇಲ್ಲಿ ವಿಶ್ಲೇಷಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಕೇರಳ ತುಳು ಅಕಾಡೆಮಿ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ ತುಳು ಸಟರ್ಿಫಿಕೆಟ್ ಕೋಸರ್ು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನರ್ಾಟಕದಲ್ಲಿ ತುಳುವಿನ ಬಗ್ಗೆ ಗಮನಾರ್ಹ ಕೆಲಸ ಇದು ವರೆಗೆ ನಡೆದಿಲ್ಲ ಎಂದು ಆರೋಪಿಸಿದ ಅವರು, ಕೇರಳ ತುಳು ಅಕಾಡೆಮಿಯ ಪಾಲಿಗೆ ಇದು(ತುಳು ಭಾಷಾ ಕಲಿಕೆ) ಚರಿತ್ರಾರ್ಹ ಸಾಧನೆ ಎಂದು ಶ್ಲಾಘಿಸಿದರು.
ನಿತ್ಯ ಹರಿದ್ವರ್ಣ ಭಾಷೆ:
ಕರಾವಳಿಯ ಮಣ್ಣು ತುಳು ಧಾಮರ್ಿಕ-ಭಾಷಾ ಸೌಹಾರ್ದತೆಯ ಸೇತುವಾಗಿದೆ. ಯುನೆಸ್ಕೋ ವರದಿಯ ಪ್ರಕಾರ ತುಳು ಕ್ಷೀಣಿಸುತ್ತಿರುವ ಭಾಷೆಯಲ್ಲ. ಅದು
ನಿತ್ಯ ಹರಿದ್ವರ್ಣ ಭಾಷೆಯಾಗಿದೆ ಎಂದೂ ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಆನಂದ್ ಸಿಂಗ್ ಮಾತನಾಡಿ, 5 ಪ್ರಾಚೀನ ಭಾಷೆಗಳಲ್ಲಿ ತುಳು ಒಂದು ಎಂದು ಒತ್ತಿ ಹೇಳಿದರು. ಕಾಸರಗೋಡಿನಿಂದ ಉಡುಪಿ ಜಿಲ್ಲೆಯ ವರೆಗೆ 30 ಲಕ್ಷದಷ್ಟು ಮಂದಿ ತುಳು ಭಾಷೆಯನ್ನಾಡುತ್ತಿದ್ದಾರೆ. ಸಟರ್ಿಫಿಕೆಟ್ ಕೋಸರ್ಿನಿಂದ ಭವಿಷ್ಯದಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಎಂದವರು ನುಡಿದರು.
ಅಕಾಡೆಮಿಯ ಅಧ್ಯಕ್ಷ ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಮಾಧವನ್ ನಂಬ್ಯಾರ್, ತುಳು ಅಕಾಡೆಮಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಗೀತಾ ಸಾಮನಿ ಹಾಜರಿದ್ದರು. ಉಮೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಸ್ವಾಗತಿಸಿ, ಅಕಾಡೆಮಿಯ ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.


 

No comments:

Post a Comment