
ಕಾಸರಗೋಡು: ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ವೇಗದೂತ ಕೆ.ಎಸ್.ಆರ್.ಟಿ.ಸಿ. ಬಸ್ಸು ಮತ್ತು ನೀಲೇಶ್ವರಕ್ಕೆ ಹೋಗುತ್ತಿದ್ದ ಸಾಂಟ್ರೋ ಕಾರು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಇಲ್ಲಿನ ಕಾಞಂಗಾಡು ಸೌತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಪಳ್ಳಿಕ್ಕೆರೆ ಟಿ.ಎಚ್.ಅಬ್ದುಲ್ ರಹಿಮಾನ್ ಅವರ ಪುತ್ರ ಟಿ.ಎಚ್.ಸುಬೈರ್(32), ಆಲಂಪಾಡಿ ರಹಮಾನಿಯ ನಗರದ ಹಸೈನಾರ್ ಅವರ ಪುತ್ರ ಸಿ.ಎಚ್.ಹಾರಿಸ್(26), ತೃಶೂರು ನಿವಾಸಿಗಳಾದ ಸಯೀದ್ ಅವರ ಪುತ್ರ ಮುಹಮ್ಮದಾಲಿ(40), ಸಲೀಂ(42) ಎಂದು ಇವರನ್ನು ಗುರುತಿಸಲಾಗಿದೆ.ಘಟನೆಯಲ್ಲಿ ಕಣ್ಣೂರು ನಿವಾಸಿ, ಪತ್ರಕರ್ತ ಪಿ.ಸಜಿತ್ ಕುಮಾರ್, ಬಸ್ಸಿನ ಚಾಲಕ ಕೃಷ್ಣ ಕುಮಾರ್ ಮಧೂರು, ಬಂದಡ್ಕ ಪಡುಪ್ ನಿವಾಸಿ ಪಾಪಚ್ಚನ್, ಇವರ ಪತ್ನಿ ಮೇರಿ, ಪುತ್ರಿ ಸಿಲ್ಬಿ ಗಾಯಗೊಂಡಿದ್ದು, ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ರಾತ್ರಿ 8.45ರ ಹೊತ್ತಿಗೆ ನಡೆದ ಈ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
No comments:
Post a Comment