ಜೀಪು ಮತ್ತು ಬೈಕ್ ಡಿಕ್ಕಿ: ಯುವಕ ಸಾವು
ಕಾಸರಗೋಡು: ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ಜೀಪು ಮತ್ತು ಬೈಕ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ 11 ಗಂಟೆಗೆ ನಡೆದಿದೆ.ಉಪ್ಪಳ ಕೈಕಂಬ ನಿವಾಸಿ ರಿಸ್ವಾನ್(35) ಸಾವನ್ನಪ್ಪಿದ ವ್ಯಕ್ತಿ. ಈತನ ತಂದೆ ಹುಸೈನ್ ಅವರೂ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಜತೆ ಪುತ್ರ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಬಸ್ಸು ತೋಡಿಗೆ ಬಿದ್ದು ಮೂರು ಮಂದಿ ಸಾವು
ಕಾಸರಗೋಡು: ಕೊಲ್ಲಂ ಜಿಲ್ಲೆಯ ಪುನಲೂರು ಸಮೀಪದ ಮಣಿಯಾರಿನಲ್ಲಿ ಖಾಸಗಿ ಬಸ್ಸು ತೋಡಿಗೆ ಬಿದ್ದು ಮೂರು ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.ಮಣಿಯಾರ್ ನಿವಾಸಿಗಳಾದ ಭವಾನಿ, ಚೆಲ್ಲಮ್ಮ, ಜೋಯಿ ಸಾವನ್ನಪ್ಪಿದವರು.
ನಿಧನ
ಮುಹಮ್ಮದ್ ಕುಞ್ಞಿ
ಕಾಸರಗೋಡು: ಇಲ್ಲಿನ ಐ.ಎನ್.ಎಲ್. ನೆಲ್ಲಿಕುಂಜೆ ಶಾಖೆಯ ಉಪಾಧ್ಯಕ್ಷ ನೆಲ್ಲಿಕುಂಜೆ ನಿವಾಸಿ ಮುಹಮ್ಮದ್ ಕುಞ್ಞಿ(66) ಶುಕ್ರವಾರ ನಿಧನರಾದರು.ಪತ್ನಿ ಜಮೀಲಾ ಮತ್ತು 9 ಮಕ್ಕಳು ಇದ್ದಾರೆ.
Saturday, July 4, 2009
Subscribe to:
Post Comments (Atom)
No comments:
Post a Comment