ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಇದೇ 24 ಮತ್ತು 25ರಂದು ಜಿಲ್ಲಾ ಕನ್ನಡ ಯುವಜನೋತ್ಸವ ಹಾಗೂ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ದೈಗೋಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
24ರಂದು ಬೆಳಿಗ್ಗೆ 9ಕ್ಕೆ ನಡೆಯುವ ಕನ್ನಡ ಯುವಜನೋತ್ಸವವನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಭಾಕರ ಚೌಟ ಉದ್ಘಾಟಿಸುವರು. ವರ್ಕಾಡಿ ಪಂಚಾಯಿತಿ ಅಧ್ಯಕ್ಷ ಪಿ.ಬಿ.ಅಬೂಬಕ್ಕರ್ ಪಾತೂರು ಅಧ್ಯಕ್ಷತೆ ವಹಿಸುವರು. ಕಣಕೂರು ತಿರುಮಲೇಶ್ವರ ಭಟ್ ರಾಷ್ಟ್ರಧ್ವಜವನ್ನು ಮತ್ತು ಶಂಕರ ಮೋಹನ ಪೂಂಜ ಕನ್ನಡ ಧ್ವಜಾರೋಹಣ ನೆರವೇರಿಸುವರು.
25ರಂದು ಬೆಳಿಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಉದ್ಘಾಟಿಸುವರು. ಪ್ರೊ.ಎಂ.ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಚ್.ಕುಞ್ಞಂಬು ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಗಳಾ ನಾಯಕ್ ಸ್ಮರಣ ಸಂಚಿಕೆ, ಹರಿಕೃಷ್ಣ ಪುನರೂರು ನೂತನ ಕೃತಿಗಳನ್ನು ಬಿಡುಗಡೆ ಮಾಡುವರು. ಕಳೆದ ಜಿಲ್ಲಾ ಸಮ್ಮೇಳನದ ಅಧ್ಯಕ್ಷ ವಿದ್ವಾನ್ ಪೆರ್ಲ ಕೃಷ್ಣ ಭಟ್, ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ, ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸುವರು.
ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಕೆ.ಚಿನ್ನಪ್ಪ ಗೌಡ ಸಮಾರೋಪ ಭಾಷಣ ಮಾಡುವರು. ಡಿ.ಕೆ.ಚೌಟ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ ಬಿ.ಜಿ.ಈಶ್ವರ ಭಟ್, ವಿದ್ವಾನ್ ಬಾಬು ರೈ, ಗಣಪತಿ ಭಟ್, ಎಂ.ವಿ.ಬಳ್ಳುಳ್ಳಾಯ, ಬಾಬೂಜಿ ಭಟ್, ತಿಲಕನಾಥ ಮಂಜೇಶ್ವರ, ಶಿವಧ್ವಜ್, ವಿಶ್ವವಿನೋದ ಬನಾರಿ, ಶಶಿಕಲಾ ಟೀಚರ್, ಪೂವಣಿ ಶೆಟ್ಟಿ ಪಾವಳ, ಇಸ್ಮಾಯಿಲ್ ಸೇನ್ಯ, ಉದಯೋನ್ಮುಖ ಕಾದಂಬರಿಕಾರ ಅರುಣಕುಮಾರ ಪಳ್ಳತ್ತಡ್ಕರನ್ನು ಸನ್ಮಾನಿಸಲಾಗುವುದು.
ಪ್ರಜಾವಾಣಿ: ೧೫/೦೭/ ೨೦೧೦
ವರದಿ : ಶಾಂತಾರಾಮ್
No comments:
Post a Comment