|

|
ಕಾಸರಗೋಡು: ಇಲ್ಲಿನ ಚೆಮ್ನಾಡು ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ಇಬ್ಬರು ವಿದ್ಯಾಥರ್ಿಗಳು ಕೆರೆಗೆ ಬಿದ್ದು ಸಾವನ್ನಪ್ಪಿಧ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ತೆರುವತ್ ಸಿರಾಮಿಕ್ಸ್ ರಸ್ತೆ ಬಳಿಯ ನಿರ್ಮಲಾಕ್ಷ ಎಂಬವರ ಪುತ್ರ ಜನೀಶ್ಚಂದ್ರನ್(15) ಮತ್ತು ಮಧೂರು ಬಟ್ಟಂಪಾರೆಯ ಅಪ್ಪಕುಞ್ಞಿಯ ಪುತ್ರ ರತೀಶ್(15) ಮೃತಪಟ್ಟವರು.
ಶಾಲೆಯಲ್ಲಿ ಓಣಂ ಕಾರ್ಯಕ್ರಮ ನಡೆಯುತ್ತಿರುವ ವಿರಾಮದ ವೇಳೆ ಇವರಿಬ್ಬರೂ ಸೈಕಲ್ನಲ್ಲಿ ಸವಾರಿ ಹೊರಟಿದ್ದರು. ಚೆಮ್ನಾಡಿನ ರಸ್ತೆ ಬಳಿಯಿದ್ದ ಖಾಸಗಿ ಕೆರೆಗೆ ಸೈಕಲ್ ಸವಾರಿ ಮಾಡುತ್ತಾ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ವಿದ್ಯಾಥರ್ಿಗಳ ಗೆಳೆಯರು ತಿಳಿಸಿದ್ದಾರೆ. ಸೈಕಲ್ನಲ್ಲಿ ವಿವಿಧ ಬಗೆಯ ಆಟವಾಡುತ್ತಾ ಕೆರೆಗೆ ಬೀಳುತ್ತಿದ್ದರು. ಈಜು ಗೊತ್ತಿದ್ದ ಅವರು ಸತ್ತು ನೀರಿನ ಮೇಲೆ ತೇಲಿದಾಗಲೇ ಗೆಳೆಯರಿಗೆ ಸಾವನ್ನಪ್ಪಿರುವುದು ತಿಳಿದುಬಂದು ಬೊಬ್ಬಿಟ್ಟರು. ಇದನ್ನು ಕೇಳಿ ಬಂದ ಜನರು ಶವಗಳನ್ನು ಮೇಲೆತ್ತಿದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಸರಗೋಡಿನ ಹೊಸ ಬಸ್ಸುನಿಲ್ದಾಣದ ವಠಾರದಲ್ಲಿ ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಧರಣಿಯನ್ನು ಪರಿಷತ್ತಿನ ರಾಜ್ಯ ಕೋಶಾಧಿಕಾರಿ ಅಶೋಕ್ ಬಾಡೂರು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು: ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕು ಎಂದು ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಕೋಶಾಧಿಕಾರಿ ಅಶೋಕ್ ಬಾಡೂರು ಆಗ್ರಹಿಸಿದ್ದಾರೆ.
ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಗರದ ಹೊಸ ಬಸ್ಸುನಿಲ್ದಾಣದ ವಠಾರದಲ್ಲಿ ಜರುಗಿದ ಜಿಲ್ಲಾ ಧರಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಅಧ್ಯಾಪಕರು ಮತ್ತು ಸಕರ್ಾರಿ ನೌಕರರಿಗೆ 2007 ಜುಲೈಯಿಂದ ಲಭಿಸಬೇಕಿದ್ದ ವೇತನ ಪರಿಷ್ಕರಣೆಯ ಬಗ್ಗೆ ಸಕರ್ಾರ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಮೌನ ವಹಿಸಿದೆ ಎಂದೂ ಅವರು ಆರೋಪಿಸಿದರು.
ಎನ್.ಟಿ.ಯು. ಜಿಲ್ಲಾಧ್ಯಕ್ಷ ಬಿ.ಭಾಸ್ಕರ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಜಿ.ಒ. ಸಂಘದ ಕೇರಳ ರಾಜ್ಯ ಉಪಾಧ್ಯಕ್ಷ ಭಾಸ್ಕರ, ಈಶ್ವರ ನಾಕ್, ಸೀತಾರಾಮ ರಾವ್, ನರಸಿಂಹ ಮಯ್ಯ, ವೇಣುಗೋಪಾಲ ಕೆ, ಚಂದ್ರಹಾಸ ಸಿ, ಪ್ರಭಾಶಂಕರ ಎ, ಅರವಿಂದ ವೈ, ಪ್ರೇಮಲತಾ ಕೆ, ರೇವತಿ ಟೀಚರ್, ಶ್ಯಾಮಲ ಕೆ, ಅಶೋಕ ಅರಳಿತ್ತಾಯ, ಶಿವಶಂಕರ ಭಟ್, ಶ್ರೀಧರ ರಾವ್, ಅರವಿಂದ ಭಂಡಾರಿ, ನಾರಾಯಣ ಎ, ಗೋಪಾಲಕೃಷ್ಣ ಪಿ, ಅರವಿಂದ ಎಂ.ಕೆ, ವೆಂಕಪ್ಪ ಶೆಟ್ಟಿ ಇದ್ದರು.
ಕೈಲಾಸಮೂತರ್ಿ ಸ್ವಾಗತಿಸಿ, ವೇಣುಗೋಪಾಲ ವಂದಿಸಿದರು.
ಮಂಜೇಶ್ವರ: ಮಂಜೇಶ್ವರದಿಂದ ಉಪ್ಪಳ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿ.ಪಿ.ಐ. ಬಂಗ್ರ ಮಂಜೇಶ್ವರ ಶಾಖೆಯ ಸಮ್ಮೇಳನ ಆಗ್ರಹಿಸಿದೆ.
ಹೊಸಂಗಡಿ ಪೇಟೆಯ ಸಮಗ್ರ ಅಭಿವೃದ್ಧಿಗೆ ಮಲಬಾರ್ ಪ್ಯಾಕೇಜ್ನಲ್ಲಿ ಸೇರ್ಪಡೆಗೊಳಿಸಬೇಕು, ಉಪ್ಪಳ ಹೊಳೆಗೆ ಮಾಲಿನ್ಯ ಸುರಿಯುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವ ಪ್ರತ್ಯೇಕ ಯೋಜನೆಗೆ ಚಾಲನೆ ನೀಡಬೇಕು, ಬಾಕಿ ಉಳಿದಿರುವ ಪಿಂಚಣಿಯನ್ನು ಶೀಘ್ರದಲ್ಲಿಯೇ ಒದಗಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ.
ಮಂಡಲ ನಿವರ್ಾಹಕ ಸಮಿತಿ ಸದಸ್ಯ ಸುಧಾನಂದ ಸಮ್ಮೇಳನವನ್ನು ಉದ್ಘಾಟಿಸಿದರು. ಎ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯ ಬಿ.ಎಂ.ಕೇಶವ ಧ್ವಜಾರೋಹಣ ಮಾಡಿದರು. ಯತೀಶ್ ಮತ್ತು ಶ್ರೀಲತಾ ಠರಾವು ಮಂಡಿಸಿದರು.
ಜಿಲ್ಲಾ ನಿವರ್ಾಹಕ ಸಮಿತಿ ಸದಸ್ಯ ಬಿ.ವಿ.ರಾಜನ್, ಕಾರ್ಯದಶರ್ಿ ಬಿ.ಎಂ.ಯತೀಶ್, ಕಬೀರ್, ನಾರಾಯಣಿ, ಭಾರತಿ, ನವೀನ, ರತೀಶ್, ಕೇಶವ, ಗಂಗಾಧರ ಹಾಜರಿದ್ದರು.
ನೂತನ ಕಾರ್ಯದಶರ್ಿಯಾಗಿ ಬಿ.ಎಂ.ಯತೀಶ್, ಜತೆ ಕಾರ್ಯದಶರ್ಿಯಾಗಿ ರತೀಶ್ ಆಯ್ಕೆಯಾದರು.
ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಸಮಾರೋಪ ಸಮಾರಂಭದಲ್ಲಿ ಮಲಬಾರ್ ದೇವಸ್ವ ಮಂಡಳಿಯ ಸದಸ್ಯ ಎಂ.ದಾಸಪ್ಪ ಶೆಟ್ಟಿ ಮಾತನಾಡಿದರು.
ಕಾಸರಗೋಡು: ಜನಪದ ಸಂಸ್ಕೃತಿ ಅಳಿದರೆ ವಿಶ್ವಕ್ಕೆ ಮಾರಕ ಎಂದು ಕೇರಳ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ.ಮಾರಾರ್ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.
ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಬಹುತೇಕ ಕಲೆಗಳು ತುಳುನಾಡಿನ ಕೊಡುಗೆಯಾಗಿದೆ ಎಂದೂ ಅವರು ವಿಶ್ಲೇಷಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯ ರಾಜೇಶ್ ಆಳ್ವ, ಫೋಕ್ಲ್ಯಾಂಡಿನ ಅಧ್ಯಕ್ಷ ಡಾ.ವಿ.ಜಯರಾಜನ್, ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಡಾ.ವಿದ್ಯಾಮೋಹನ್ದಾಸ್ ರೈ, ತುಳುಕೂಟದ ಕಾರ್ಯದಶರ್ಿ ಬಿ.ಪಿ.ಶೇಣಿ, ರಘುರಾಮ ಆಳ್ವ ಪಳ್ಳತ್ತಡ್ಕ ಹಾಜರಿದ್ದರು. ಜಿ.ಶಂಕರನಾರಾಯಣ ಭಟ್ಟರನ್ನು ಸನ್ಮಾನಿಸಲಾಯಿತು.
ಬಳಿಕ ಆಟಿಕಳೆಂಜ, ಸೋಣ ಜೋಗಿ, ಕನ್ಯಾಪು, ಮಾದಿರ ಮೊದಲಾದ ತುಳು ಜನಪದ ಕುಣಿತದ ಪ್ರದರ್ಶನ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತುಳು ಅಕಾಡೆಮಿಯ ಸದಸ್ಯ ಸುಧಾಕರ ಮಾಸ್ಟರ್, ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟರಮಣ ಭಟ್, ಮಲಬಾರ್ ದೇವಸ್ವ ಮಂಡಳಿಯ ಸದಸ್ಯ ಎಂ.ದಾಸಪ್ಪ ಶೆಟ್ಟಿ, ಪುತ್ತಿಗೆ ಪಂಚಾಯ್ತಿ ಸದಸ್ಯ ಸುಬ್ಬಣ್ಣ ಆಳ್ವ ಹಾಜರಿದ್ದರು.
ಕಾಸರಗೋಡಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲಿ ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕಗಳು ರಂಜಿಸಿತು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ಕಾಸರಗೋಡಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಮೆರವಣಿಗೆಯಲ್ಲಿ ಮಕ್ಕಳದೇ ಕಲರವ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಮುದಾಯ ಪೊಲೀಸರ ಆಶ್ರಯದಲ್ಲಿ ನಗರದ 7 ಪ್ರದೇಶಗಳಲ್ಲಿ ಶುಚೀಕರಣ ಯಜ್ಞ ನಡೆಯಿತು.
ಪೋಲಿಸರಿಂದ ಶುಚೀಕರಣ ಯಜ್ಞ
ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಮುದಾಯ ಪೊಲೀಸರ ಆಶ್ರಯದಲ್ಲಿ ನಗರದ 7 ಪ್ರದೇಶಗಳಲ್ಲಿ ಶುಚೀಕರಣ ಯಜ್ಞ ನಡೆಯಿತು.
ಕಾಸರಗೋಡು ಜನರಲ್ ಆಸ್ಪತ್ರೆ, ವಿದ್ಯಾನಗರ ಬಸ್ಸು ನಿಲ್ದಾಣ, ಸಕರ್ಾರಿ ಪ್ರೌಢಶಾಲೆ ವಠಾರ, ತಳಂಗೆರೆ ಸಿರಾಮಿಕ್ಸ್ ರಸ್ತೆ ಮೊದಲಾದ ಪ್ರದೇಶಗಳಲ್ಲಿ ಶುಚೀಕರಣ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಡಿವೈಎಸ್ಪಿ ಕೆ.ಅಬ್ದುಲ್ ಗಫೂರ್, ಸಿ.ಐ.ಕೆ.ಪ್ರೇಮ್ರಾಜ್, ಎಸ್.ಐ.ವಿಶ್ವಂಭರನ್, ಇ.ಚಂದ್ರಶೇಖರನ್ ನಾಯರ್ ಹಾಜರಿದ್ದರು.
ಕಾಸರಗೋಡು ತಾಲೂಕಿನ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯಾಥರ್ಿಗಳಿಂದ ಉಪ್ಪಿನ ಸತ್ಯಾಗ್ರಹದ ಕುರಿತು ನಡೆದ ಪ್ರಾತ್ಯಕ್ಷಿಕೆ- ರೂಪಕ ಗಮನಸೆಳೆಯಿತು.
--
ಕಾಸರಗೋಡು: ದೇಶವನ್ನು ಶಿಥಿಲಗೊಳಿಸುವ ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳ ನಿಮರ್ೂಲನೆಗೆ ದೇಶದ ಜನತೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಶನಿವಾರ ಇಲ್ಲಿ ಕರೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಧ್ವಜಾರೋಹಣಗೊಳಿಸಿ ಅವರು ಮಾತನಾಡಿದರು.
ನೂರಿಪ್ಪತ್ತು ಕೋಟಿಯಷ್ಟು ಜನರಿರುವ ದೇಶವನ್ನು ಭಯೋತ್ಪಾದನೆಯಿಂದ ಬಗ್ಗು ಬಡಿಯಲು ಸಾಧ್ಯವಿಲ್ಲ. ಆದರೆ ವಿಧ್ವಂಸಕ ಶಕ್ತಿಗಳು ಧರ್ಮ, ರಾಜಕೀಯದ ಹೆಸರಲ್ಲಿ ಸಮಾಜದಲ್ಲಿ ಆತಂಕ ಸೃಷ್ಠಿಸುತ್ತಿದೆ. ಈ ರೀತಿಯ ಭಯೋತ್ಪಾದನೆಯಿಂದ ಜನರ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಮುಂಬೈ ಸ್ಫೋಟದ ಬಳಿಕ ವಿಧ್ವಂಸಕ ಚಟುವಟಿಕೆ ದೇಶದಲ್ಲಿ ನಿಂತಿಲ್ಲ. ಈ ಬಗ್ಗೆ ಜನರು ಅತೀವ ಜಾಗ್ರತೆವಹಿಸಬೇಕಿದೆ. ಇದಕ್ಕಾಗಿ ಜನರು ಪೊಲೀಸ್, ಸೈನ್ಯದ ಜತೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ವ್ಯಾಪಕಗೊಳಿಸಲಾಗುವುದು ಎಂದವರು ತಿಳಿಸಿದರು.
ಶಾಸಕರಾದ ಸಿ.ಟಿ.ಅಹಮ್ಮದಾಲಿ, ಕೆ.ಕುಞ್ಞಿರಾಮನ್, ಸಿ.ಎಚ್.ಕುಞ್ಞಂಬು, ಜಿಲ್ಲಾ ಪಂಚಾಯತು ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ, ಜಿಲ್ಲಾಧಿಕಾರಿ ಆನಂದ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ ಹಾಜರಿದ್ದರು.
ಕಾಸರಗೋಡು: ಪೆರ್ಲ ನಲಂದಾ ಕಾಲೇಜಿನ ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಪೆರ್ಲ ಚೆಕ್ ಪೋಸ್ಟ್ನ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಿರೀಶ್ ಧ್ವಜಾರೋಹಣ ಮಾಡಿದರು. ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಉದಯರಾಜ ಅರಳಿತ್ತಾಯ, ಕಾಲೇಜಿನ ಉಪನ್ಯಾಸಕರಾದ ಸುರೇಶ್ ಕೆ.ಎಡನಾಡು, ಹಸೈನಾರ್ ಹಾಜರಿದ್ದರು. ಬಳಿಕ ವಿದ್ಯಾಥರ್ಿಗಳಿಂದ ವಿವಿಧ ಕಾರ್ಯಕ್ರಮಗಳು ಜರುಗಿತು.
ಕಾಸರಗೋಡು: ದೇವತಾರಾಧನೆ ಮತ್ತು ಧಾಮರ್ಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾಲಯಗಳಲ್ಲಿ ಅಂತಹ ಧಾಮರ್ಿಕ ಮೌಲ್ಯದ ದಿನಗಳನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ ಎಂದು ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಹೇಳಿದರು.
ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗುರುವಾರ ಜರುಗಿದ ಶ್ರೀಕೃಷ್ಣ ಜಯಂತಿ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧರ್ಮದ ಮೇರೆ ಮೀರಿದಾಗ ಅವತಾರವೆತ್ತಿದ ಕೃಷ್ಣ ಪರಮಾತ್ಮನು ಧರ್ಮದ ಪುನಃಸ್ಥಾಪನೆ ಮಾಡಿದನು. ಸತ್ಯ, ಧರ್ಮದಿಂದ ಬಾಳಿ ಬದುಕುವ ಜನರ ಏಳಿಗೆಗಾಗಿ ಶ್ರೀಕೃಷ್ಣ ಶ್ರಮಿಸಿದನು ಎಂದೂ ಅವರು ನುಡಿದರು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ವಿದ್ಯಾಥರ್ಿ ಮುಖಂಡ ಪ್ರವೀಣ್ ಕುಮಾರ್ ವರದಿ ವಾಚಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ರವಿಕೃಷ್ಣ ಯು. ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಚಂದ್ರಶೇಖರ ರೈ ನಿರೂಪಿಸಿದರು.
ಜನ್ಮಾಷ್ಟಮಿಯ ಅಂಗವಾಗಿ ಏರ್ಪಡಿಸಿದ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾಥರ್ಿಗಳಿಂದ `ಶ್ರೀಕೃಷ್ಣ ಲೀಲೆ' ಎಂಬ ಯಕ್ಷಗಾನ ಬಯಲಾಟ ಜರುಗಿತು. ವಿದ್ಯಾಥರ್ಿಗಳಾದ ನವನೀತ ಕೃಷ್ಣ.ಯು, ವಿಜೇಶ.ಬಿ, ಅನೀಶ್, ವಿನೀತ್ ಶಂಕರ್.ಎಚ್, ಪ್ರವೀಣ್ ಕುಮಾರ, ಅವಿನಾಶ್, ಅಭಿಲಾಷ್, ರಾಮ ನಾಯ್ಕ, ಶಂಕರ ತೇಜಸ್ವಿ, ಯಜ್ಞೇಶ.ಎಂ, ವಿನಾಯಕ.ಎಂ, ಮಂಜುನಾಥ, ಮನೀಶ್.ಬಿ, ಶಬರೀಶ ಪಾತ್ರವರ್ಗದಲ್ಲಿ ಮಿಂಚಿದರು. ಸುರೇಶ ಆಚಾರ್ಯ ನೀಚರ್ಾಲ್ ಮತ್ತು ಉಂಡೆಮನೆ ಕೃಷ್ಣ ಭಟ್ ಭಾಗವತರಾಗಿ ಸಹಕರಿಸಿದರು. ಬಾಲಕೃಷ್ಣ ಆಚೆಗೋಳಿ, ಈಶ್ವರ ಮಲ್ಲ, ಪ್ರಕಾಶ ನೀಚರ್ಾಲು ಮತ್ತು ಭಾಸ್ಕರ ಕಲ್ಲಕಟ್ಟ ಹಿಮ್ಮೇಳದಲ್ಲಿ ಸಹಕರಿಸಿದರು.
ದಿವಾಣ ಶಿವಶಂಕರ ಭಟ್ ನಿದರ್ೇಶಿಸಿದರು, ದೇವಕಾನ ಕೃಷ್ಣ ಭಟ್ ವಸ್ತ್ರಾಲಂಕಾರದಲ್ಲಿ ಸಹಕರಿಸಿದರು.
ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಇಲ್ಲಿನ ಪಟ್ಲ ಕೋಟೆಕಣಿ ನಿವಾಸಿ ಅಪ್ಪಕುಞ್ಞಿ ಅವರ ಪುತ್ರಿ ರಜಿತ(17) ಸಾವನ್ನಪ್ಪಿದ ಯುವತಿ. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಯುವತಿ ಗುರುವಾರ ಸಾವನ್ನಪ್ಪಿದಳು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ಮಂಜೇಶ್ವರ: ಆಸಿಯಾನ್ ಒಪ್ಪಂದ ವಿರೋಧಿಸಿ ಸಿ.ಪಿ.ಐ. ನೇತೃತ್ವದಲ್ಲಿ ಉಪ್ಪಳದಲ್ಲಿ ಗುರುವಾರ ಸಂಜೆ ಧರಣಿ ನಡೆಯಿತು.
ಸಿ.ಪಿ.ಐ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇ.ಚಂದ್ರಶೇಖರನ್ ಉದ್ಘಾಟಿಸುವರು. ಎಂ. ಸಂಜೀವ ಶೆಟ್ಟಿ ಅಧ್ಯಕ್ಷ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್, ಪಿ.ರಾಘವನ್, ರಾಮಕೃಷ್ಣ ಕಡಂಬಾರು, ಎಂ.ಜಿ.ಹೆಗ್ಡೆ, ಲಾರೆನ್ಸ್ ಡಿ' ಸೋಜಾ, ಜಯರಾಮ, ನಯನಾ ಶೆಟ್ಟಿ, ವಾಣಿಶ್ರೀ, ಆನಂದ ಶೆಟ್ಟಿ, ಸುದಾನಂದ, ಎಸ್.ರಾಮಚಂದ್ರ ಹಾಜರಿದ್ದರು.
ಮಂಜೇಶ್ವರ: ಇಲ್ಲಿನ ಹೊಸಂಗಡಿಯಲ್ಲಿ ಮಟ್ಕಾದಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 1,435 ರೂ. ವಶಪಡಿಸಿಕೊಳ್ಳಲಾಗಿದೆ. ಹೊಸಂಗಡಿಯ ತಾರಾನಾಥ, ಚಂದ್ರಹಾಸ, ಅಂಗಡಿಪದವು ನಿವಾಸಿ ಪ್ರಕಾಶ, ವಿಶ್ವರಾಜ್, ಸುನಿಲ್ ಎಂಬವರು ಬಂಧಿತರು.
ಕಾಸರಗೋಡು: ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಇದೇ 17ರಂದು ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮ ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ನಡೆಯುವ ಸಮಾರಂಭವನ್ನು ಶಾಸಕ ಸಿ.ಎಚ್.ಕುಞ್ಞಂಬು ಉದ್ಘಾಟಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ ಪ್ರಶಸ್ತಿ ವಿತರಿಸುವರು. ಉಳಿಯತ್ತಾಯ ವಿಷ್ಣು ಆಸ್ರ, ಡಾ.ಕೆ.ಕಮಲಾಕ್ಷ, ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ ಮತ್ತಿತರರು ಭಾಗವಹಿಸುವರು.
ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕೇರಳ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ.ಮಾರಾರ್ ಉದ್ಘಾಟಿಸುವರು. ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟರಮಣ ಭಟ್ ಅಧ್ಯಕ್ಷತೆ ವಹಿಸುವರು. ಪಾತರ್ಿಸುಬ್ಬ ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷ ಶಂಕರ ರೈ ಮಾಸ್ಟರ್, ಕೇಶವ ಶೆಟ್ಟಿ ಆದೂರು ಮತ್ತು ಇತರರು ಭಾಗವಹಿಸುವರು.
ಮಂಜೇಶ್ವರ: ಇಲ್ಲಿನ ದೈಗೋಳಿ ಭಜನಾ ಮಂದಿರ ಸಮೀಪದ ಕೊಳವೆ ಬಾವಿಯನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಬೇಕು ಎಂದು ಸ್ಥಳೀಯ ಬಿ.ಜೆ.ಪಿ. ಮತ್ತು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಕೊಳವೆ ಬಾವಿ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಫಲಕಾರಿಯಾಗಿಲ್ಲ ಎಂದೂ ಅದು ತಿಳಿಸಿದೆ.
ಕಾಸರಗೋಡು: ಕೇರಳದ 4 ಜಿಲ್ಲೆಗಳಲ್ಲಿ ರೋಗಬಾಧಿತ 1 ಕೋಟಿ ತೆಂಗಿನ ಮರಗಳನ್ನು ಕಡಿದುರುಳಿಸಿ ಅಲ್ಲಿ ಅತ್ಯಧಿಕ ಇಳುವರಿ ನೀಡುವ ತೆಂಗಿನ ಗಿಡಗಳನ್ನು ನೆಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನಸಭಾ ಉಪಸಮಿತಿಯ ಅಧ್ಯಕ್ಷ ರಾಜಾಜಿ ಮ್ಯಾಥ್ಯೂ ಥೋಮಸ್ ತಿಳಿಸಿದ್ದಾರೆ.
ಇಲ್ಲಿನ ಸಿಪಿಸಿಆರ್ಐನಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೆಂಗಿನ ಮರಗಳನ್ನು ಕಡಿದು ಹಾಕಲು ಪ್ರತಿ ಮರಕ್ಕೆ 500 ರೂ.ಗಳಂತೆ ರಾಜ್ಯದಲ್ಲಿ 500 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ 250 ಕೋಟಿ ರೂ. ಸಕರ್ಾರ ಮತ್ತು 250 ಕೋಟಿ ರೂ. ತೆಂಗು ಅಭಿವೃದ್ಧಿ ಮಂಡಳಿ ವಿನಿಯೋಗಿಸಲಿದೆ.
ತೆಂಗಿನಿಂದ ಮೌಲ್ಯ ವಧರ್ಿತ ಉತ್ಪನ್ನಗಳ ತಯಾರಿಯ ಬಗ್ಗೆ ನಿಗಾ ವಹಿಸಲಾಗುವುದು ಎಂದವರು ವಿವರಿಸಿದರು.
ಸಿ.ಕೆ.ಪದ್ಮನಾಭನ್, ಕೆ.ಮಹಮ್ಮದ್, ಕೃಷಿ ಅಧಿಕಾರಿ ಶಿವಪ್ರಸಾದ್ ಹಾಜರಿದ್ದರು.
ಕಾಸರಗೋಡು: ದೇವ ಭಾಷೆ ಸಂಸ್ಕೃತ ಮೂಲೆಗುಂಪಾಗುತ್ತಿದೆ. ಅದರ ಪುನರುತ್ಥಾನ ಕಾರ್ಯ ಆಗಬೇಕಿದೆ. ಸಂಸ್ಕೃತದ ಆಶ್ರಯದಲ್ಲಿ ವಿವಿಧ ಭಾಷೆಗಳು ಬೆಳೆಯುತ್ತಿರುವುದು ಸಂತಸದ ವಿಚಾರ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ರಾಮಕೃಷ್ಣ ಭಟ್ ಬೇಳ ಅಭಿಪ್ರಾಯಪಟ್ಟರು.
ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಸಂಸ್ಕೃತ ಕೌನ್ಸಿಲ್ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಸಂಸ್ಕೃತ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಿಯಡ್ಕ ಬಿ.ಆರ್.ಸಿಯ ಬಿ.ಪಿ.ಒ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಉಂಡೆಮನೆ ಗಣಪತಿ ಭಟ್ ಸನ್ಮಾನಿತರ ಕಿರು ಪರಿಚಯ ಮಾಡಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಮತ್ತು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಜರಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಸಂಸ್ಕೃತ ಕೌನ್ಸಿಲ್ ಕಾರ್ಯದಶರ್ಿ ಸುಕುಮಾರ ಬೆಟ್ಟಂಪಾಡಿ ವಂದಿಸಿದರು. ನವಜೀವನ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಡಾ.ಎಸ್.ಸದಾಶಿವ ಭಟ್ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂಸ್ಕೃತ ಶಾಸ್ತ್ರ ಪ್ರದಶರ್ಿನಿಯನ್ನು ಆಯೋಜಿಸಲಾಗಿತ್ತು. ಸಂಸ್ಕೃತ ಸಂಘಗಾನಂ, ಗಾನಾಲಾಪನಂ, ರಸಪ್ರಶ್ನೆ, ಅಷ್ಟಪದಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ದಿನಾಂಕ 10/08/09 ರಂದು 15:00 ಗಂಟೆಗೆ ಕಾರು ನಂಬ್ರ ಕೆಎ 20 ಎನ್ 5727ನ್ನು ಅದರ ಚಾಲಕ ಕೃಷ್ಣ ಪೂಜಾರಿ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ನೀರೆ ಗ್ರಾಮದ ಅನಂತಬೆಟ್ಟು ಎಂಬಲ್ಲಿ ಸಾರ್ವಜನಿಕ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ತೂಫಾನ್ ಟ್ರಾಕ್ಸ್ ನಂಬ್ರ ಕೆಎ 27 ಎ 2827ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಘಟನೆಯಲ್ಲಿ ಯಾರಿಗೂ ಗಾಯವಾಗಿರುವುದಿಲ್ಲ. ಈ ಅಪಘಾತದ ಬಗ್ಗೆ ಹಾವೇರಿ ತಾಲೂಕಿನ ಹೊಸಳ್ಳಿ ಸವಣೂರು ವಾಸಿ ಶಿವರುದ್ರಪ್ಪ (35 ವರ್ಷ) ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 112/09 ಕಲಂ 279 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 09/08/09 ರಂದು ಮಧ್ಯಾಹ್ನ 15:30 ಘಂಟೆಗೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಿ ನಗರದ ವಾಸಿ ಸೈಯದ್ ಕರೀಮ್ (35 ವರ್ಷ)ರವರು ಬಸ್ಸು ನಂಬ್ರ ಕೆಎ 20 ಬಿ 4689ನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸುಮಾರು 08:00 ಗಂಟೆ ಸಮಯಕ್ಕೆ ಹೇರಾಡಿ ಬಸ್ಸುಸ್ಟ್ಯಾಂಡ್ ಬಳಿ ತಲುಪುವಾಗ ಆರೋಪಿ ರಮೇಶ್ ಎಂಬಾತನು ಶ್ರೀ ದುಗರ್ಾಂಬ ಬಸ್ಸನ್ನು ಚಲಾಯಿಸಿಕೊಂಡು ಬಂದು ಕರೀಮ್ರವರ ಬಸ್ಸಿಗೆ ಅಡ್ಡ ನಿಲ್ಲಿಸಿಕೊಂಡು ಒಂದು ಕೋಲಿನಿಂದ ಅವರ ಬಲಕೈಗೆ ಹೊಡೆದಿರುವುದಲ್ಲದೇ ಇನ್ನು ಮುಂದಕ್ಕೆ ಓವರ್ ಟೇಕ್ ಮಾಡಿಕೊಂಡು ಬಂದರೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಸೈಯದ್ ಕರೀಮ್ರವರು ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/09 ಕಲಂ 341, 324, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.